ನಾಯಕನಹಟ್ಟಿ
ವರದಿ: ಹರೀಶ್ ನಾಯಕನಹಟ್ಟಿ
ಪಟ್ಟಣದ ಹೃದಯ ಭಾಗದಲ್ಲಿರುವ ಎ.ಕೆ.ಕಾಲೋನಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಬಹಳ ವಂಚಿತವಾಗಿದೆಈ ಶಾಲೆಯ ಬಗ್ಗೆ ಕಾಳಜಿ ಇರದ ಕಾರಣ ನಾಯಕನಹಟ್ಟಿ ಪ.ಪಂ. ಜಿ.ಪಂ. ಸಂಸದರು ಹಾಗೂ ಸ್ಥಳೀಯ ಶಾಸಕರು ಯಾವುದೇ ತರಹದ ಮೂಲಭೂತ ಸೌಕರ್ಯಗಳು ಕಲ್ಪಿಸಲು ಸಂಪೂರ್ಣ ವಿಫಲವಾಗಿದ್ದಾರೆ ಎಂದು ನಾಯಕನಹಟ್ಟಿ ಪಟ್ಟಣದ ಎ.ಕೆ.ಕಾಲೋನಿ ಸರ್ಕಾರಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಡಾ.ನಾಗರಾಜ್ ಮೀಸೆ ಆರೋಪಿಸಿದ್ದಾರೆ.
ಪಟ್ಟಣದ ಶಾಲೆಯ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಕ್ಷೇತ್ರದ ಶಾಸಕರು ಅಧಿಕಾರಕ್ಕೆ ಬರುವುದಕ್ಕೂ ಮುಂಚೆ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳಿಂದ ಗೆದ್ದರೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಈ ಮಾತು ಸುಳ್ಳಾಗಿದೆ ಎಂದು ದೂರಿದರು. ಸರಿಯಾದ ಶಾಲಾ ಕೊಠಡಿಗಳಿಲ್ಲ ಹಾಗೂ ಎಲ್ಲ ಬಿದ್ದು ಹೋದಂತಹ ತಡೆಗೋಡೆಯಾಗಿರುತ್ತದೆ.
ಈ ಶಾಲೆಗೆ ಇದರ ಬಗ್ಗೆ ಸ್ಥಳೀಯ ಶಾಸಕರಿಗೆ ೩-೪ ಬಾರಿ ಗಮನಕ್ಕೆ ತಂದರೂ ಸೌಜನ್ಯಕ್ಕಾದರೂ ಸ್ಥಳೀಯ ಶಾಸಕರು ಭೇಟಿ ನೀಡದೇ ನಿರ್ಲಕ್ಷö್ಯ ವಹಿಸುತ್ತಿದ್ದಾರೆ. ಮೊಳಕಾಲ್ಮೂರುನಲ್ಲಿ ನಡೆದಂತಹ ಜನಸ್ಪಂದನ ಕಾರ್ಯಕ್ರಮದಲ್ಲಿ ಮನವಿಯನ್ನು ಕೊಟ್ಟು ಬಂದರೂ ಯಾವುದೇ ತರಹದ ಪ್ರಯೋಜನವಾಗಿರುವುದಿಲ್ಲ. ಅಕ್ಟೋಬರ್ ೨೩, ೨೦೨೪ರಂದು ಶಾಲೆಯ ಸ್ಥಳೀಯ ಶಾಸಕರ ಆದೇಶದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮ್ಮ ಶಾಲೆಗೆ ಭೇಟಿ ಕೊಟ್ಟು ಈ ಶಾಲೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ೧೦ ಲಕ್ಷ ರೂಗಳ ಒಂದು ಕೊಠಡಿಯನ್ನು ಶಾಸಕರು ನೀಡಿದ್ದಾರೆ ಎಂದು ಹೇಳಿ ಸಂತಸ ವ್ಯಕ್ತಪಡಿಸಿ ಹೋಗಿದ್ದರು ಈ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆದರೆ ಇಂದಿನವರೆಗೂ ಯಾವುದೇ ಶಾಲೆಯ ಕೊಠಡಿಗಳು ಇಲ್ಲ ಶಾಲೆಯ ಕಾಂಪೌಂಡ್ ಸಹ ಇಲ್ಲ. ಇದರ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕೇಳಿದರೆ ಚಿತ್ರದುರ್ಗ ಡಿ.ಡಿ.ಪಿ.ಐ. ಅವರನ್ನು ಕೇಳಲು ಹೇಳುತ್ತಾರೆ. ಚಿತ್ರದುರ್ಗ ಡಿ.ಡಿ.ಪಿ.ಐ. ಅವರನ್ನು ಕೇಳಿದರೆ ಶಾಸಕರನ್ನು ಕೇಳಿ ಎಂದು ಹೇಳುತ್ತಾರೆ. ಈಗೆ ಒಬ್ಬರ ಮೇಲೆ ಒಬ್ಬರು ಹೇಳುತ್ತಿದ್ದಾರೆ. ಇದರ ಬಗ್ಗೆ ಸ್ಥಳೀಯ ಶಾಸಕರು ಗಮನಹರಿಸದೇ ಹೋದರೆ ಮುಂದಿನ ದಿನಗಳಲ್ಲಿ ಶಾಲೆಯ ಎಲ್ಲಾ ಪೋಷಕ ವರ್ಗದವರು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಗುವುದು ಮತ್ತು ಮಾದಿಗರ ಶಾಲೆಯ ಶಾಲೆ ಸ್ಥಿತಿಗತಿಗಳ ಬಗ್ಗೆ ಶಿಕ್ಷಣ ಸಚಿವರ ಗಮನಕ್ಕೆ ತರುವಂತ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಶಾಲೆಯಲ್ಲಿ ಕರ್ನಾಟಕದ ಸರ್ಕಾರಿ ಶಾಲೆಗಳು ಮುಚ್ಚಿಹೋಗುವಂತಹ ಪರೀಸ್ಥಿತಿ ಎದುರಾಗಿದ್ದರೂ ನಮ್ಮ ನಾಯಕನಹಟ್ಟಿ ಪಟ್ಟಣದ ಎ.ಕೆ.ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೪೫ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿರುತ್ತದೆ.
