ಹಿಂದುಳಿದ ವರ್ಗಗಳ ಪತ್ರಕರ್ತರ ಪ್ರಶಸ್ತಿ ಪ್ರಕಟ

ತುಮಕೂರು :

               ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘದ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ತುಮಕೂರು ಜಿಲ್ಲೆಯ ನಾಲ್ವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
                ಫ್ರೋ|| ಬಿ.ಕೆ. ರವಿ ಪ್ರಶಸ್ತಿಗೆ ಪ್ರಜಾಪ್ರಗತಿ-ತುಮಕೂರು, ವರದಿಗಾರ ಭೂಷಣ್ ಮಿಡಿಗೇಶಿ, ಟಿ. ನಾಗರಾಜ ಪ್ರಶಸ್ತಿಗೆ ಸತ್ಯದರ್ಶಿನಿ ಉಪಸಂಪಾದಕರಾದ ಹೆಚ್.ಎನ್.ಮಲ್ಲೇಶ್, ಗ್ರಾಮಾಂತರ ವರದಿಗಾಗಿ ನಾರಾಯಣ ರಾಜು, ವಿಜಯಕರ್ನಾಟಕ ಮಧುಗಿರಿ ಹಾಗೂ ಇ.ವಿ.ಸತ್ಯನಾರಾಯಣ ಪ್ರಶಸ್ತಿಯನ್ನು ಸ್ವರಾಜ್ ನ್ಯೂಸ್ ವರದಿಗಾರ ಜಯಣ್ಣ ಬೆಳಗೆರೆಯವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಈ ತಿಂಗಳ 16 ರಂದು ರಾಯಚೂರಿನಲ್ಲಿ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಿ.ವೆಂಕಟಸಿಂಗ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸೋಮಶೇಖರ್, ಕಾರ್ಯದರ್ಶಿ ಶಿವರಾಜ್ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link