‘ಲಕ್ಷ್ಮೀ ಬಾರಮ್ಮ’ ಕೊನೆಯ ಎಪಿಸೋಡ್ : ಏನು ಟ್ವಿಸ್ಟ್‌ ಇದೆ ಗೊತ್ತಾ…?

ಬೆಂಗಳೂರು :

    ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಾ ಇದ್ದ ‘ಲಕ್ಷ್ಮೀ ಬಾರಮ್ಮ’  ಧಾರಾವಾಹಿ ಏಪ್ರಿಲ್ 11ರಂದು ತನ್ನ ಕೊನೆಯ ಎಪಿಸೋಡ್​ನ ಪ್ರಸಾರ ಮಾಡಲಿದೆ. ಈ ಧಾರಾವಾಹಿ ಈವರೆಗೆ ಬರೋಬ್ಬರಿ 600ಕ್ಕೂ ಅಧಿಕ ಎಪಿಸೋಡ್​ಗಳನ್ನು ಪೂರ್ಣಗೊಳಿಸಿದೆ ಅನ್ನೋದು ವಿಶೇಷ. ಈ ಧಾರಾವಾಹಿ ಯಾವ ರೀತಿಯಲ್ಲಿ ಕೊನೆಯಾಗಲಿದೆ ಎನ್ನುವ ಕುತೂಹಲ ಮೂಡಿದೆ. ಈ ಕುತೂಹಲ ಹೆಚ್ಚಿಸುವಂಥ ಪ್ರೋಮೋನ ರಿಲೀಸ್ ಮಾಡಲಾಗಿದೆ. ಇದರಲ್ಲಿ ಒಂದು ಶಾಕಿಂಗ್ ಟ್ವಿಸ್ಟ್​ನ ಕೊಡಲಾಗಿದೆ.

   ‘ನಾನು ಏನು ನಡೆಯಬಾರದು ಎಂದುಕೊಂಡಿದ್ದೆನೋ ಅದೇ ನಡೆದು ಹೋಯಿತು. ನನ್ನ ಮಗ ನನ್ನ ಕೈಯಿಂದ ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ನಿನ್ನ ನನ್ನ ಸೊಸೆ ಮಾಡಿಕೊಂಡೆ. ಆದರೆ, ನೀನೇನು ಮಾಡಿದೆ, ನನ್ನ ಮಗನ ಕಿತ್ತುಕೊಂಡೆ. ಪುಟ್ಟ ನಿನ್ನ ಅಮ್ಮ ಯಾವಾಗಲೂ ನಿನ್ನ ಪ್ರೀತುಸತ್ತಾ ಇದ್ದಳು, ಪ್ರೀತಿಸ್ತಾನೆ ಇರ್ತಾಳೆ’ ಎಂದು ಹೇಳುವಾಗ ಮೇಲಿದ್ದ ಎಲ್ಲರೂ ಪ್ರಪಾತದ ಕಡೆ ಹೋಗದಂತೆ ಮನವಿ ಮಾಡಿಕೊಳ್ಳುತ್ತಾ ಇದ್ದರು. ಆದರೆ, ಕಾವೇರಿ ಮಾತು ಕೇಳಲೇ ಇಲ್ಲ.
   ಈ ವೇಳೆ ಕಾವೇರಿ ಕಾಲಿಗೆ ಕಲ್ಲೊಂದು ತಾಗಿದೆ. ಆಗ ಅವಳು ಬೆಟ್ಟದಿಂದ ಉರುಳುರುಳಿ ಹೋಗಿದ್ದಾಳೆ. ಬಹುತೇಕ ಧಾರಾವಾಹಿಗಳ ಅಂತ್ಯದಲ್ಲಿ ವಿಲನ್​ಗಳಿಗೆ ಜ್ಞಾನೋದಯ ಮಾಡುವ ಮೂಲಕ ಧಾರಾವಾಹಿಯನ್ನು ಕೊನೆ ಮಾಡಲಾಗುತ್ತದೆ. ಆದರೆ, ‘ಲಕ್ಷ್ಮೀ ಬಾರಮ್ಮ’ದಲ್ಲಿ ವಿಲನ್ ಸಾಯುವ ಮೂಲಕ ಧಾರಾವಾಹಿ ಕೊನೆ ಆಗುತ್ತದೆಯೇ ಎನ್ನುವ ಪ್ರಶ್ನೆ ಕೆಲವರಿಗೆ ಮೂಡಿದೆ. ಇನ್ನೂ ಕೆಲವರಿಗೆ ಅವರನ್ನು ಆಸ್ಪತ್ರೆಗೆ ಸೇರಿಸಿ, ಮನ ಪರಿವರ್ತನೆ ಮಾಡೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಎಲ್ಲದಕ್ಕೂ ಶುಕ್ರವಾರದ (ಏಪ್ರಿಲ್ 11) ಎಪಿಸೋಡ್​ನಲ್ಲಿ ಉತ್ತರ ಸಿಗಲಿದೆ.

Recent Articles

spot_img

Related Stories

Share via
Copy link