ಶಿಕ್ಷಣ ಪ್ರೇಮಿಗಳು ಇದರ ಬಗ್ಗೆ ಗಮನಹರಿಸಿ ನಮ್ಮ ಶಾಲೆಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕೆಂದು ಮನವಿಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ್ ಮಾತನಾಡಿ ಒಂದು ಶಾಲೆಗೆ ಕಾಂಪೌಂಡ್ ಬೇಲಿ ಇದ್ದಂತೆ ಅಂತಹ ಕಾಂಪೌಂಡಿನಲ್ಲಿ ಸುಭದ್ರವಾಗಿಲ್ಲವೆಂದರೆ ನಮ್ಮ ಮಕ್ಕಳಿಗೆ ರಕ್ಷಣೆ ಹೇಗೆ ಸಿಗುತ್ತದೆ. ಇಂತಹ ಶಾಲೆಗಳಿಗೆ ನಮ್ಮ ಮಕ್ಕಳನ್ನು ಯಾವ ಧೈರ್ಯದ ಮೇಲೆ ಶಾಲೆಗೆ ಕಳುಹಿಸಬೇಕು. ಕಾಂಪೌಂಡ್ ಮತ್ತು ಕೊಠಡಿಗಳು ಆಗದೇ ಹೋದರೆ ಶಾಲೆಯನ್ನು ಬಂದ್ ಮಾಡಿ ಪೋಷಕರೆಲ್ಲರೂ ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಶಾಲೆಯ ಕಾಂಪೌಂಡ್ ಇಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಸಾರಾಯಿ ಪುಂಡರ ಸಹವಾಸ ಹೆಚ್ಚಾಗಿದೆ. ಶಾಲೆಯ ಆವರಣದಲ್ಲಿ ಸಾ ರಾಯಿ ಕುಡಿದಿರುವ ಬಾಟಲಿಗಳು, ತುಂಡಾದ ಚೂರುಗಳು ಬೀಳುತ್ತಿವೆ. ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಶಾಲೆಯ ಆವರಣದಲ್ಲಿ ಪ್ರತಿನಿತ್ಯ ಕುಡುಕರು ಸಂಜೆಯಾಗುತ್ತಿದ್ದಂತೆ ಪಾರ್ಟಿ ಮಾಡಿಕೊಳ್ಳುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ಎಲ್ಲಂದರಲ್ಲಿ ಮದ್ಯದ ಬಾಟಲಿಗಳು ಬಿಸಾಕಿ ಹೋಗುತ್ತಿದ್ದಾರೆ. ಶಾಲೆಯ ಕಾಂಪೌಂಡ್ ಇಲ್ಲದೇ ಇರುವುದೇ ಕುಡುಕರ ಪ್ರಮುಖ ಕಾರಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಜಿ.ಟಿ.ತಿಪ್ಪೇಸ್ವಾಮಿ, ರೈತಾಪಿ ಶಿವಕುಮಾರ್ ಹಾಗೂ ಪೋಷಕ ವರ್ಗದವರು ಇದ್ದರು.
ಈ ಕ್ಷೇತ್ರದ ಶಾಸಕರು ಅಧಿಕಾರಕ್ಕೆ ಬರುವುದಕ್ಕೂ ಮುಂಚೆ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳಿಂದ ಗೆದ್ದರೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಈ ಮಾತು ಸುಳ್ಳಾಗಿದೆ ಎಂದು ಎಸ್.ಡಿ.ಎಂ.ಸಿ. ಅಧ್ಯಕ್ಷ ಡಾ. ನಾಗರಾಜ್ ಮೀಸೆ ದೂರಿದರು.
