34 ಗ್ರಾಮಗಳನ್ನು ಒಳಗೊಂಡ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್ ಇಲ್ಲವಾಗಿದೆ

ಐ.ಡಿ.ಹಳ್ಳಿ

       ಆಂಧ್ರದ ಗಡಿಭಾಗದಲ್ಲಿರುವ ಐ.ಡಿ.ಹಳ್ಳಿ ಹೋಬಳಿಯಲ್ಲಿ ಒಟ್ಟು 34 ಗ್ರಾಮಗಳಿದ್ದು, ಒಂದೇ ಒಂದು ಸರ್ಕಾರಿ ಆಸ್ಪತ್ರೆ ಇರುತ್ತದೆ. ಈ ಆಸ್ಪತ್ರೆಗೆ 108 ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಈ ಸರ್ಕಾರಿ ಆಸ್ಪತ್ರೆ ಇದ್ದರೂ ಸಹ ಇಲ್ಲದಂತಾಗಿದೆ. ಇದು ನಿಜ. ಏಕೆಂದರೆ ಸರ್ಕಾರಿ ಆಸ್ಪತ್ರೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ 108 ಆಂಬ್ಯುಲೆನ್ಸ್ ಅಧಿಕಾರಿಗಳಿಗೆ ಎಷ್ಟು ಸಾರಿ ಗ್ರಾಮಸ್ಥರು

      ದೂರುನೀಡಿದರೂ ಸಹ ಅಧಿಕಾರಿಗಳು ಎರಡು ಮೂರು ದಿನಗಳಲ್ಲಿ ವ್ಯವಸ್ಥೆ ಮಾಡುತ್ತೇವೆ ಎಂದು ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಸುಮಾರು ತಿಂಗಳಿಂದ ಐ.ಡಿ.ಹಳ್ಳಿ ಆಸ್ಪತ್ರೆಗೆ ಬಿಟ್ಟಿರುವ ಆಂಬ್ಯುಲೆನ್ಸ್ ಅನ್ನು ಮಧುಗಿರಿ ಆಸ್ಪತ್ರೆಗೆ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಆಸ್ಪತ್ರೆಗೆ 108 ಆಂಬ್ಯುಲೆನ್ಸ್ ಬಿಡುವುದು ಕನಸಿನ ಮಾತಾಗಿದೆ.

      ಈ ಹೋಬಳಿಯ 34 ಗ್ರಾಮಗಳಿಂದ ಈ ಸರ್ಕಾರಿ ಆಸ್ಪತ್ರೆಗೆ ವಾರಕ್ಕೆ ಸರಾಸರಿ ಮೂರು ಗರ್ಭಿಣಿಯರಿಗಿಂತ ಹೆಚ್ಚು ಗರ್ಭಿಣಿಯರು ಬರುತಿದ್ದು, 108 ಆಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಇರುವ್ಯದರಿಂದ, ಇತ್ತೀಚಿನ ದಿನಗಳಲ್ಲಿ ಆಂಧ್ರದ ಹಿಂದೂಪುರದ ಖಾಸಗಿ ಆಸ್ಪತ್ರೆಗಳಿಗೆ ಇಲ್ಲಿನ ಗರ್ಭಿಣಿಯರು ಹೋಗುತ್ತಿದ್ದಾರೆ. ಹಾಗಿದ್ದರೂ ಸಹ ಇಲ್ಲಿನ ಡಾಕ್ಟರ್‍ಗಳು ಮೇಲಧಿಕಾರಿಗಳಿಗೆ ಈ ವಿಷಯವನ್ನು ತಿಳಿಸದೆ ವಿಫಲರಾಗಿದ್ದಾರೆ.

      ಹಾಗೂ ಇತ್ತೀಚಿನ ದಿನಗಳಲ್ಲಿ ನಡೆದಂತಹ ಅಪಘಾತಗಳಲ್ಲಿ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಬರದೇ ಇರುವ ಕಾರಣದಿಂದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಷ್ಟು ಘಟನೆ ಆದರೂ ಸಹ, ಯಾವ ಅಧಿಕಾರಿಯೂ ಇದರ ಬಗ್ಗೆ ಎಚ್ಚರ ವಹಿಸಿಲ್ಲ. ಆದ್ದರಿಂದ ಈಗಲಾದರೂ ಸಂಬಂಧಪಟ್ಟಂತಹ ಮೇಲಧಿಕಾರಿಗಳು ಈ ಸರ್ಕಾರಿ ಆಸ್ಪತ್ರೆಗೆ 108 ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತಾರೋ ಅಥವಾ ಇಲ್ಲವೋ ನೋಡಬೇಕಾಗಿದೆ.

       ಕನ್ನಡ ಜಾಗೃತಿ ವೇದಿಕೆಯ ಹೋಬಳಿ ಅಧ್ಯಕ್ಷರಾದ ಯುವರಾಜ್ ಮಾತನಾಡಿ, ಈ ಸರ್ಕಾರಿ ಆಸ್ಪತ್ರೆಗೆ ನಾನು ಸಹ ಭೇಟಿ ನೀಡಿದ್ದೇನೆ ಹಾಗೂ ಸಂಬಂಧಪಟ್ಟಂತಹ ಮೇಲಧಿಕಾರಿಗಳಿಗೆ ಕರೆಮಾಡಿದರೆ ಒಂದೆರಡು ದಿನಗಳಲ್ಲಿ ಕಳಿಸುತ್ತೇವೆ ಎಂದು ಬರೀ ಸುಳ್ಳುಗಳನ್ನು ಹೇಳಿಕೊಂಡು ಬರುತ್ತಿದ್ದಾರೆ.

         ಆದ್ದರಿಂದ ಸಂಬಂಧಪಟ್ಟಂತಹ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ಶೀಘ್ರದಲ್ಲಿ ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸದಿದ್ದರೆ, ನಮ್ಮ ಸಂಘಟನೆ ಸರ್ಕಾರಿ ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಗುತ್ತದೆ. ಏಕೆಂದರೆ ಒಟ್ಟು ಈ ಹೋಬಳಿಗೆ ಸೇರಿದ 34 ಹಳ್ಳಿಗಳಿಂದ ಇರೋದೆ ಈ ಒಂದು ಆಸ್ಪತ್ರೆ.

         ಈ ಆಸ್ಪತ್ರೆ ಗೆ ಗರ್ಭಿಣಿಯರು ಯಾವ ಸಮಯದಲ್ಲಿ ಬೇಕಾದರೂ ಕರೆ ಮಾಡಬಹುದು. ಸಮಯಕ್ಕೆ ಈ ಗಡಿಭಾಗದಲ್ಲಿರುವ ಹಳ್ಳಿಗಳಲ್ಲಿ ಯಾವ ವಾಹನಗಳೂ ಸಹ ಇರುವುದಿಲ್ಲ. ಆದ್ದರಿಂದ ಯಾರಿಗಾದರೂ ಹೆಚ್ಚು ಕಮ್ಮಿಯಾದರೆ ಯಾರು ಈಗಾಗಲೇ ಸಮಯಕ್ಕೆ ಆಂಬ್ಯುಲೆನ್ಸ್ ಬರದೇ ಇರುವ ಕಾರಣ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ಸಂಬಂಧಪಟ್ಟಂತಹ ಮೇಲಧಿಕಾರಿಗಳು ಈ ಆಸ್ಪತ್ರೆಗೆ ಆಗಮಿಸಿ 108 ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸದಿದ್ದರೆ ಕನ್ನಡ ಪರ ಎಲ್ಲಾ ಸಂಘಟನೆಗಳು ಒಟ್ಟಾಗಿ ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link