ಪಠ್ಯೇತರ ಚಟುವಟಿಕೆಯಿಂದ ವ್ಯಕ್ತಿತ್ವ ವಿಕಸನ

ದಾವಣಗೆರೆ:

             ವಿದ್ಯಾರ್ಥಿಗಳು ವಾಟ್ಸಾಪ್, ಫೇಸ್‍ಬುಕ್‍ಗಳಂಥಹ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿ ಕಾಲಹರಣ ಮಾಡುವ ಬದಲು, ಪಠ್ಯೇತರ ಚಟುವಟಿಕೆಗಳಲ್ಲಿ ಕ್ರೀಯಾಶೀಲರಾಗಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕೆಂದು ದಾವಣಗೆರೆ ವಿವಿಯ ಕುಲಪತಿ ಡಾ.ಶರಣಪ್ಪ ವಿ.ಹಲಸೆ ಕರೆ ನೀಡಿದರು.

              ನಗರದ ಬಿ.ಎಸ್.ಚನ್ನಬಸಪ್ಪ ಪ್ರಥಮ ದರ್ಜೆಕಾಲೇಜಿನಲ್ಲಿ ಮಂಗಳವಾರ 2018-19ನೇ ಸಾಲಿನ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಕ್ರೀಡಾ, ಎನ್‍ಎಸ್‍ಎಸ್ ಘಟಕ, ಯುವರೆಡ್ ಕ್ರಾಸ್ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಅನಾವರಣ ಗೊಳಿಸಲು ಸಹಕಾರಿಯಾಗಿವೆ ಎಂದರು.
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯ ವೃದ್ಧಿಯಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸುವ ಅವಶ್ಯಕತೆ ಇದೆ ಎಂದ ಅವರು, ಪೋಷಕರು ಮಕ್ಕಳ ಬಗ್ಗೆ ನಿರ್ಲಕ್ಷ್ಯ ತಾಳದೇ, ಗಮನ ಹರಿಸಬೇಕು. ಹಾಗೇ ಮಕ್ಕಳೂ ಕೂಡಾ ತಮ್ಮ ತಂದೆ-ತಾಯಿಗಳು ಕಂಡ ಕನಸನ್ನು ನನಸಾಗಿಸಲು ಪ್ರಯತ್ನಿಸಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.

               ಕಾಲೇಜಿನ ಅಧ್ಯಕ್ಷ ಬಿ.ಸಿ.ಶಿವಕುಮಾರ್ ಮಾತನಾಡಿ, ಮೆಡಿಕಲ್, ಇಂಜಿನಿಯರ್ ಓದುವುದರಿಂದ ಮಾತ್ರ ಜೀವನ ರೂಪಗೊಳ್ಳುತ್ತದೆ ಎಂಬ ಕೀಳರಿಮೆ ಇರುವುದು ಒಳ್ಳೆಯದಲ್ಲ. ಆರ್ಟ್ಸ್, ಕಾಮರ್ಸ್ ಅಭ್ಯಾಸ ಮಾಡುವುದರಿಂದಲೂ ಉತ್ತಮ ಜೀವನ ರೂಪಿಸಿಕೊಳ್ಳ ಬಹುದಾಗಿದೆ. ಜೀವನದಲ್ಲಿ ತೃಪ್ತಿ ಪಡೆಯಲು ಇದೇ ವೃತ್ತಿ ಎಂಬುದಿಲ್ಲ, ಮಾಡುವ ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಇದ್ದರೆ, ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ ಎಂದರು.

                ಯಶಸ್ಸು ಎಂಬುದು ಯಾವುದೇ ಅಂಚೆ ಲಕೋಟೆ ಮೂಲಕ ಸಿಗುವ ವಸ್ತು ಅಲ್ಲ. ನಮ್ಮ ಶ್ರಮ, ಪ್ರಾಮಾಣಿಕತೆಯ ಮೇಲೆ ನಿಂತಿದೆ. ಉತ್ತಮ ಜೀವನದತ್ತ ಹೆಜ್ಜೆ ಹಾಕಬೇಕು ಎಂದರು.
ಕಾರ್ಯಕ್ರಮದಲ್ಲಿ ವಿನಾಯಕ ಎಜುಕೇಷನ್ ಟ್ರಸ್ಟಿ ಎನ್.ಎ.ಮುರುಗೇಶ್, ಎಂ.ಹೆಚ್.ನಿಜಾನಂದ, ಪೆÇ್ರ.ಎಂ.ಎಸ್.ಬೇತೂರು ಮಠ, ಕೆ.ಎನ್.ಯಶಸ್ವಿನಿ ಸೇರಿದಂತೆ ಮತ್ತಿತರರಿದ್ದರು.

Recent Articles

spot_img

Related Stories

Share via
Copy link