ರಾಜಕೀಯ ಲೇಪನದಿಂದ ಬಹುತೇಕ ಮಠ, ಮಂದಿರಗಳು ಕಲುಷಿತ

ಬ್ಯಾಡಗಿ:

       ರಾಜಕೀಯ ಲೇಪನದಿಂದ ಬಹುತೇಕ ಮಠ, ಮಂದಿರ, ದೇವಾಸ್ಥಾನಗಳಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ, ಭಕ್ತರನ್ನು ಹಿಡಿದಿಟ್ಟುಕೊಳ್ಳಲಾಗದ ಇತ್ತೀಚಿನ ಬಹಳಷ್ಟು ದೇವಸ್ಥಾನಗಳು ಜನರನ್ನು ಆಕರ್ಷಿಸಲು ಅವುಗಳಿಗೆ ಜಾತಿಯ ಬಣ್ಣ ಬಳಿಯುತ್ತಿರುವುದು ದುರಂತದ ಸಂಗತಿ, ದೇವಸ್ಥಾನಗಳು ನಮ್ಮ ಸಂಸ್ಕøತಿಯ ಪ್ರತೀಕ ಪ್ರ್ರತಿಯೊಬ್ಬರು ಧಾರ್ಮಿಕ ಕಾರ್ಯಗಳನ್ನು ತಮ್ಮ ಬದುಕಿನ ಭಾಗವನ್ನಾಗಿ ಮಾಡಿಕೊಳ್ಳುವಂತೆ ನೆಗಳೂರು ಹಿರೇಮಠದ ಷ.ಬ್ರ.ಗುರುಶಾಂತೇಶ್ವರ ಶಿವಾಚಾರ್ಯಶ್ರೀಗಳು ಕರೆ ನೀಡಿದರು.

         ತಾಲೂಕಿನ ಮೋಟೆಬೆನ್ನೂರ ಗ್ರಾಮದ ಬಿಆರ್‍ಈ/ಟ್ರಸ್ಟ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಿರ್ಮಿಸಲಾಗಿರುವ ನೂತನ ಗಣೇಶ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಾಗೂ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಸಾಮಾಜಿಕ ನ್ಯಾಯದ ಮುಖವಾಡ ಹೊತ್ತವರೇ ಇಂದು ಜಾತಿಗೊಂದು ಮಠ ಅದಕ್ಕೊಬ್ಬ ಗುರುವನ್ನು ಮಾಡುತ್ತಾ ಹೊರಟಿದ್ದಾರೆ, ಇದರಿಂದ ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗುತ್ತಿದ್ದು ನಾಗರಿಕ ಸಮಾಜ ತನಗರಿವಿಲ್ಲದಂತೆ ವಿಘಟನೆಯತ್ತ ಸಾಗಿದೆ ಎಂದು ವಿಷಾದಿಸಿದರು.

         ಹಣಕ್ಕಾಗಿ ಸುಳ್ಳು ಸೃಷ್ಟಿಸಿಕೊಳ್ಳದಿರಿ: ಮೊದಲು ಹಣವನ್ನು ಬೆನ್ನು ಹತ್ತುವ ಮನುಷ್ಯ ಅದನ್ನು ಪಡೆದುಕೊಳ್ಳುವವರೆಗೆ ಏನೆಲ್ಲಾ ಸುಳ್ಳಿನ ಸಾಮ್ರಾಜ್ಯವನ್ನು ತನ್ನ ಸುತ್ತ ಸೃಷ್ಟಿಸಿಕೊಳ್ಳುತ್ತಾನೆ, ಆದರೆ ಹಣದಲ್ಲಿ ನೆಮ್ಮದಿ ಇಲ್ಲವೆಂಬುದು ಅದು ಸಿಕ್ಕ ಬಳಿಕ ಆತನ ಅರಿವಿಗೆ ಬರಲಿದ್ದು, ಸುಖ-ಶಾಂತಿ-ನೆಮ್ಮದಿ ಪಡೆದುಕೊಳ್ಳಲು ಮತ್ತೆ ಏನೆಲ್ಲಾ ಪ್ರಯತ್ನಕ್ಕಿಳಿಯುತ್ತಾನೆ ಎಂದ ಅವರು, ಇನ್ನಾದರೂ ಇಂತಹ ಪ್ರಕ್ರಿಯೆಗಳನ್ನು ನಿಲ್ಲಿಸಿ ಧಾರ್ಮಿಕ ಕೆಲಸಗಳತ್ತ ಮುಖ ಮಾಡುವಂತೆ ಕರೆ ನೀಡಿದರು.

         ಹಣ ಬಲಕ್ಕಿಂತ ಭಕ್ತಿಯ ಬಲದ ಮೇಲೆ ದೇವಸ್ಥಾನ:ದೇವರು ನಿರಾಕಾರಿ ಎಂದು ಹೇಳುವ ನಾವೆಲ್ಲರೂ ಕೊನೆಗೆ ಆತನನ್ನು ಕಂಡುಕೊಳ್ಳುವ ಜಾಗಗಳೇ ದೇವಾಲಯಗಳಾಗಿವೆ, ಇಂತಹ ದೇವಾಲಯಗಳನ್ನು ನಿರ್ಮಿಸುವ ಕಾರ್ಯದಲ್ಲಿ ಶಕ್ತಾನುಸಾರ ಪ್ರತಿಯೊಬ್ಬರು ಪ್ರಯತ್ನ ಮಾಡೋಣವಾಗಬೇಕು, ಆದರೆ ಹಣದ ಬಲಕ್ಕಿಂತ ಭಕ್ತಿಯ ಬಲದ ಮೇಲೆ ದೇವಸ್ಥಾನಗಳನ್ನು ನಿರ್ಮಾಣ ಮಾಡುವುದು ಹೆಚ್ಚು ಸೂಕ್ತವೆಂದು ಸಲಹೆ ನೀಡಿದರು.

