ಹಾನಗಲ್ಲ:
ಹಾನಗಲ್ಲಿನ ದತ್ತ ದೇವಸ್ಥಾನದ ಶತಮಾನೋತ್ಸವ ನಿಮಿತ್ತ ಧಾರವಾಡದ ದತ್ತ ಪಾದಯಾತ್ರಾ ಸಮಿತಿಯ 40 ಜನ ಸದ್ಭಕ್ತರು ಪಾದಯಾತ್ರೆ ಮೂಲಕ ಹಾನಗಲ್ಲಿಗೆ ಆಗಮಿಸಿ ಭಕ್ತಿ ನಮನ ಸಲ್ಲಿಸಿದರು.
ನವೆಂಬರ್ 29 ರಿಂದ ಡಿಸೆಂಬರ್ 24 ರವರೆಗೆ ನಡೆಯಲಿರುವ ಶತಮಾನೋತ್ಸವದ ಪೂರ್ವಭಾವಿಯಾಗಿ ಧಾರವಾಡದಿಂದ ಶ್ರೀಕ್ಷೇತ್ರ ಹಾನಗಲ್ಲಿನ ದತ್ತ ದೇವಸ್ಥಾನಕ್ಕೆ ಸಾಂಪ್ರದಾಯಕ ಭಜನೆ-ನಾಮಸ್ಮರಣೆಗಳೊಂದಿಗೆ ಪಾದಯಾತ್ರೆ ಮೂಲಕ ಆಗಮಿಸಿ ದರ್ಶನ ಪಡೆದು ಪುನೀತರಾದರು. 2008 ರಿಂದ ಪ್ರತಿ ವರ್ಷ ಬೇರೆ ಬೇರೆ ದತ್ತ ಕ್ಷೇತ್ರಗಳಿಗೆ ಪಾದಯಾತ್ರೆ ನಡೆಸುತ್ತಿರುವ ಈ ತಂಡ ಈಗಾಗಲೇ ಹತ್ತಾರು ಶ್ರೀಕ್ಷೇತ್ರಗಳಿಗೆ ತೆರಳುವ ಮೂಲಕ ತಮ್ಮ ಭಕ್ತಿ ಮೆರೆಯುತ್ತಿದ್ದಾರೆ.
ಪಾದಯಾತ್ರೆಯಲ್ಲಿ ಧಾರವಾಡದ ರಾ.ಶ್ರೀ.ಸುಂಕದ್, ಆನಂದ ಕುಲಕರ್ಣಿ, ಉದಯ ಕುಲಕರ್ಣಿ, ರವಿ ಕುಲಕರ್ಣಿ, ಮಿಲಿಂದ ಪಿಸೆ, ಅರವಿಂದ ನವಲಗುಂದ, ದತ್ತಾ ನಾಡಿಗೇರ, ವಾಣಿ ಹಂದಿಗೋಳ, ಉದಯ ದೇಶಪಾಂಡೆ, ಪ್ರಕಾಶ ಕುಲಕರ್ಣಿ, ಉಷಾ ಸುಂಕದ್ ಇತರರು ಪಾಲ್ಗೊಂಡಿದ್ದರು.
ಪಟ್ಟಣದ ಪಿಳ್ಳಂಗಟ್ಟಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಪಾದಯಾತ್ರಿಕರನ್ನು ಬರಮಾಡಿಕೊಳ್ಳಲಾಯಿತು. ನಂತರ ದತ್ತ ದೇವಸ್ಥಾನದಲ್ಲಿ ದತ್ತರಾಜರಿಗೆ ಅಭಿಷೇಕ, ಬುತ್ತಿಪೂಜೆ ಹಾಗೂ ಅಷ್ಟಾವಧಾನ ಜರುಗಿದವು. ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ವಿನಾಯಕ ಜೋಶಿ, ಬ್ರಾಹ್ಮಣ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಶಿವಪೂಜಿ, ದತ್ತ ದೇವಸ್ಥಾನದ ಅರ್ಚಕ ವೇ.ಮೂ.ಮುಕುಂದಭಟ್ ಕಾಗಿನೆಲ್ಲಿ, ಎಸ್.ಆರ್.ಕುಲಕರ್ಣಿ, ಘನಶ್ಯಾಮ್ ದೇಶಪಾಂಡೆ, ಮಾರ್ತಾಂಡ ಪಾರಗಾಂವಕರ, ಜಿ.ಆರ್.ಪೋತದಾರ, ಮಾಲತೇಶ ಕಾಮನಹಳ್ಳಿ, ಮನೋಜ ಸರಾಫ್, ರವಿ ಜೋಶಿ, ಆನಂದ ಗಾಜಿಪೂರ, ವಲ್ಲಭ ಜೋಶಿ, ರವಿ ಪೋತದಾರ, ವಿನಯ ಬಂಕನಾಳ ಇತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
