ಕುಣಿಗಲ್
ಈ ಬಾರಿ ಊಹಿಸದಷ್ಟು ಮಳೆ ಬಿದ್ದು ಧರೆ ತಂಪರೆದರೆ, ಅಷ್ಟೇ ಹೆಚ್ಚಾಗಿ ಚಳಿಗಾಲ ಜನರಿಗೆ ಚಳಿಹಿಡಿಸಿತ್ತು, ಇದು ಸಾಲದು ಎಂಬಂತೆ ಇದೀಗ ಬೇಸಿಗೆಯ ಸುಡುಬಿಸಿಲು ದಿನೆ ದಿನೆ ಹೆಚ್ಚುವ ಮೂಲಕ ಜನರ ತಲೆಗೆ ಬಿಸಿಲು ನೆತ್ತಿಗೇರುತ್ತಿದ್ದು ವಿವಿಧ ಕೆಲಸ ಕಾರ್ಯಗಳಿಗೆ ದಿನನಿತ್ಯ ಸಹಸ್ರಾರು ಜನ ತಾಲೂಕು ಕೇಂದ್ರ ಕುಣಿಗಲ್ ಪಟ್ಟಣಕ್ಕೆ ಬರುವ ಜನರಿಗೆ, ಕೆ.ಎಸ್ .ಆರ್. ಟಿ .ಸಿ. ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ಸಾರ್ವಜನಿಕರು, ವಿದ್ಯಾರ್ಥಿಗಳು ನಿತ್ಯ ಪರದಾಡುತ್ತ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಕೂಲಿ ಕಾರ್ಮಿಕರು, ಅಂಗವಿಕಲರು ಸೇರಿದಂತೆ ಗ್ರಾಮೀಣ ಪ್ರದೇಶದ ಜನರು ಮುಂಜಾನೆಯಿಂದ ಸಂಜೆಯವರೆಗೂ ಕುಣಿಗಲ್ ಪಟ್ಟಣಕ್ಕೆ ಬಂದು ಇಲ್ಲಿಂದ ಜಿಲ್ಲಾ ಮತ್ತು ರಾಜ್ಯಧಾನಿಗೆ ಕೆಲಸ ಕಾರ್ಯಗಳಿಗೆ ತೆರಳಿ ವಾಪಸ್ ಆಗುವುದು ಅದೇ ರೀತಿ ವಿದ್ಯಾರ್ಥಿಗಳು ಕಾಲೇಜು ಮತ್ತು ಉನ್ನತ ವ್ಯಾಸಂಗಕ್ಕಾಗಿ ಇದೇ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಬಂದು ಹೋಗಲೇಬೇಕಾದ ಪರಿಸ್ಥಿತಿ ಇದ್ದರೂ ಸಹ ಇಲ್ಲಿ ಸಮರ್ಪಕ ಸ್ವಚ್ಛತೆಗೆ ಹೊತ್ತುಕೊಡದ ಹಿನ್ನೆಲೆಯಲ್ಲಿ ಇಲ್ಲಿ ಅಳವಡಿಸಿರುವ ಅವೈಜ್ಞಾನಿಕ ಕಸದ ಬುಟ್ಟಿ ತುಕ್ಕಿಡಿದು ಸೊಳ್ಳೆ ಉಂಗುರಗಳಿAದ ತುಂಬಿ ಅವುದುರ್ನಾಥ ಬೀರುತ್ತಿವೆ.
