ರಾಜೇಂದ್ರ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ

ಕೊರಟಗೆರೆ:

    ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ರಾಜೇಂದ್ರರ ಗೆಲುವಿಗೆ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತುಮಕೂರು ನಗರಸಭಾ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ಪಕ್ಷ ಹಾಗೂ ದಲಿತ ಮುಖಂಡ ವಾಲೆಚಂದ್ರಯ್ಯ ತಿಳಿಸಿದರು.

ಅವರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್.ರಾಜೇಂದ್ರ ಪಕ್ಷದ ಹಿರಿಯ ನಾಯಕರು ಗಳಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ ಸೇರಿದಂತೆ ತುಮಕೂರಿನ ಎಲ್ಲಾ ನಾಯಕರುಗಳ ಆಶೀರ್ವಾದದಿಂದ ಅಭ್ಯರ್ಥಿಯಾಗಿದ್ದಾರೆ. ಅವರ ತಂದೆ ಮಾಜಿ ಶಾಸಕ ಡಿಸಿಸಿ ಬ್ಯಾಂಕ್‍ಅಧ್ಯಕ್ಷ ಕೆ.ಎನ್.ರಾಜಣ್ಣನವರಂತೆ ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿದ್ದು, ಕ್ರಿಪ್ಕೋ ರಾಷ್ರೀಯ ಉಪಾಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಟಿಎಪಿಸಿಎಂಎಸ್ ಅದ್ಯಕ್ಷರಾಗಿ ರೈತರಿಗೆ, ಬಡವರಿಗೆ, ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿದರೆ, ಸಾರ್ವಜನಿಕರಿಗೆ, ಬಡವರಿಗೆ, ದಲಿತರಿಗೆ ಹೆಚ್ಚಿನ ಸೇವೆ ದೊರೆತಂತಾಗುತ್ತದೆ ಎಂದರು.

ನಾನು ಮದಿಗ ಜನಾಂಗದ ಮುಖಂಡನಾಗಿದ್ದು, ಹಲವು ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಇದ್ದೇನೆ. ಜಿಲ್ಲೆಯ ಜನಾಂಗದ ಕಷ್ಟಗಳಿಗೆ ಸ್ಪಂದಿಸಿ ಹೋರಾಟ ಮಾಡುತ್ತಿದ್ದೇನೆ. ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸ್ವರ್ಧಿಸಿದ್ದೇನೆ. ಈಗ ಕಾಂಗ್ರೆಸ್ ಮುಖಂಡನಾಗಿ ತುಮಕೂರು ಜಿಲ್ಲಾದ್ಯಂತ ಓಡಾಡಿ ಮತದಾರರ, ಅದರಲ್ಲೂ ದಲಿತ ಮತದಾರರ ಮನ ಒಲಿಸಿ ಆರ್.ರಾಜೇಂದ್ರ ಪರವಾಗಿ ಮತ ಯಾಚಿಸುತ್ತೇನೆ ಎಂದ ಅವರು, ಆರ್.ರಾಜೇಂದ್ರರವರು ಅವರ ತಂದೆಯಂತೆ ದಲಿತರಿಗೆ, ಹಿಂದುಳಿದ ವರ್ಗದವರಿಗೆ, ಅಲ್ಪಸಂಖ್ಯಾತರಿಗೆ, ಎಲ್ಲಾ ವರ್ಗದವರಿಗೆ ನ್ಯಾಯ ಒದಗಿಸಲಿದ್ದಾರೆ. ಆದ್ದರಿಂದ ಅವರ ಗೆಲವು ಅಗತ್ಯ ಎಂದರು. ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಶಿವರಾಮಯ್ಯ, ಮಲಪನಹಳ್ಳಿ ನಾಗೇಶ್, ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link