ಸರಿಯಾಗಿ ಕಾರ್ಯ ನಿರ್ವಹಿಸದ ಬ್ಯಾಂಕ್ ಸಿಬ್ಬಂದಿ

ಐ.ಡಿ.ಹಳ್ಳಿ

        ಗ್ರಾಮದ ಎಸ್.ಬಿ.ಐ.ಬ್ಯಾಂಕಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಹಾಗೂ ಖಾತೆದಾರರಿಗೆ ಹೊಸದಾಗಿ ಖಾತೆ ತೆರೆಯಲು ತುಂಬಾ ಕಿರಿಕಿರಿ ಆಗುತ್ತಿದೆ.

        ಈ ಗ್ರಾಮದಲ್ಲಿರುವ ಎಸ್.ಬಿ.ಐ. ಬ್ಯಾಂಕಿಗೆ ಸುಮಾರು 34 ಹಳ್ಳಿಗಳಿಂದ ಖಾತೆದಾರರು ಬರುತ್ತಿದ್ದು.ಈ ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸುವ ಮ್ಯಾನೇಜರ್ ಮತ್ತು ಸಿಬ್ಬಂದಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಅದ್ದರಿಂದ ಇಲ್ಲಿನ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೊಸದಾಗಿ ಬ್ಯಾಂಕ್ ಖಾತೆ ಮಾಡಿಕೊಡಲು ಸುಮಾರು ಐದು ತಿಂಗಳ ಕಾಲ ಕಾಯ ಬೇಕಾದಂತಹ ಪರಿಸ್ಥಿತಿ ಇದೆ. ಆದರೂ ಸಹ ಈ ಗ್ರಾಮದ ಸುತ್ತಮುತ್ತಲಿನ ಜನರು ಮಾತ್ರ ದಿನನಿತ್ಯ ಬಂದು ಬಂದು ವಾಪಸ್ಸು ಹೋಗುತ್ತಿದ್ದಾರೆ.

        ಈ ಬ್ಯಾಂಕಿಗೆ ಸುಮಾರು ಮೂರು ವರ್ಷಗಳ ಹಿಂದೆ ಸರ್ಕಾರದಿಂದ ಬಂದಿರುವಂತಹ ಲೋನ್ ಗಳನ್ನು ಸಹ ಕೊಡುತ್ತಿಲ್ಲಾ.ಕೇವಲ ಅದರಲ್ಲಿ ಸಬ್ಸಿಡಿ ಹಣವು ಸಹ ಸಿಗುತ್ತಿಲ್ಲ.ಈ ಹಣವನ್ನು ತೆಗೆದುಕೊಳ್ಳಬೇಕಾದರೆ ಮೇನೇಜರ್ ರವರ ಕೈಕಾಲು ಮುಗಿಯ ಬೇಕಾದಂತಹ ಪರಿಸ್ಥಿತಿ ಇದೆ.ಆದರೂ ಎಷ್ಟೋ ಬಾರಿ ಖಾತೆದಾರರು ಕೈಗೆ ಕಾಲ್ಗೆ ಬಿದ್ದರೂ ಸಹ ಮೆನೇಜರ್ ಅವರು ಬರೀ ಸುಳ್ಳು ಗಳನ್ನು ಹೇಳುತ್ತಾ ರೈತರಿಗೆ ಹಾಗೂ ಬಡ ಜನರಿಗೆ ಮುಂದಿನ ವಾರ ಬನ್ನಿ ಎಂದು ಸುಳ್ಳು ಆಶ್ವಾಸನೆಯನ್ನು ನೀಡಿದ್ದಾರೆ.

        ಶುಕ್ರವಾರ 11:00 ಗಂಟೆಗೆ ತೆರೆದ ಬ್ಯಾಂಕಿಗೆ ಜನಕಲೋಟಿ ಗ್ರಾಮದ ಶ್ರೀನಿವಾಸ್ ಎಂಬುವವರು ಮೆನೇಜರ್ ಬಳಿ ಹೋಗಿ ತನ್ನ ಮಗನ ಹೆಸರಿಗೆ ಹೊಸದಾಗಿ ಖಾತೆ ಮಾಡಿಸಲು ಹೋದಾಗ ಮೆನೇಜರ್ ಆತನನ್ನು ಬಾಯಿಗೆ ಬಂದಂತೆ ಕೆಟ್ಟ ಮಾತುಗಳಿಂದ ಬೈದಿದ್ದಾರೆ. ತಕ್ಷಣ ಪಕ್ಕದಲ್ಲಿದ್ದ ಖಾತೆದಾರರು ಮ್ಯಾನೇಜರ್ ಅವರನ್ನು ಬಾಯಿ ಬಿಗಿ ಹಿಡಿದುಕೊಂಡು ಮಾತನಾಡು ನಮ್ಮಿಂದ ನಿಮ್ಮ ಬ್ಯಾಂಕಿಗೆ ಲಾಭ ಬಿಟ್ಟರೆ ಬ್ಯಾಂಕಿನಿಂದ ನಮಗೇನು ಲಾಭ ಇಲ್ಲಮ ಆಕಸ್ಮಿಕವಾಗಿ ಲಾಭ ಬಂದರೂ ಸಹ ನೀವು ಅದನ್ನು ಕೊಡುವುದಿಲ್ಲಾ? ಮೊದಲು ನೀನು ಈ ಬ್ಯಾಂಕಿಗೆ ಬರುವವರನ್ನು ಪ್ರೀತಿಯಿಂದ ಮಾತನಾಡುವುದನ್ನು ಕಲಿ ಎಂದು ಹೇಳಿದರು

