ನವದೆಹಲಿ
ಸಾಕಷ್ಟು ವಿವಾದದಿಂದಲೆ ಸುದ್ದಿಯಾಗಿ ಭರ್ಜರಿ ಯಶಸ್ಸು ಕಾಣುತ್ತಿರುವ ಪಠಾಣ್ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಒಂದು ವರ್ಗದ ಜನರು ಆಗ್ರಹಿಸಿದ್ದರು. ಆದರೆ,ಅದ್ಯಾವುದು ಕೆಲಸ ಮಾಡಿಲ್ಲ. ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.
ಸಿನಿಮಾ ಯಶಸ್ಸು ಬೈಕಾಟ್ ಗ್ಯಾಂಗ್ ಗೆ ಕೊಟ್ಟ ಮರ್ಮಾಘಾತವಾಗಿದೆ ಮತ್ತು ಇನ್ನು ಮುಂದೆ ಸಿನಿಮಾವನ್ನು ಸಿನಿಮ ರೀತಿ ನೋಡುವುದನ್ನು ಕಲಿಯಬೇಕೆ ಹೊರತು ಬೇರೆ ದೃಷ್ಠಿಕೋನದಲ್ಲಿ ಅಲ್ಲ ಎನ್ನುವುದು ಸಿನಿಮಾ ಮಂದಿಯ ವಾದವಾಗಿದೆ ಇದಕ್ಕೆ ಪ್ರಕಾಶ್ ರಾಜ್ ಅವರು ಕೂಡ ಧ್ವನಿ ಸೇರಿಸಿದ್ದಾರೆ.
ಆದರೆ, ಈ ಚಿತ್ರ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೂರ್ಖರ ಮತ್ತು ಮತಾಂಧರ ಪಠಾಣ್ನ ಬ್ಯಾನ್ ಕನಸು ನನಸಾಗಲ್ಲಿಲ್ಲ. ಅವರಿಗೆ ಮೋದಿ ಸಿನಿಮಾಗೆ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಸಲು ಸಾಧ್ಯವಾಗಿಲ್ಲ. ಅವರು ಬೊಗಳುತ್ತಾರೆ, ಕಚ್ಚುವುದಿಲ್ಲ’ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
