ಚಿತ್ರದುರ್ಗ;
ನಮ್ಮ ಸಂಸ್ಥೆಯಿಂದ ಯಾವುದೇ ರೀತಿಯಿಂದ ಹಣದ ದುರುಪಯೋಗವಾಗಿಲ್ಲ ಕಾರ್ಮೀಕ ನಿಧಿಯ ಹಣವನ್ನು ಇಲಾಖೆಗೆ ಭರ್ತಿ ಮಾಡಿಲ್ಲ ಎಂದು ಪ್ರಕರಣವನ್ನು ದಾಖಲು ಮಾಡಿದೆ ಹೊರೆತು ಹಣವನ್ನು ನೀಡಿಲ್ಲ ಎಂದಲ್ಲ ಎಂದು ಕೆ,ಎಸ್.ನವೀನ್ ಸ್ಪಷ್ಟ ಪಡಿಸಿದ್ದಾರೆ.
ಚಿತ್ರದುರ್ಗ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಥೆಯ ವತಿಯಿಂದ ಮೂರು ನಗರದಲ್ಲಿ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದೇವೆ, ಕಾರ್ಮಿಕರ ಕಾನೂನಿನ ಬಗ್ಗೆ ನನಗೂ ತಿಳಿದಿದೆ ಆದರೆ 2012 ಮತ್ತು 2013ರ ಇಸವಿಯಲ್ಲಿ ತಲಾ ಎರಡು ತಿಂಗಳ ಕಾರ್ಮಿಕ ನಿಧಿಯನ್ನು ಇಲಾಖೆಗೆ ಭರ್ತಿ ಮಾಡಿಲ್ಲ, ಇದರ ಬಗ್ಗೆ ಇಲಾಖೆ ನೋಟಿಸ್ನ್ನು ಕಳುಹಿಸಿದ್ದರು ಸಹಾ ಅದು ನನಗೆ ತಲುಪಿಲ್ಲ ಇದರಿಂದ ಅಧಿಕಾರಿಗಳು ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಇದರಿಂದ ನಾವು ಸಹಾ ನ್ಯಾಯಾಲಯದ ಮೂಲಕವೇ ಇದನ್ನು ಇತ್ಯರ್ಥ ಮಾಡಿಕೊಳ್ಳಬೇಕಿದೆ ಎಂದರು.
ನ್ಯಾಯಾಲಯವು ಇಲಾಖೆಗೆ ನೀಡಬೇಕಾದ ಹಣ ಮತ್ತು ದಂಡ ಸೇರಿದಂತೆ 1.54 ಲಕ್ಷ ರೂ.ಗಳನ್ನು ನೀಡಬೇಕು ಇಲ್ಲವೆ ಒಂದು ವರ್ಷ ಶಿಕ್ಷೆ ಮತ್ತು ದಂಡವನ್ನು ವಿಧಿಸಿತ್ತು, ಇದರ ಬಗ್ಗೆ ಮೇಲ್ಮನವಿಯನ್ನು ಹೋಗಲು ಅವಕಾಶ ನೀಡಲಾಗಿತ್ತು. ಹೀಗಾಗಿ ನಾವು ಜಿಲ್ಲಾ ಸಶಸ್ತ್ರ ನ್ಯಾಯಾಲಯದ ಮುಂದೆ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದಾಗ ನ್ಯಾಯಾಲಯ ವಿಧಿಸಿದ್ದ ಹಣದಲ್ಲಿ ಅರ್ಧ ಬಾಗವನ್ನು ಭರ್ತಿ ಮಾಡಿ ನಂತರ ಉಳಿದ ಭಾಗವನ್ನು ಭರ್ತಿ ಮಾಡಲು ಸಮಯವನ್ನು ನೀಡಿ ನ್ಯಾಯಾಲಯ ನೀಡಿದ್ದ ಶಿಕ್ಷೆಗೆ ಸಧ್ಯಕ್ಕೆ ತಾತ್ಕಲಿಕವಾಗಿ ತಡೆಯನ್ನು ನೀಡಲಾಗಿದೆ ಎಂದು ನವೀನ್ ತಿಳಿಸಿದರು.
ಯಾವುದೇ ಒಂದು ಸಂಸ್ಥೆಯನ್ನು ಸ್ಥಾಪನೆ ಮಾಡಿದ ಮೇಲೆ ವಿವಿಧ ಇಲಾಖೆಗಳೊಂದಿಗೆ ನಿರಂತರವಾಗಿ ಸಂಪರ್ಕವನ್ನು ಹೊಂದಿರಬೇಕಿದೆ ಅವರು ಕೇಳಿದ ವಿವಿಧ ರೀತಿಯ ದಾಖಲಾತಿಗಳನ್ನು ನೀಡಬೇಕಿರುವುದು ಉದ್ಯಮ ನಡೆಸುತ್ತವರ ಕೆಲಸವಾಗಿದೆ, ಈ ದಿಸೆಯಲ್ಲಿ ಇದು ಸಹಾ ಅಂದು ಕಾರ್ಮಿಕ ನಿಧಿಯನ್ನು ಕಟ್ಟದೇ ಇರುವುದರಿಂದ ಇಲಾಖೆಯವರು ಕಾನೂನು ಮೂಲಕ ಪಡೆಯಲು ಮುಂದಾಗಿದ್ದಾರೆ ಇದರಲ್ಲಿ ನೋಟಿಸ್ ನೀಡಿ ಬಾಕಿ ಹಣವನ್ನು ಪಡೆಯಬಹುದಾಗಿತ್ತು ಆದರೆ ಆ ರೀತಿ ಇಲಾಖೆ ಅಧಿಕಾರಿಗಳು ಮಾಡಿಲ್ಲ ನ್ಯಾಯಲಾಯದ ಮೂಲಕವೇ ನೀಡುವಂತೆ ತಿಳಿಸಿದ್ದರಿಂದ ಹಣವನ್ನು ನ್ಯಾಯಾಲಯಕ್ಕೆ ಭರ್ತಿ ಮಾಡಲಾಗುತ್ತಿದೆ ಎಂದರು
