‘ಜಾಲಾರದ ಹೂವಿನ ಮಂದಾಕಿನಿ’ ಕಾದಂಬರಿ ಬಿಡುಗಡೆ

ತುಮಕೂರು

            ಆಯಾ ಕಾಲಘಟ್ಟಗಳ ಒಳಿತು, ಕೆಡುಕುಗಳನ್ನು ಸಾಹಿತ್ಯದ ವಿವಿಧ ಪ್ರಾಕಾರಗಳ ಮೂಲಕ ಕಟ್ಟಿಕೊಡುವ ಸಾಹಿತಿಗಳಿಗೆ ಸಮಾಜ ಆರೋಗ್ಯಕರವಾಗಿರಬೇಕೆಂಬ ಅದಮ್ಯ ಹಂಬಲವಿರುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ಹೇಳಿದರು.

            ಅವರು ಸೆಪ್ಟಂಬರ್ 9ರಂದು ತುಮಕೂರು ನಗರದ ಕನ್ನಡ ಭವನದಲ್ಲಿ ನಡೆದ ಅಮರ್ ಹಫೀಝ್ ಅವರ ‘ಜಾಲಾರದ ಹೂವಿನ ಮಂದಾಕಿನಿ’ ಕಾದಂಬರಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

            ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿಕೊಂಡರೆ ಮನೆಮಂದಿ ಓದುವ ಹವ್ಯಾಸವನ್ನು ಬೆಳಸಿಕೊಳ್ಳುತ್ತಾರೆಂದು ಅಭಿಪ್ರಾಯಪಟ್ಟರು.

            ಕಾದಂಬರಿ ಕುರಿತು ಮಾತನಾಡಿದ ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು ಅವರು ಜಾತಿ-ಧರ್ಮಗಳನ್ನು ಒಡೆದು ರಾಜಕೀಯ ಅಧಿಕಾರವನ್ನು ಕಬಳಿಸಲು ಹೊರಟಿರುವ ಜನರು, ದೇವರು,ದೆವ್ವಗಳ ಹೆಸರಿನಲ್ಲಿ ಮೌಢ್ಯ ಬಿತ್ತುವುದರೊಂದಿಗೆ ಕೋಮು ಸ್ವಾಮರಸ್ಯವನ್ನು ಹಾಳು ಮಾಡಲು ನಡೆಸುತ್ತಿರುವ ಹುನ್ನಾರಗಳಿಗೆ ನಾವೆಲ್ಲ ಅವಕಾಶ ನೀಡಬಾರದು ಎಂದರು.

            ದೆವ್ವ, ದೇವರುಗಳನ್ನು ವಿವಾದಕ್ಕೀಡು ಮಾಡಿ ರಾಜಕೀಯ ಅಧಿಕಾರ ಪಡೆಯಲು ಹವಣಿಸುತ್ತಿರುವ ಸ್ವಾರ್ಥಿಗಳ ನಡುವೆ ಮನುಷ್ಯರಾದವರು ಮಾನವೀಯ ಬೆಳಕಿನ ಹಾದಿಯಲ್ಲಿ ನಡೆದುಕೊಳ್ಳಬೇಕೆಂದು ಹೇಳಿದರು.

              ಪ್ರಪಂಚದ ಏಳು ಧರ್ಮಗಳಲ್ಲೂ ದೆವ್ವ-ಪಿಶಾಚಿಗಳ ಬಗ್ಗೆ ಕಲ್ಪನೆ, ಅನಾವುತಗಳ ಬಗ್ಗೆ ಹೇಳಲಾಗಿದೆ.ಹಿಂದೂ ಧರ್ಮವೆಂದರೆ ಬಹುಸಂಸ್ಕøತಿಯ ಪರಂಪರೆ, ಸಂಪ್ರದಾಯಗಳು, ಆಚರಣೆಗಳಿವೆ, ಆದರೆ ಸನಾತನ ಸಂಸ್ಕøತಿ ತನ್ನದೇ ಶ್ರೇಷ್ಠವೆಂದು ಹಿಂದೂ ಧರ್ಮದೊಳಗಿನ ಎಲ್ಲ ಜಾತಿಗಳ ಮೇಲೆ ಹೇರಲು ಪ್ರಯತ್ನಿಸುತ್ತದೆ, ಧರ್ಮಗಳನ್ನು ಅವಹೇಳನ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಸಮಾರಂಭದಲ್ಲಿ ಲೇಖಕರಾದ ಈಚನೂರು ಇಸ್ಮಾಯಿಲ್, ಜಿ.ಇಂದ್ರಕುಮಾರ್, ಅಮರ್ ಹಫೀಝ್ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಕಾದಂಬರಿ ಲೇಖಕರಾದ ಅಮರ್ ಹಫೀಝ್ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ಸನ್ಮಾನಿಸಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link