ತುಮಕೂರು:
ರಾಜ್ಯ ಸರ್ಕಾರ ನಾಲ್ವರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ತುಮಕೂರು ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಕೆಎಎಸ್(ಸೂಪರ್ ಟೈಮ್ ಸ್ಕೇಲ್) ಅಧಿಕಾರಿ ಡಾ. ಜಗದೀಶ್ ಕೆ. ನಾಯಕ್ ಅವರನ್ನು ನೇಮಿಸಲಾಗಿದೆ. ಪಾಲಿಕೆ ಆಯುಕ್ತ ರಾಗಿದ್ದ ಐಎಎಸ್ ಬಿ.ವಿ.ಅಶ್ವಿಜ ಅವರ ಸ್ಥಾನವನ್ನು ಜಗದೀಶ್ ನಾಯಕ್ ಅಲಂಕರಿಸಲಿದ್ದಾರೆ.