ಹಗರಿಬೊಮ್ಮನಹಳ್ಳಿ
ಏಪ್ರೀಲ್ 2006 ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಜಾರಿಗೊಳಿಸಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಮತ್ತು ಹಿಂದೆ ಇದ್ದಂತೆ ನಿಶ್ಚಿತ ಪಿಂಚಣಿ ಯೋಜನೆಯನ್ನು ಮರುಜಾರಿಗೆ ತರುವಂತೆ ಒತ್ತಾಯಿಸಿ, ಇದೇ ಡಿ.12ರಂದು ಬೆಳಗಾವಿ ಚಲೋ ಬೃಹತ್ ಪಾದಯಾತ್ರೆ ಮತ್ತು ಅಹೋರಾತ್ರಿ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಯು.ಗೋಣಿಬಸಪ್ಪ ತಿಳಿಸಿದರು.
ಅವರು ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನಮ್ಮ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಅಧಿವೇಶನದಲ್ಲಿ, ದೆಹಲಿ ಮಾದರಿಯಲ್ಲಿ ಶಾಸನ ಸಭೆಯ ಅನುಮೋದನೆ ಪಡೆದು ಹಲವು ದಶಕಗಳಿಂದ ಜಾರಿಯಲ್ಲಿರುವ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಲು ಸಂಘಟನೆ ಒತ್ತಾಯಿಸಲಾಗುವುದು ಎಂದರು. ಜೆ.ಡಿ.ಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮುಖ್ಯಮಂತ್ರಿಗಳೇ ಕೊಟ್ಟ ಮಾತನ್ನು ಉಳಿಸಿ ಎನ್ಪಿಎಸ್ ರದ್ದುಪಡಿಸಿ ಎಂಬುದು ಈ ಪ್ರತಿಭಟನೆಯ ಘೋಷಣೆಯಾಗಿದೆ ಎಂದರು.
ಈ ಯೋಜನೆಗೆ ಒಳಪಟ್ಟ ಎಲ್ಲಾ ಇಲಾಖೆಗಳ ಎನ್ಪಿಎಸ್ ನೌಕರರು ಬೆಳಗಾವಿ ಚಲೋ ಬೃಹತ್ ಪಾದಯಾತ್ರೆ ಹಾಗೂ ಅಹೋರಾತ್ರಿ ಸತ್ಯಾಗ್ರಹ ಹೋರಾಟದಲ್ಲಿ ಭಾಗವಹಿಸಿ ತಮ್ಮ ಸಂದ್ಯಾಕಾಲಕ್ಕೆ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರುವಂತೆ ಒತ್ತಾಯಿಸಲು ಕಡ್ಡಾಯವಾಗಿ ಭಾಗವಹಿಸುವಂತೆ ಕರೆ ನೀಡಿದರು.
ಸಂಘಟನೆಯ ಖಜಾಂಚಿ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಕೆ.ಯಂಕಾರೆಡ್ಡಿ, ಜಿಲ್ಲಾ ಉಪ್ಪಾಧ್ಯಕ್ಷ ಮಹಾಂತೇಶ್, ಸಂಘಟನಾ ಕಾರ್ಯದರ್ಶಿ ಎಸ್.ಆಂಜನೇಯ, ಮಹಮ್ಮದ್ ಸುಬಾನಿ, ಹರೀಶ್, ಮಂಜನಗೌಡ, ಅಂಜಿನಪ್ಪ, ಗುರುಬಸಪ್ಪ, ಶಿವಲಿಂಗಸ್ವಾಮಿ, ಶೇಖರ್, ವಿದ್ಯಾವತಿ, ಕವಿತಾ, ವೀರನಗೌಡ, ಮಂಜಪ್ಪ, ಮಂಜುನಾಥ, ರಾಮಕೃಷ್ಣ, ನಾಗರಾಜ ಯು.ಹೆಚ್, ನಾಗರಾಜ, ಸಿಕಂದರ್, ವಿರುಪಾಕ್ಷಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
