ಪಲಾನುಭವಿಗಳಿಗೆ ಏಜನ್ಸಿಯಿಂದ ವಂಚನೆ

ಹರಪನಹಳ್ಳಿ

        ಗಂಗಾ ಕಲ್ಯಾಣ ಪಲಾನುಭವಿಗಳಿಗೆ ಏಜನ್ಸಿಯವರು ವಂಚನೆ ಮಾಡುತ್ತಿರುವುದನ್ನು ರೈತ ಸಂಘದ ಕಾರ್ಯಕರ್ತರು ತಡೆ ಗಟ್ಟಿ ರೈತರಿಗೆ ನ್ಯಾಯ ಒದಗಿಸಿದ ಘಟನೆ ತಾಲೂಕಿನ ದುಗ್ಗಾವತ್ತಿ ಬಳಿ ಮಂಗಳವಾರ ಜರುಗಿದೆ.

        ತಾಲೂಕಿನಲ್ಲಿ ಗಂಗಾ ಕಲಾಣ ಯೋಜನೆಯಲ್ಲಿ ರೈತರಿಗೆ ಕೊಳವೆ ಬಾವಿಗಳು ಮಂಜೂರಾಗಿದ್ದು, 420 ರಿಂದ 460 ಅಡಿ ವರೆಗೆ ನೀರು ಬಿದ್ದಿದೆ, ಮೋಟಾರು, ಪೈಪು, ವಿದ್ಯುತ್ ಅಳವಡಿಸಿ ನೀರನ್ನು ಎತ್ತಿ ಕೊಡಬೇಕಾದ್ದು, ಏಜನ್ಸಿಯವರ ಕರ್ತವ್ಯ ವಾಗಿದೆ.
ಆದರೆ ಏಜನ್ಸಿಯವರು ಕೆಲವರಿಗೆ 1 ಪೈಪು, 20 ಅಡಿ ಕೇಬಲ್ ಮಾತ್ರ ನೀಡಿದ್ದಾರೆ. ಇನ್ನೂ ಕೆಲವರಿಗೆ ಮೋಟಾರು, ಪಂಪು ಮಾತ್ರ ಹೀಗೆ ಸಾಮಾಗ್ರಿಗಳ ಪೂರೈಕೆಯಲ್ಲಿ ತಾರತಮ್ಯ ವೆಸಗಿದ್ದಾರೆ.

        ಮಂಗಳವಾರ ದುಗ್ಗಾವತ್ತಿ ಬಳಿ ಲಾರಿಯಲ್ಲಿ ಈ ರೀತಿ ಒಬ್ಬೊಬ್ಬರಿಗೆ ಒಂದೋ ಎರಡೊ ಪೈಪುಗಳನ್ನು ನೀಡಲು ಆಗಮಿಸಿದಾಗ ಪಲಾನುಭವಿಗಳು ರೈತ ಸಂಘದ ಜಿಲ್ಲಾದ್ಯಕ್ಷ ಅರಸನಾಳು ಸಿದ್ದಪ್ಪ ಅವರಿಗೆ ತಾರತಮ್ಯ, ಮೋಸ ಕುರಿತು ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ.

          ಆಗ ಸಿದ್ದಪ್ಪ ಅವರು ತಾಲೂಕು ಅಧ್ಯಕ್ಷ ದ್ಯಾಮಜ್ಜಿ ಹನುಮಂತಪ್ಪ, ತಾಳೇದಹಳ್ಳಿ ಶೀಲನಾಯ್ಕ, ಅರಸನಾಳು ಯಲ್ಲಪ್ಪ ಜೊತೆಗೂಡಿ ಘಟನಾ ಸ್ಥಳಕ್ಕೆ ಆಗಮಿಸಿ ಸಮರ್ಪಕ ವಾಗಿ ಸಾಮಾಗ್ರಿ ವಿvರಿಸಿ ಎಂದು ಪ್ರತಿಭಟನೆ ಮಾಡಿದ್ದಾರೆ. ಆದಾಗ್ಯು ಬಗ್ಗದಿದ್ದಾಗ ಗಂಗಾ ಕಲ್ಯಾಣ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ರಘುಪತಿ ಅವರ ಬಳಿ ದೂರವಾಣಿಯಲ್ಲಿ ದೂರು ಸಲ್ಲಿಸಿದಾಗ ಅವರು ಏಜನ್ಸಿಯವರಿಗೆ ತರಾಟೆಗೆ ತೆಗೆದುಕೊಂಡು ನಿಯಮದಂತೆ ಸಾಮಾಗ್ರಿ ಕೊಡಲು ಸೂಚಿಸಿದ್ದಾರೆ.

          ಈ ಕುರಿತು ಪ್ರತಿಕ್ರಿಯೆ ನೀಡಿದ ರೈತ ಸಂಘದ ಜಿಲ್ಲಾದ್ಯಕ್ಷ ಅರಸನಾಳು ಸಿದ್ದಪ್ಪ ಅವರು ಅಂತಿಮವಾಗಿ 8 ಜನ ಪಲಾನುಭವಿಗಳಿಗೆ 18-19 ಪೈಪು ನೀಡಿ, ಉಳಿದವರಿಗೆ ಶನಿವಾರ ನೀಡುತ್ತೇವೆ ಎಂದು ಹೇಳಿ ಹೋಗಿದ್ದಾರೆ, ಎಲ್ಲಾ ಪಲಾನುಭವಿಗಳಿಗೂ ಸಮರ್ಪಕವಾಗಿ ಸಾಮಾಗ್ರಿ ನೀಡದಿದ್ದರೆ ಮತ್ತೆ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link