ಗುಬ್ಬಿ
ತಾಲೂಕಿನ 34 ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸದಸ್ಯರುಗಳು ಹಾಗೂ ಗ್ರಾಮ ಪಂಚಾಯ್ತಿ ನೌಕರರುಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಗುಬ್ಬಿಯ ಮಹಾಲಕ್ಷ್ಮೀನಗರದಲ್ಲಿರುವ ಎಸ್ ಸಿ ಎಸ್ ಕಲ್ಯಾಣ ಮಂಟಪದಲ್ಲಿ ನೆಡೆಸಲಾಯಿತು ಈ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಗೈರಾಗಿದ್ದುದು ಶಾಸಕ ಎಸ್ ಆರ್ ಶ್ರೀನಿವಾಸ್ ಕೆಂಗಣ್ಣಿಗೆ ಕಾರಣವಾಯಿತು ಪ್ರತಿ ವರ್ಷ ಮಾಡುವ ಈ ಕಾರ್ಯಕ್ರಮಕ್ಕೆ ಕಳೆದ ವರ್ಷವೂ ಸಿ ಇ ಓ ಬಂದಿರಲಿಲ್ಲ ಇದು ಅವರ ಜವಾಬ್ದಾರಿ ಯ ಕೆಲಸ ಎಂದು ವಿಷಾದ ವ್ಯಕ್ತಪಡಿಸಿದರು ಈ ಬೃಹತ್ ಕಾರ್ಯಾಗಾರಕ್ಕೆ ಪತ್ರಕರ್ತರನ್ನು ಆಹ್ವಾನಿಸದೇ ಇರುವುದು ಇನ್ನೊಂದು ಪ್ರಮಾದಕ್ಕೆ ಕಾರಣವಾಯಿತು
ಈ ಕಾರ್ಯಕ್ರಮ ಆಯೋಜಿಸಿದ್ದ ಗುಬ್ಬಿ ತಾಲೂಕು ಕಾರ್ಯನಿರ್ವಾಹಣಾ ಧಿಕಾರಿ ಶಿವಪ್ರಸಾದ್ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರು ಬೇಸರ ವ್ಯಕ್ತಪಡಿಸಿದರು ಕಾರ್ಯಕ್ರಮ ಮುಗಿದ ನಂತರ ಜಲಜೀವನ್ ಮಿಷನ್ ಎಂಜಿನಿಯರ್ ಗೆ ಮುಗಿಬಿದ್ದ ಪಂಚಾಯ್ತಿ ಸದಸ್ಯರು, ಗುಬ್ಬಿ ತಾಲ್ಲೂಕು ಹೊಸಕೆರೆ ಗ್ರಾಮ ಪಂಚಾಯ್ತಿ ಮತ್ತು ಬೆಲವತ್ತ ಗ್ರಾಮ ಪಂಚಾಯ್ತಿ ಯ ಕೆಲವು ಗ್ರಾಮಗಳಲ್ಲಿ ಕಾಮಗಾರಿ ಮುಗಿಯದ ಕಾರಣ ಸದಸ್ಯರು ಅಧಿಕಾರಿಗಳಮೇಲೆ ಮುಗಿಬಿದ್ದರು
