ನಿಯತಿ ಸಹಕಾರಿ ಸಂಘದ ನಾಲ್ಕನೇ ವಾರ್ಷಿಕ ಮಹಾಸಭೆ

ಬೆಳಗಾವಿ :

    ನಿಯತಿ ಸಹಕಾರಿ ಸಂಘದ ನಾಲ್ಕನೇ ವಾರ್ಷಿಕ ಮಹಾಸಭೆಯು ಬೆಳಗಾವಿ ನಗರದ ಮಧುಬನ ಹೋಟೆಲ್ ಸಭಾಂಗಣದಲ್ಲಿ ಜರುಗಿತು.

    ಸೋನಾಲಿ ಸರನೋಬತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಉದ್ಯಮಿ ಹಾಗೂ ಲೇಖಕರಾದ ಆನಂದ ಗೋಗಟೆ ಸಭೆಯ ಗೌರವ ಅತಿಥಿಯಾಗಿ ಆಸೀನರಾಗಿದ್ದರು.

     ಸಂಸ್ಥೆಯ ಆಯವ್ಯಯ ಪತ್ರವನ್ನು ನಿರ್ದೇಶಕರಾದ ಗಜಾನನ ರಾಮನಕಟ್ಟಿ ವಾಚಿಸಿದರು. ಲಾಭ ಮತ್ತು ನಷ್ಟದ ಹಿರಿಯ ವ್ಯವಸ್ಥಾಪಕಿ ಶ್ರೀಮತಿ ಅನುಷಾ ಜೋಶಿ ಸಭೆಗೆ ತಿಳಿಸಿದರು. 2024-25 ರ ಆರ್ಥಿಕ ವರ್ಷದ ಬಜೆಟ್ ವ್ಯವಸ್ಥಾಪಕಿ ದೀಪಾ ಪ್ರಭುದೇಸಾಯಿ ಸಭೆಯಲ್ಲಿ ಮಂಡಿಸಿದರು.

     ಹಿರಿಯ ಸಲಹೆಗಾರರಾದ ವಿಜಯ ಮೋರೆ ಹಾಗೂ ರುದ್ರಗೌಡ ಪಾಟೀಲರು ಸಮಾಜದ ಭವಿಷ್ಯದ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮತ್ತು ಯೋಜನೆಗಳನ್ನು ಹಂಚಿಕೊಂಡರು. ಉಪಾಧ್ಯಕ್ಷ ಭರತ್ ರಾಥೋಡ್, ನಿರ್ದೇಶಕರಾದ ಡಾ.ಸಮೀರ್ ಸರ್ನೋಬತ್, ರೋಹನ್ ಜುವಳಿ, ರೋಹಿತ್ ದೇಶಪಾಂಡೆ, ಪ್ರಕಾಶ್ ಮುಗಳಿ, ಪ್ರಸಾದ್ ಘಾಡಿ, ಅನುಪ್ ಜವಾಲ್ಕರ್ ಉಪಸ್ಥಿತರಿದ್ದರು. ನಿರ್ದೇಶಕರಾದ ಭೂಷಣ್ ರೇವಣಕರ್ ವಂದಿಸಿದರು. ಕಿಶೋರ ಕಾಕಡೆ ನಿರೂಪಿಸಿದರು

Recent Articles

spot_img

Related Stories

Share via
Copy link