ಶಿಗ್ಗಾವಿ
ಹಿಂದೂ ಧರ್ಮಿಯರಿಗೆ ದಸರಾ ಹಬ್ಬವು ಪ್ರಮುಖ ಹಬ್ಬವಾಗಿದ್ದು, ವಿಜಯನಗರ ಅರಸರ ಕಾಲದಿಂದಲೇ ನವರಾತ್ರಿ ಅಥವಾ ದಸರಾ ಹಬ್ಬ ಜಾಲ್ತಿಯಲ್ಲಿ ಬಂದಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪುರಾಣವೋಂದರ ಪ್ರಕಾರ ಮಹಿಶಾಸುರನ ಸಂಹಾರ ಮಾಡಲು ನೆರೆವಾಗಿರುವದೆ ಈಗ ದಸರಾ ಹಬ್ಬವಾಗಿ ಮತ್ತು ವಿಜಯದಶಮಿಯಾಗಿ ಮಾರ್ಪಟ್ಟಿದೆ ಎಂದು ಜನತಾ ಭಜಾರನ ನೂತನ ಅಧ್ಯಕ್ಷ ಕರೆಪ್ಪ ಕಟ್ಟಿಮನಿ ಹೇಳಿದರು.
ಶುಕ್ರವಾರ ಪಟ್ಟಣದ ಅಂಬೇಡ್ಕರ ನಗರದ ಶ್ರೀ ಮರೆಮ್ಮ ದೇವಿ ದೇವಸ್ಥಾನದ ಎದುರು ನವರಾತ್ರಿ ಹಾಗು ವಿಜಯದಶಮಿ ಹಬ್ಬದ ಅಂಗವಾಗಿ ಚಲವಾದಿ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಹಮ್ಮಿಕೊಂಡ ವಿವಿದ ಸಾಂಸ್ಕøತಿಕ ಹಾಗೂ ರಂಗೋಲಿ ಸ್ಪರ್ಧೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಶಾಸುರನ ಸಂಹಾರ ಮಾಡಲು ದೇವತೆಗಳೆಲ್ಲರು ತಮ್ಮ ಶರೀರದ ಒಂದೊಂದು ಅಂಗವನ್ನು ತೆಗೆದು ಆದಿಶಕ್ತಿಯನ್ನು ಸೃಷ್ಟಿ ಮಾಡಿ ಮಹಿಶನ ಮೇಲೆ ಯುದ್ದಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ ಹತ್ತು ದಿನಗಳಲ್ಲಿ ಸಪ್ತಮಾತೃಕೆಯರ ನೆರೆವಿನಿಂದ ಮಹಿಶನನ್ನು ಶಕ್ತಿ ಮತ್ತು ಯುಕ್ತಿಯಿಂದ ಕೊಲ್ಲುತ್ತಾರೆ ಆದುದರಿಂದಲೇ ಹತ್ತನೆ ದಿನವನ್ನು ವಿಜಯದಶಮಿಯನ್ನು ಆಚರಿಸುವದು ರೂಡಿಯಾಗಿದೆ ಎಂದರು ಜೊತೆಗೆ ಪಾಂಡವರು ಕೌರವರ ಮೇಲೆ ವಿಜಯ ಸಾದಿಸಿದ ದಿನವು ಇದೇ ಎಂದು ಹೆಳಲಾಗುತ್ತಿದೆ ಎಂದರು.
ವೈದ್ಯ ಡಾ ಎಂ ಎಂ ತಿರ್ಲಾಪೂರ ಮಾತನಾಡಿ ದಸರಾ ಹಬ್ಬವನ್ನು ಭಾರತದ ಉತ್ತರ ಭಾಗಗಳಲ್ಲಿ ದುರ್ಗಾಪೂಜೆಯಾಗಿಯೂ ಆಚರಿಸುತ್ತಾರೆ ಆಯುದ ಪೂಜೆ, ವಿಜಯ ಧಶಮಿ ಹಬ್ಬಗಳನ್ನು ಒಳಗೊಂಡ ಹಲವು ದಿನಗಳ ಹಬ್ಬದ ಆಚರಣೆ ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ಮೈಸೂರು ಪ್ರಾಂತ್ಯದಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ ವಿಶೇಷವಾಗಿ ಈ ಹಬ್ಬದಲ್ಲಿ ಮಕ್ಕಳ ಸಾಂಸ್ಕøತಿಕ ಮತ್ತು ರೆಂಗೋಲಿ ಸ್ಪರ್ದೆ ಹಮ್ಮಿಕೊಳ್ಳುವ ಮೂಲಕ ಚಲವಾದಿ ಕ್ಷೇಮಾಭಿವೃದ್ದಿ ಸಂಘ ಮಕ್ಕಳ ಪಠ್ಯೆತರ ಚಟುವಟಿಕೆಗಳ ಜೊತೆಗೆ ಮಕ್ಕಳ ಕಲೆಯನ್ನು ಗುರುತಿಸುವತ್ತ ಹೆಜ್ಜೆ ಇಟ್ಟಿರುವದು ಸ್ವಾಗತಾರ್ಹ ಎಂದರು.
ನ್ಯಾಯವಾದಿ ಬಸವರಾಜ ಜಕ್ಕನಕಟ್ಟಿ ಮಾತನಾಡಿದರು.ಕಾರ್ಯಕ್ರಮದಲ್ಲಿ ವಿವಿದ ಗಣ್ಯರನ್ನು ಸನ್ಮಾನಿಸಲಾಯಿತು. ನಂತರ ಅಂಬೇಡ್ಕರ ನಗರದ ವಿವಿದ ಮಕ್ಕಳಿಂದ ವಿವಿದ ಸಾಂಸ್ಕøತಿಕ ಹಾಗೂ ರಂಗೋಲಿ ಸ್ಪರ್ಧೆಗಳು ಜರುಗಿದವು.ಜನತಾ ಭಜಾರ ನಿರ್ದೇಶಕ ಅಶೋಕ ಕಾಳೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಲವ್ವ ಕಾಲವಾಡ, ಡಾ ರಾಣಿ.ಎಮ್.ತಿರ್ಲಾಪೂರ, ಸುರೇಶ ಹರಿಜನ ಸಿ.ಎನ್.ಕುಂಬಾರ, ಬಸಪ್ಪ ಚನ್ನದಾಸರ, ಫಕ್ಕಿರಪ್ಪ ಬನ್ನಿಮಟ್ಟಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
