ಮಡಿವಾಳ ಜನಾಂಗದ ಜಾಗೃತಿ ಮಹಾ ಸಮ್ಮೇಳನ

ಹರಪನಹಳ್ಳಿ:

          ಚಿತ್ರದುರ್ಗದ ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಮಡಿವಾಳ ಜನಾಂಗದ ಜಾಗೃತಿ ಮಹಾ ಸಮ್ಮೇಳನ ಮತ್ತು ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಜ.5 ಮತ್ತು 6ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ಶ್ರೀ ಬಸವ ಮಾಚಿದೇವ ಸ್ವಾಮೀಜಿಗಳು ತಿಳಿಸಿದರು.

      ಪಟ್ಟಣದಲ್ಲಿ ಶುಕ್ರವಾರ ಸಮಾಜ ಬಾಂಧವರಿಗೆ ಸಮ್ಮೇಳನದ ಕರಪತ್ರ ಹಂಚಿ ನಂತರ ಸುದ್ದಿಗಾರರೊಂದಿಗೆ ಶ್ರೀಗಳು ಮಾತನಾಡಿದರು. ಮಹಾ ಸಮ್ಮೇಳನಕ್ಕೆ ಮಠಾಧೀಶರು, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ, ಶಾಸಕರು, ಸಂಸದರು, ಹೊರ ರಾಜ್ಯಗಳ ಸಮಾಜದ ಶಾಸಕರು ಸೇರಿದಂತೆ ವಿವಿಧ ಸಮಾಜದ ಮುಖಂಡರು ಆಗಮಿಸಲಿದ್ದಾರೆ. ಸಮ್ಮೇಳನಕ್ಕೆ ಮೂರು ಲಕ್ಷಕ್ಕೂ ಹೆಚ್ಚು ಜನರು ಸೇರುವ ಸಾಧ್ಯತೆಯಿದೆ ಎಂದು ತಿಳಿಸಿದರು.

       ಸಮ್ಮೇಳನ ಪೂರ್ವಭಾವಿಯಾಗಿ ರಾಜ್ಯದಲ್ಲಿ ಮೂರು ತಿಂಗಳ ಸಂಚಲನ ಯಾತ್ರೆ ನಡೆಸಿ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸಲಾಗಿದೆ. ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾವು ಜಂಗಮ ದೀಕ್ಷೆ ಪಡೆದು 20 ವರ್ಷ ಹಾಗೂ ಮಠದ ಶಂಕುಸ್ಥಾಪನೆ ಆಗಿ 10 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಶ್ರೀಮಠದ ಭಕ್ತ ಸಮೂಹ ಪಟ್ಟಾಭಿಷೇಕ ಮಾಡಬೇಕು ಎಂಬ ತೀರ್ಮಾನ ಮಾಡಿದ್ದಾರೆ. ಇದರ ಜತೆಗೆ ಮಹಾ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

        ಸುಸಂಸ್ಕೃತ ಎನಿಸಿರುವ ಮಡಿವಾಳ ಸಮಾಜಕ್ಕೆ ಬಹುದೊಡ್ಡ ಪರಂಪರೆಯಿದೆ. ಸುಮಾರು 12ನೇ ಶತಮಾನದಿಂದಲೂ ಮಡಿವಾಳ ಸಮಾಜ ಸರ್ವಸಮಾಜಗಳ ಸೇವೆ ಮಾಡುತ್ತಲೇ ಬಂದಿದೆ. ಸಮಾಜದ ಬೇಳವಣಿಗೆ, ಅಭಿವೃದ್ಧಿ, ಪ್ರಗತಿ ನಿಟ್ಟಿನಲ್ಲಿ ಆಲೋಚನೆ ಮಾಡುವುದಾರೆ ಮಡಿವಾಳ ಸಮಾಜದ ಸ್ಥಿತಿ ಶೋಚನೀಯವಾಗಿದೆ. ಹಲವಾರುಭೇಡಿಕೆ ಇಟ್ಟರೂ ಇಲ್ಲಿಯವರಿಗೂ ಸರ್ಕಾರದಿಂದ ಸಮಾಜಾಭಿವೃದ್ಧಿಗೆ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

        ಡಾ.ಅನ್ನಪೂರ್ಣಮ್ಮ ವರದಿ ಪ್ರಕಾರ ಸಮಾಜದವರು ಶೇ 99 ಕೂಲಿಕೆಲಸ, ಕುಲಕಸಬು ಮಾಡುತ್ತಿದ್ದಾರೆ. ಈಗಾಗಲೇ 18 ರಾಜ್ಯಗಳಲ್ಲಿ ಎಸ್ಸಿ ಮೀಸಲಾತಿ ನೀಡಲಾಗಿದೆ. ಆಂಧ್ರದಿಂದ ಶಿಪಾರಸ್ಸು ಮಾಡಲಾಗಿದೆ. ರಾಜ್ಯ ಸರ್ಕಾರ ಸಮಾಜಾಭಿವೃದ್ಧಿ ಹಿತದೃಷ್ಟಿಯಿಂದ ಪರಿಶಿಷ್ಟ ಜಾತಿ ಸೇರಿಸಿ ಮಡಿವಾಳ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಪ್ರಮುಖ ನಗರಗಳಲ್ಲಿ 5 ಎಕರೆ ನಿವೇಶನ ಗುರುತಿಸಿ, 5 ಕೋಟಿ ಅನುದಾನ ನೀಡಿ ವಸತಿ ನಿಲಯ ಸ್ಥಾಪಿಸಿ ಶೈಕ್ಷಣೀಕ ಅಭಿವೃದ್ಧಿಗೆ ಮುಂದಾಗಬೇಕು ಎಂದು ಹೇಳಿದರು.

       ರಾಜ್ಯದಲ್ಲಿ 15 ಲಕ್ಷಕ್ಕೂ ಹೆಚ್ಚು ಸಮಾಜ ಬಾಂದವರಿದ್ದಾರೆ. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿದ್ದಾಗ ತಲಾ 50 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ಸಮಾಜದ ಜನರಿಗಾಗಿ ಕುಟೀರ ಹಾಗೂ ದೋಭಿಘಾಟ್ ಸ್ಥಳ ಗುರುತಿಸಬೇಕು. ಸಮ್ಮೇಳನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನರು ಆಗಮಿಸಿ ಯಶಸ್ವಿಗೊಳಿಸಿಬೇಕು ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಹರಾಳು ಅಶೋಕ, ಸಮಾಜದ ನಗರ ಘಟಕ ಚಂದ್ರಕಾಂತ, ಪ್ರಧಾನ ಕಾರ್ಯದರ್ಶಿ ತವಡೂರು ಭರಮಣ್ಣ, ಮಜ್ಜಿಗೇರೆ ಬಸವರಾಜ, ನಿಂಗಣ್ಣ, ಬಸವರಾಜ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link