         ಭಕ್ತಿಯ ಕೇಂದ್ರಗಳಾಗಲಿ: ಶಾಲಾ ಆವರಣದಲ್ಲಿ ದೆವಸ್ಥಾನಗಳನ್ನು ನಿರ್ಮಿಸಿರುವುದು ಪ್ರಸ್ತುತ ವಾತಾವರಣದಲ್ಲಿ ಸಮಯೋಚಿತ ಕಾರ್ಯವಾಗಿದೆ, ವಿದ್ಯಾರ್ಥಿಗಳಿಗೆ ನಿತ್ಯದ ಪಾಠದ ಜೊತೆ ಭಕ್ತಿಯ ಪಠನವಾಗಲಿ, ಬಳ್ಳಾರಿ ಕುಟುಂಬದವರು ನಿರ್ಮಿಸಿರುವ ಸದರಿ ಜ್ಞಾನ ದೇಗುಲ ಮುಂದಿನ ದಿನಗಳಲ್ಲಿ ಶಿಕ್ಷಣದ ಜೊತೆಗೆ ಭಕ್ತಿಯ ಕಾಶಿಗಳಾಗಿ ಪರಿವರ್ತನೆಗೊಳ್ಳಲಿ, ಜ್ಞಾನದ ಜೊತೆ ಭಕ್ತಿಯ ಶಿಕ್ಷಣ ನೀಡುತ್ತಿರುವುದು ಗುರುಕುಲ ವ್ಯವಸ್ಥೆಯನ್ನು ಜ್ಞಾಪಿಸುತ್ತಿದೆ, ಇಂತಹ ಕಾರ್ಯಗಳು ಸಮಾಜದ ಮೇಲೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದರು.

         ವಿಘ್ನ ನಿವಾರಕರನ ಸ್ಥಾಪನೆ: ನಿವೃತ್ತ ಇಂಜಿನೀಯರ್ ಸಿ.ಆರ್.ಬಳ್ಳಾರಿ ಮಾತನಾಡಿ, ಕಾಲೇಜು ಆವರಣದಲ್ಲಿ 4 ವರ್ಷದ ಮಕ್ಕಳಿಂದ 24 ವರ್ಷದ ಯುವಕರವರೆಗೆ ಶಿಕ್ಷಣ ಸೌಲಭ್ಯ ದೊರೆಯುತ್ತಿದೆ, ಆ ಕಾರಣಕ್ಕಾಗಿ ಮಕ್ಕಳಿಗೆ ಯಾವುದೇ ತೊಂದರೆಗಳು ಬಂದರೂ ವಿಘ್ನ ನಿವಾರಕ ಗಣೇಶ ನಮ್ಮ ಮಕ್ಕಳ ಬದುಕಿಗೆ ತೊಂದರೆಯಾಗದಂತೆ ಕಾಪಾಡಲಿ ಎಂಬ ಉದ್ದೇಶದಿಂದ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು, ಇದರಿಂದ ಶಾಲೆಯಲ್ಲಿಯೂ ಭಕ್ತಿಯ ವಾತಾವರಣ ಮೂಡಲಿದೆ ಎಂದರು. 

        ಕಾರ್ಯಕ್ರಮದ ಅಂಗವಾಗಿ ಇದಕ್ಕೂ ಮುನ್ನ ಸೋಮವಾರ ಬೆಳಿಗ್ಗೆ 6 ಗಂಟೆಗೆ ಗಣೇಶನ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನೇರವೇರಿತು. ಆಡಳಿತಾಧಿಕಾರಿ ನಿವೃತ್ತ ಪ್ರಾಚಾರ್ಯ ಸಿ.ಸಿ.ಪ್ರಭುಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು, ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಷಣ್ಮುಕಪ್ಪ ಬಳ್ಳಾರಿ, ಖಜಾಂಚಿ ಚನ್ನವೀರಪ್ಪ ಬಳ್ಳಾರಿ, ಭೋಜರಾಜ ಬಳ್ಳಾರಿ, ಚನ್ನಮ್ಮ ಕೆಂಚಮಲ್ಲ, ಶಾಂತವ್ವ ಬಳ್ಳಾರಿ, ದ್ರಾಕ್ಷಾಯಣಮ್ಮ ರಾಚಣ್ಣನವರ, ಸುವರ್ಣ ಬಳ್ಳಾರಿ, ನಿರ್ಮಲಾ ಬಳ್ಳಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಪ್ರಾಚಾರ್ಯೆ ಲೀಲಾವತಿ ಬುಕ್ಕಶೆಟ್ಟಿ ಸ್ವಾಗತಿಸಿದರು, ವಿರೇಶ ಹಿತ್ತಲಮನಿ, ಜಯಶ್ರೀ ನೀರಲಗಿಮಠ ನಿರೂಪಿಸಿದರು, ಪದವಿ ಕಾಲೇಜು ಪ್ರಾಚಾರ್ಯ ಡಾ.ಎಸ್.ವಿ.ಖಾನಗೌಡ್ರ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link