ಹಗರಿಬೊಮ್ಮನಹಳ್ಳಿ:
ಪಟ್ಟಣದಲ್ಲಿ ಭಕ್ತ ಕನಕದಾಸ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಕುರುಬ ಸಮುದಾಯ ತಾಲೂಕು ಘಟಕ ತೀರ್ಮಾನ ತೆಗೆದುಕೊಂಡಿತು.
ಪಟ್ಟಣದ ಕನಕ ಭವನದಲ್ಲಿ ಭಾನುವಾರ ಕರೆಯಲಾಗಿದ್ದ, ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಸಮುದಾಯದ ತಾಲೂಕು ಅಧ್ಯಕ್ಷ ಬುಡ್ಡಿ ಬಸವರಾಜ್ ಮಾತನಾಡಿ, ಈ ವರ್ಷ ಭಕ್ತ ಕನಕದಾಸ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಬೇಕು, ಜೊತೆಗೆ ಪಟ್ಟಣದ ಚಿತ್ರಮಂದಿರದ ವೃತ್ತದಲ್ಲಿ ಕನಕ ಫಲಕವನ್ನು ಅನಾವರಣ ಮಾಡಬೇಕು ಎಂದು ಸಭೆಯಲ್ಲಿ ಸದಸ್ಯರು ಮತ್ತು ಸಮುದಾಯದವರ ಒತ್ತಾಯದ ಮೇರೆಗೆ ತೀರ್ಮಾನ ತೆಗೆದುಕೊಳ್ಳೋಣ ಎಂದರು. ಆದರಂತೆ ನ.26ರಂದು ಜರುಗುವ ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿ ಸರಳವಾಗಿ ಆಚರಿಸಲಿ. ಅದರೆ, ಕಾಗಿ ನೆಲೆಯ ಕನಕ ಪೀಠದ ಶ್ರೀನಿರಂಜನಾನಂದ ಪುರಿ ಮಹಾಸ್ವಾಮೀಜಿ ಮತ್ತು ಕ್ಷೇತ್ರದ ಶಾಸಕ ಎಸ್.ಭೀಮಾನಾಯ್ಕ್ ಅವರ ದಿನಾಂಕ ನಿಗಧಿಪಡಿಸಿ ಸಮುದಾಯ ತಾಲೂಕು ಸಮಿತಿಯಿಂದ ಇನ್ನೊಂದು ದಿನ ಕಾರ್ಯಕ್ರಮ ಹಮ್ಮಿಕೊಳ್ಳೋಣ ಎಂದು ಸಭೆಗೆ ತಿಳಿಸಿದರು. ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಕೂಡ ವ್ಯಕ್ತವಾಯಿತು. ಅಲ್ಲದೆ ಅಂದೇ ಶ್ರೀ ಕನಕಭವನ ಕೂಡ ಉದ್ಘಾಟನೆ ಮಾಡುವ ಪ್ರಯತ್ನಕೂಡ ಮಾಡೋಣವೆಂದರು.
“ಪ್ರತಿವರ್ಷ ಕನಕ ಜಯಂತಿ ಅದ್ಧೂರಿಯಾಗಿ ನಡೆಯುತ್ತಿದೆ. ಆದರೆ, ನಮ್ಮ ಸಮುದಾಯದ ಕೆಲವರಿಗೆ ಪಟ್ಟಣದಲ್ಲಿ ಕನಕ ಭವನ ಎಲ್ಲಿ ಇದೆ ಎನ್ನುವ ಮಾಹಿತಿ ಸರಿಯಾಗಿ ಇನ್ನೂ ತಿಳಿದಿಲ್ಲ. ಆದ್ದರಿಂದ ಶ್ರೀಕನಕ ಜಯಂತಿಯಂದೇ ಕನಕಭವನ ಉದ್ಘಾಟನೆಯಾಗಬೇಕು. ಅದರ ಪಕ್ಕದ ನಿವೇಶನದಲ್ಲಿ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಲಿ.”-ಟಿ.ಮಹೇಶ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರು ಬಳ್ಳಾರಿ.
ತಾಲೂಕು ಮಾಜಿ ಅಧ್ಯಕ್ಷ ಮೈಲಾರಪ್ಪ, ಗೌರವ ಅಧ್ಯಕ್ಷ ಜಾತಪ್ಪ, ಕಾರ್ಯದರ್ಶಿ ಉಲವತ್ತಿ ಕೊಟ್ರೇಶ್, ಮೆಟ್ರಿ ಗೋಣೆಪ್ಪ, ಮಾರುತೇಪ್ಪ, ಚನ್ನಬಸಪ್ಪ, ಹನುಮಜ್ಜ, ಎ.ಪಿ.ಎಂ.ಸಿ.ನಿರ್ದೇಶಕ ರಾಮಣ್ಣ, ಕೋಗಳಿ ಹನುಮಂತಪ್ಪ, ಕೊಚಾಲಿ ಮಂಜುನಾಥ, ದುರುಗಪ್ಪ, ಕುರುಬರ ವೆಂಕಟೇಶ, ಶಂಬಣ್ಣ, ಹನುಮಂತ ಮುಟುಗನಹಳ್ಳಿ, ಕುರಿನಾಗರಾಜ್, ಬಿ.ಕೆ.ಬಸವರಾಜ, ಸೊನ್ನದ ಶಿವರಾಜ್, ಶಿಕ್ಷಕ ದೇವಪ್ಪ, ಮೊರ್ನಾಳ್ ಗುರುಸಿದ್ದಪ್ಪ, ತಾಲೂಕು ಮಹಿಳಾ ಅಧ್ಯಕ್ಷೆ ನಾಗರತ್ನ ಮತ್ತಿತರರು ಇದ್ದರು.ಸರ್ಕಾರಿ ಕನಕ ನೌಕರರ ಕಾರ್ಯದರ್ಶಿ ಮಂಜುನಾಥ ಮತ್ತು ಕನಕ ಯುವಸೇನೆಯ ತಾಲೂಕು ಅಧ್ಯಕ್ಷ ದೊಡ್ಡಬಸಪ್ಪ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
