ನಾಯಕನಹಟ್ಟಿ
ಗೌಡಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯೊಳಗೆ ಬರುವ ಕವಲನಹಳ್ಳಿ ಮತ್ತು ಮಲ್ಲೂರಹಟ್ಟಿ ಗ್ರಾಮ ವ್ಯಾಪ್ತಿಯೊಳಗೆ ಬರುವ ರೈತರ ಜಮೀನುಗಳಲ್ಲಿ ಬರುವ ಸೌರಶಕ್ತಿ ಕೇಂದ್ರ ಸ್ಥಾಪನೆಯಾಗಿದ್ದು ಈ ಸೌರ ಶಕ್ತಿ ಕೇಂದ್ರದಿಂದ ಮೇಲೆ ಸೂಚಿಸಿರುವ ಗೌಡಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ತುಂಬಾ ತೊಂದರೆಯಾಗಿರುತ್ತದೆ.
ನಂಜುಂಡಪ್ಪ ವರದಿ ಪ್ರಕಾರ ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶವೆಂದು ಪಠ್ಯ ಪುಸ್ತಕದಲ್ಲಿ ಲಿಖಿತವಾಗಿದ್ದು ಇದರಿಂದ ಸ್ಥಳೀಯ ರೈತರ ಜಮೀನುಗಳಿಗೆ ತುಂಬಾ ತೊಂದರೆಯಾಗಿದ್ದು ಕುರಿ, ಮೇಕೆ,ಹಸು,ಎಮ್ಮೆ,ಮತ್ತು ಸಾಕು ಪ್ರಾಣಿಗಳಿಗೆ ಮತ್ತು ಜಾನುವಾರಗಳಿಗೆ ಮೇವು ನೀರಿಲ್ಲದಂತೆ ಹಲವಾರು ಸಮಸ್ಯೆಗಳನ್ನು ದಿನನಿತ್ಯ ಎದುರಿಸುತ್ತಿದ್ದಾರೆ,ಗೌಡಗೆರೆ ಪಂಚಾಯ್ತಿ ಅಧಿಕಾರಿಗಳಿಂದ ಯಾವುದೇ ಪರವಾನಿಗೆ ಇಲ್ಲದೆ ಎಗ್ಗಿಲ್ಲದೆ ಸೌರ ಶಕ್ತಿ ಕೇಂದ್ರವನ್ನು ಸ್ಥಾಪನೆ ಮಾಡಿದ್ದು ಸ್ಥಳೀಯ ರೈತರಿಗಾಗಲಿ ಮತ್ತು ಕೂಲಿ ಕಾರ್ಮಿಕರಿಗಾಗಲಿ ಯಾವುದೇ ರೀತಿಯ ಉಪಯೋಗವಾಗಿರುವುದಿಲ್ಲ
ವೈಜ್ಞಾನಿಕ ಸಮೀಕ್ಷೆಯ ಪ್ರಕಾರ ಅಂತರ್ಜಲ ಮಟ್ಟ ಕುಸಿತವಾಗುತ್ತದೆ, ಆದಕಾರಣ ಇದಕ್ಕೆ ಸಂಬಂಧಪಟ್ಟ ಗೌಡಗೆರೆ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಮತ್ತು ಆಡಳಿತ ಸಿಬ್ಬಂದಿ ಕೊಡಲೇ ಸೌರಶಕ್ತಿ ಕೇಂದ್ರಕ್ಕೆ ಹೋಗಿ ಗಮನಹರಿಸಿ ರದ್ದು ಪಡಿಸಬೇಕೆಂದು ತಮ್ಮ ಗಮನಕ್ಕೆ ತಂದಿರುತ್ತೇವೆ, ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಸೇನೆಯ ಎಲ್ಲಾ ಪಧಾದಿಕಾರಿಗಳು ಮತ್ತು ನಮ್ಮ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ತಿಳಿಸುತ್ತೇವೆ.ಎಂದು ಗೌಡಗೆರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಈಶ್ವರಪ್ಪನವರು ಮನವಿ ಸ್ವೀಕರಿಸಿದರು