          ಆದರೂ ಸಹ ಯಾರ ಮಾತನ್ನು ಕೇಳದೆ ಮೆನೇಜರ್ ರವರು ಖಾತೆದಾರರಿಗೆ ಮತ್ತೆ ಬಯ್ಯಲು ಶುರುಮಾಡಿದರು ಆಗ ಇಬ್ಬರಿಗೂ ಪರಸ್ಪರ ಮಾತುಗಳ ಚಕಮಕಿ ನಡೆದು ತಕ್ಷಣ ಮ್ಯಾನೇಜರ್ ರವರು ಬ್ಯಾಂಕಿನಿಂದ ಹೊರಗೆ ಹೋಗಿ ಮಿಡಿಗೇಶಿ ಪೆÇಲೀಸ್ ಠಾಣೆಗೆ ದೂರು ನೀಡಲು ಹೊರಟರು.ಈ ವಿಷಯ ತಿಳಿದ ಕೆಲವು ಜನಪ್ರತಿನಿಧಿಗಳು ಬ್ಯಾಂಕ್ ಮ್ಯಾನೇಜರ್ ರವರಿಗೆ ಕರೆ ಮಾಡಿ ಸಮಾಧಾನದಿಂದ ವಾಪಸ್ಸು ಬರುವಂತೆ ಹೇಳಿದರು.

          ಮಿಡಿಗೇಶಿ ಯಿಂದ ಬ್ಯಾಂಕಿಗೆ ವಾಪಸ್ಸು ಬಂದ ಮೇಲೆ ಮೆನೇಜರ್ ರವರು ತನ್ನ ಬ್ಯಾಂಕಿನಲ್ಲಿ ಖಾತೆ ದಾರರಿಗೆ ಅಳುತ್ತಾ ಉತ್ತರಿಸಲು ತೊಡಗಿದರು ಇದನ್ನು ಗಮನಿಸಿದ ಖಾತೆದಾರರು ಹತ್ತು ನಿಮಿಷಗಳ ಕಾಲ ಸುಮ್ಮನಾದರು.ಮತ್ತೆ ಬ್ಯಾಂಕ್ ಮ್ಯಾನೇಜರ್ ಅವರನ್ನು ಪ್ರಶ್ನಿಸಲು ಶುರು ಮಾಡಿದರು. ಹೊಸದಾಗಿ ಖಾತೆಗಳನ್ನು ಮಾಡಿಕೊಡಲು ಏಕೆ ತಡ ಮಾಡುತ್ತಿದಿಯಾ? ಮತ್ತು ಸರ್ಕಾರದಿಂದ ಬಂದಿರುವಂತಹ ಲೋನು ಮತ್ತು ಸಬ್ಸಿಡಿ ಏಕೆ ನೀನು ಕೊಡುತ್ತಿಲ್ಲ? ಎಂದು ಆಕ್ರೋಶದಿಂದ ಕೇಳಿದರು. ಸಹಾ ಮೆನೇಜರ್ ರವರು ಉತ್ತರ ಹೇಳಲಿಲ್ಲ ಆದ್ದರಿಂದ ಬ್ಯಾಂಕಿನಲ್ಲಿ ಇದ್ದ ಖಾತೆದಾರರು ಬ್ಯಾಂಕಿನಿಂದ ಹೊರಗಡೆ ಬಂದು ಸೋಮವಾರ ಇದೇ ರೀತಿ ನಡೆದರೆ ಎಲ್ಲರೂ ಒಗ್ಗಟ್ಟಿನಿಂದ ಬ್ಯಾಂಕ್ ಮುಂದೆ ಪ್ರತಿಭಟನೆ ಮಾಡೋಣ.ಎಂಬಂತಹ ಮಾತುಗಳು ಕೇಳಿ ಬರುತ್ತಿದ್ದವು. ಆದ್ದರಿಂದ ಸೋಮವಾರ ಏನಾಗುತ್ತದೆಯೋ ಕಾದುನೋಡಬೇಕಾಗಿದೆ.

         ಈ ಸಂದರ್ಭದಲ್ಲಿ ಸಮಾಜಸೇವಕರಾದ ಅಶೋಕ್ ರೆಡ್ಡಿ,ಬಿ.ಎಸ್.ಪಿ.ರಾಜಣ್ಣ, ಜನಕೋಟಿ ಗ್ರಾಮದ ಜಯ್ ರಾಮ್, ಶ್ರೀನಿವಾಸ್, ಜೈ ಕರ್ನಾಟಕ ಸಂಘದ ಅಧ್ಯಕ್ಷ ಶಿವಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ನಾಗೇಶ್, ಗ್ರಾಮ ಪಂಚಾಯತಿ ಸದಸ್ಯರಾದ ಜಿಲಾನ್, ಸುರೇಶ್ ಯು,ಶಿವರಾಮ್ ರೆಡ್ಡಿ, ಉಮೇಶ್, ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷರಾದ ಯುವರಾಜ್ ಮುಂತಾದವರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link