ಇದು ಇಲ್ಲದಂತಾಗಿರುವ ಶುದ್ಧ ಕುಡಿಯುವ ನೀರಿನ ಯಂತ್ರ :
ಇಲ್ಲಿ ಕುಡಿಯುವ ನೀರಿಗಾಗಿ ವಾಟರ್ ಫಿಲ್ಟರ್ ಅನ್ನು ಅಳವಡಿಸಿದ್ದರು ಆದರೆ ಇದು ಕೆಟ್ಟು ಹೋಗಿ ಹಲವು ತಿಂಗಳಾಗಿದೆ ಸರ್ಕಾರದ ಹಣ ಅಳವಡಿಸಿದರೆ ಮಾತ್ರ ಮುಗಿಯಿತೆ ಅವುಗಳನ್ನು ನಿರ್ವಹಣೆ ಮಾಡುವರು ಯಾರು ಎಂಬುದು ಪ್ರಯಾಣಿಕರ ಪ್ರಶ್ನೆಯಾಗಿದೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ಈ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಪೂರೈಕೆ ಇಲ್ಲದೆ ಪರದಾಡುವಂತಾಗಿದೆ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ ದಿನ ಎದ್ದು ನೋಡುವ ಸಂಬಂಧ ಪಟ್ಟ ಅಧಿಕಾರಿಗಳು ಕಂಡು ಕಾಣದೆ ಇರುವವರಂತೆ ನಡೆದುಕೊಳ್ಳುತ್ತಿರುವುದು
ಕೂಲಿ ಕಾರ್ಮಿಕರು ಅಂಗವಿಕಲರು ಮಧ್ಯಮ ವರ್ಗದ ಕುಟುಂಬಗಳು ಕುಡಿಯುವ ನೀರಿಗಾಗಿ ೨೦ ರೂಪಾಯಿಗಳನ್ನು ಬರಿಸಬೇಕಾಗುತ್ತದೆ ಪಟ್ಟಣಕ್ಕೆ ಬಂದರೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ ನಮಗೆ ಊಟ ತಿಂಡಿ ಆ ಖರ್ಚಿನ ಜೊತೆಗೆ ತಲೆದೋರಿರುವುದು ವಿಪರ್ಯಾಸ, ಕೂಡಲೇ ಶುದ್ಧ ಕುಡಿಯುವ ಯಂತ್ರವನ್ನು ಸರಿಪಡಿಸಿ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಕೈ ತೊಳೆಯಲು ಮುಖ ತೊಳೆಯಲು ಇದ್ದ ವಾಷ್ ಬೇಷನ್ ಮಾಯ : ,,,,,,,,
ಇಲ್ಲಿ ಹಿಂದೆ ವಾಶ್ ಬೇಷನ್ ಅಳವಡಿಸಲಾಗಿತ್ತು ಅದರಲ್ಲಿ ಬಸ್ಸಿನಲ್ಲಿ ಬಂದಂತಹ ಪ್ರಯಾಣಿಕರು ಕೈ ತೊಳೆದುಕೊಳ್ಳುವುದು ಮುಖ ತೊಳೆದುಕೊಳ್ಳುವಂತಹ ವ್ಯವಸ್ಥೆಗೆ ಅನುಕೂಲವಾಗಿತ್ತು ವಾಶ್ ಬೇಷನ್ಗೆ ಸಮರ್ಪೋವಾಗಿ ನೀರು ಬರದೆ ಹಾಳಾಗಿದ್ದು ಅದನ್ನು ಈಗ ತೆಗೆದು ಹಾಕಿದ್ದಾರೆ ಕೈ ತೊಳೆಯಲು ನೀರಿಲ್ಲದೆ ಪರದಾಡುತ್ತಿದ್ದಾರೆ ಪ್ರಯಾಣಿಕರು, ವಾಶ್ ಬೇಸನ್ ಕೂಡಲಿ ಅಳವಡಿಸುವಂತೆ ಪ್ರಯಾಣಿಕರು ವಿದ್ಯಾರ್ಥಿಗಳು ಆಗ್ರಹ.
ಬಸ್ ನಿಲ್ದಾಣದ ನಾಮಫಲಕವೇ ಮಾಯ : ,,,,,,
ಯಾವುದೇ ಬಸ್ ನಿಲ್ದಾಣಗಳು ಇದ್ದರೂ ಆ ಊರಿನ ಶೋಭೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಮುದ್ದಾದ ಅಕ್ಷರದಲ್ಲಿ ಬಸ್ ನಿಲ್ದಾಣದ ಹೆಸರನ್ನು ಅಳವಡಿಸುವುದು ವಾಡಿಕೆ ಆದರೆ ಇಲ್ಲಿನ ಕೆ .ಎಸ್. ಆರ್. ಟಿ. ಸಿ. ಬಸ್ ನಿಲ್ದಾಣದಲ್ಲಿ ಅದ್ಯಾಕೋ ಏನೋ ನಾಮ ಫಲಕವೇ ಇಲ್ಲದಂತಾಗಿರುವುದು ಕುಣಿಗಲ್ ಪಟ್ಟಣಕ್ಕೆ ಒಂದು ರೀತಿ ಅವಮಾನವಾಗುತ್ತಿದ್ದು ನೆರೆಹೊರೆಯ ತಾಲೂಕು ಕೇಂದ್ರಗಳಿಗೆ ಹೋದರೆ ಕಣ್ಣು ತುಂಬಿಕೊಳ್ಳುವAತಹ ಮೂಲಭೂತ ಸೌಕರ್ಯಗಳೊಂದಿಗೆ ನಾಮಪಕಗಳನ್ನು ಅಳವಡಿಸಿಕೊಂಡು ಇರುವಂತಹ ಬಸ್ ನಿಲ್ದಾಳಗಳನ್ನು ಕಾಣಬಹುದಾಗಿದೆ.
