ಉತ್ತರ ಪ್ರದೇಶ
ಮಹಿಳೆ ಮೃತಪಟ್ಟು 135 ದಿನಗಳ ಬಳಿಕ ನ್ಯಾಯಾಲಯದ ಆದೇಶದ ಮೇಲೆ ಆಕೆಯ ದೇಹವನ್ನು ಸಮಾಧಿಯಿಂದ ಹೊರತೆಗೆಯಲಾಗಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಕೆಯದ್ದು ಸಹಜ ಸಾವಲ್ಲ ಕೊಲೆ ಎಂದು ಆರೋಪಿಸಲಾಗಿದ್ದು, ಆಕೆಯ ಸಹೋದರಿ ಹೇಳಿಕೆ ಮೇರೆಗೆ ನ್ಯಾಯಾಲಯ ಆದೇಶ ನೀಡಿದೆ. ಈಗ ಶವವನ್ನು ನಯಬ್ ತಹಶೀಲ್ದಾರ್ ಅವರ ಮೇಲ್ವಿಚಾರಣೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈಗ ಸತ್ಯ ಹೊರಬರಲಿದೆ.
ಘೋಸಿ ಕೊತ್ವಾಲಿ ಪ್ರದೇಶದ ಕಾಜಿಪುರ ಪ್ರದೇಶದ ಸ್ಮಶಾನದಲ್ಲಿ ಹೂಳಲಾಗಿದ್ದ ಮಹಿಳೆಯ ಶವವನ್ನು ಎಸ್ಡಿಎಂ ಘೋಸಿ ಅವರ ಮೇಲ್ವಿಚಾರಣೆಯಲ್ಲಿ ಜಂಟಿ ತಂಡವು ಹೊರತೆಗೆದಿದೆ. ಸಮಾಧಿಯಿಂದ ಹೊರತೆಗೆದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಅಲ್ಲಿ ಮೂವರು ಸದಸ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆಸಲಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಮಾಧಿಯಿಂದ ಮೃತ ದೇಹವನ್ನು ಹೊರತೆಗೆದ ಸುದ್ದಿ ಕೇಳಿ, ಹೆಚ್ಚಿನ ಸಂಖ್ಯೆಯ ಜನರು ಸ್ಮಶಾನದಲ್ಲಿ ಜಮಾಯಿಸಿದ್ದರು.
135 ದಿನಗಳ ಹಿಂದೆ ಸಾವನ್ನಪ್ಪಿದ ಮಹಿಳೆಯ ಸಾವಿನ ನಿಗೂಢತೆಯೂ ಬಹಿರಂಗವಾಗಲಿದೆ, ಆಕೆ ಕೊಲೆಯಾಗಿದ್ದಾರೋ ಅಥವಾ ಬಿದ್ದು ಸಾವನ್ನಪ್ಪಿದ್ದಾರೋ ಎಂಬುದು ಕೂಡ ಬಹಿರಂಗವಾಗಲಿದೆ. ಭಾನುವಾರ ಬೆಳಗ್ಗೆ ಕೆಟ್ಟ ಹವಾಮಾನದಿಂದಾಗಿ, ಮೃತ ದೇಹವನ್ನು ಹೊರತೆಗೆಯುವ ಪ್ರಕ್ರಿಯೆಯನ್ನು ಮೂರು ಗಂಟೆಗಳ ಕಾಲ ವಿಳಂಬವಾಗಿತ್ತು. ಮಧ್ಯಾಹ್ನ 1 ಗಂಟೆಗೆ ಮ್ಯಾಜಿಸ್ಟ್ರೇಟ್, ನಯಬ್ ತಹಶೀಲ್ದಾರ್ ಅಮರನಾಥ್ ಯಾದವ್ ಅವರ ಸಮ್ಮುಖದಲ್ಲಿ ಪ್ರಾರಂಭಿಸಲಾಯಿತು.
