ಕೆ ಆರ್ ಐ ಡಿ ಎಲ್ ನಿಗಮದಿಂದ ನಡೆದಿರುವ ಒಂದು ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ.

 ನಾಯಕನಹಟ್ಟಿ :

    ಪಟ್ಟಣದಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಕೆ ಆರ್ ಐ ಡಿ ಎಲ್ ನಿಗಮದಿಂದ ರಸ್ತೆ ಡಾಂಬರೀಕರಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಲಾಗಿತ್ತು.

    2025 26 ನೇ ಸಾಲಿನ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ವಾರ್ಷಿಕ ಜಾತ್ರೆಯ ಸಮಯದಲ್ಲಿ ಕೆ ಆರ್ ಐ ಡಿ ಎಲ್ ನಿಗಮದ ಮೂಲಕ 1 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಗೊಳಿಸಲು ಟೆಂಡರ್ ನೀಡಲಾಗಿದೆ. ಟೆಂಡರ್ ಪಡೆದ ಗುತ್ತಿಗೆದಾರರ ರಸ್ತೆ ನಿರ್ಮಿಸುವ ಸಂದರ್ಭದಲ್ಲಿ 25 ಮಿಲಿ ಮೀಟರ್ ದಪ್ಪ ನಿರ್ಮಿಸಬೇಕಿತ್ತು. ಅಧಿಕಾರಿಗಳು ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕೇವಲ 10 ಮಿಲಿ ಮೀಟರ್ ದಪ್ಪ ಕಂಡು ಬಂದಿರುತ್ತದೆ.

   ಮಾನ್ಯ ಜಿಲ್ಲಾಧಿಕಾರಿಗಳು ಜಾತ್ರೆಯ ಸಭೆಯಲ್ಲಿ ಕಳಪೆ ಕಾಮಗಾರಿ ನಡೆಸಿದರೆ ಅನುದಾನ ತಡೆಹಿಡಿಯಲಾಗುವುದು ಮತ್ತು ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರೂ ಕೂಡ ಗುತ್ತಿಗೆದಾರ ಕ್ಯಾರೆ ಎನ್ನದೆ ತನ್ನ ಹಳೆ ಕಸುಬನ್ನು ಮುಂದುವರಿಸಿದ್ದಾರೆ. ಆದ್ದರಿಂದ ಗುತ್ತಿದಾರರಿಗೆ ನೀಡಿರುವ ಅನುದಾನವನ್ನು ತಡೆಹಿಡಿದು ಮುರು ಡಾಂಬರೀಕರಣ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

Recent Articles

spot_img

Related Stories

Share via
Copy link