ಅವೈಜ್ಞಾನಿಕ ಕಸದ ಬುಟ್ಟಿಗಳು: ,,,,,,,,,
ಇಂದಿನ ನಾಜೋಕು ಕಾಲ ಘಟ್ಟದಲ್ಲಿರುವ ಪ್ರಯಾಣಿಕರ ನಡುವೆ ಕಬ್ಬಿಣದ ಡ್ರಮ್ಗಳನ್ನು ಕಟ್ಟು ಮಾಡಿ ಅಸಮರ್ಪಕವಾಗಿ ಅಳವಡಿಸಿ ಅವುಗಳು ತುಕ್ಕು ಹಿಡಿದು ದುರ್ನಾಥ ಬೀರುತ್ತಿವೆ, ಬಸ್ ನಿಲ್ದಾಣದಲ್ಲಿ ಇಟ್ಟಿರುವ ಬೃಹತ್ ಗಾತ್ರದ ಕಸದ ಬುಟ್ಟಿಗಳು ಪ್ರಯಾಣಿಕರಿಗೆ ಇರುಸು, ಮುರುಸು ಉಂಟು ಮಾಡುತ್ತಾ ಅತಿಯಾದ ಭೂಪ್ರದೇಶವನ್ನೇ ಆಕ್ರಮಿಸಿಕೊಂಡಿವೆ, ಹಸಿ ಪದಾರ್ಥಗಳನ್ನು ಹಾಕುವುದರಿಂದ ಸೊಳ್ಳೆ ಗುಂಗುರಗಳಿAದ ಕೂಡಿ ಸೊಳ್ಳೆಗಳ ಕಾಟ ವಿಪರೀತವಾಗುತ್ತಿವೆ.
ರಾತ್ರಿ ಬೆಳಕಿನ ಸಮಸ್ಯೆ-ನಾಯಿಗಳ ಕಾಟ
ನಿಲ್ದಾಣದಲ್ಲಿ ಗುಂಪು ಗುಂಪಾಗಿ ನಾಯಿಗಳ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದ್ದರು ಅದರ ಬಗ್ಗೆ ಮುತ್ತವರ್ಜಿ ವಹಿಸದ ಅಧಿಕಾರಿಗಳು ರಾತ್ರಿ ವೇಳೆ ಪ್ರಯಾಣಿಕರು ಬಂದು ಬಸ್ ನಿಲ್ದಾಣ ಇಳಿದು ಹೊರಬರಲು ಬಂದಾಗ ಬೆಳಕು ಇಲ್ಲದೇ ಇರುವುದು ಒಂದು ಸಮಸ್ಯೆ ,ಮತ್ತೊಂದೆಡೆ ಮೈ ಮೇಲೆ ಎರಗುವಂತೆ ಬೊಗಳುತ್ತಾ ಬರುವ ನಾಯಿಗಳ ಆರ್ಭಟಕ್ಕೆ ಬೆಚ್ಚಿ ಓಡಲು ಹೋಗಿ ಬಿದ್ದು ಗಾಯ ಮಾಡಿಕೊಂಡ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಸ್ವಚ್ಛತೆಯನ್ನು ಮರೆತ ಬಸ್ ನಿಲ್ದಾಣ : ,,,,,
ಸಮರ್ಪಕವಾಗಿ ನೀರು ಇಲ್ಲದ ಕಾರಣ ಶೌಚಾಲಯ ದುರ್ನಾಥ ಬೀರುತ್ತಿದೆ, ನೆಲ್ಲಿ ವ್ಯವಸ್ಥೆ ಸರಿಯಾದ ರೀತಿಯಲ್ಲಿ ನೀರು ಅರಿದು ಕಾರ್ಯನಿರ್ವಹಿಸದೆ ಹಾಳಾಗಿ ಹೋಗಿವೆ.
ನಿತ್ಯ ಸಹಸ್ರ ಸಂಖ್ಯೆಯಲ್ಲಿ ಆಗಮಿಸುವ ಪ್ರಯಾಣಿಕರಿಗೆ ಈ ಬಸ್ ನಿಲ್ದಾಣ ಸ್ವಚ್ಛತೆ ಇಲ್ಲದಿರುವುದು ಒಂದು ರೀತಿಯ ರೋಗ ಹರಡುವ ತಾಣವಾಗಿದೆ ಎಲ್ಲೆಂದರಲ್ಲಿ ತ್ಯಾಜ್ಯ ವಸ್ತುಗಳು ಬಿದ್ದು ಕೊಳೆತು ನಾರುತಿವೆ,, ಈ ಬಸ್ ನಿಲ್ದಾಣ ನಿರ್ಮಾಣವಾಗಿ ಸುಮಾರು ೧೮ ವರ್ಷವಾಗಿದೆ ಅಷ್ಟೇ, ಇದೀಗ ಸಮರ್ಪಕ ನಿರ್ವಹಣೆ ಇಲ್ಲದೆಪಾಳು ಬಿದ್ದ ಮನೆಯೋಪಾದಿಯಲ್ಲಿ ಗೋಚರಿಸುತ್ತಿರುವುದು ವಿಪರ್ಯಾಸ ಸ್ವಚ್ಛತೆ ಇಲ್ಲದಿರುವುದರಿಂದ
ಅದೆಷ್ಟೋ ಪ್ರಯಾಣಿಕರು ಕೂರಲು ನಿಲ್ಲಲು ಅಸಹ್ಯ ಪಡುವಂತ ವಾತಾವರಣ ಇದೆ ಬರೆ ಕಟ್ಟಡ ಮತ್ತು ಬೃಹತ್ ಭೂಪ್ರದೇಶವನ್ನು ಹೊಂದಿರುವ ಈ ಸ್ಥಳ ಬೇರೆ ತಾಲೂಕು ಕೇಂದ್ರಗಳಲ್ಲಿ ಕಾಣಲು ಸಾಧ್ಯವಿಲ್ಲ ಅಷ್ಟು ಒಳ್ಳೆಯ ದೊಡ್ಡ ಕಟ್ಟಡವಿದೆ ಮತ್ತು ಜಾಗವು ವಿಶಾಲವಾಗಿದೆ ಆದರೆ ಕಟ್ಟಡದ ನಿರ್ವಹಣೆ ಮತ್ತು ಸ್ವಚ್ಛತೆಯನ್ನು ಕಾಪಾಡುವಲ್ಲಿ ಇಲ್ಲಿನ ಬಸ್ ನಿಲ್ದಾಣ ಅಧಿಕಾರಿಗಳ ನಿರ್ಲಕ್ಷಕ್ಕೆ ತುತ್ತಾಗಿದೆ.
ಈ ಬಗ್ಗೆ ಶಾಸಕರು ಸೇರಿದಂತೆ ಮೇಲ್ವರ್ಗದ ಅಧಿಕಾರಿಗಳು ಎಚ್ಚೆತ್ತು ಇನ್ನಾದರೂ ಪಟ್ಟಣದ ಹೃದಯ ಭಾಗದಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣವನ್ನು ದಿನನಿತ್ಯ ಸ್ವಚ್ಛತೆ ಯಿಂದ ಕಾಪಾಡಿಕೊಳ್ಳುವುದರ ಜೊತೆಗೆ ಹಾಗಿಂದಾಗೆ ಸಂಬAಧಪಟ್ಟವರು ಪರಿಶೀಲಿಸಿ ಸ್ವಚ್ಛತೆಗೆ ಒತ್ತುಕೊಟ್ಟು ಮೂಲಭೂತ ಸೌಕರ್ಯಗಳೊಂದಿಗೆ ಜನರ ಸೇವೆಗೆ ಮುಂದಾಗಲಿ ಎಂಬುದು ನಾಗರೀಕರ ಒತ್ತಾಸೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
