ಗಾಂಜಾ ಮಾರಟಗಾರನ ಬಂಧನ

ಹಿರಿಯೂರು:
       
        ನಗರದ ಹೊರವಲಯದ ಹೊಸದುರ್ಗ ರಸ್ತೆಯ ವಿವಿ ಪುರ ಕ್ರಾಸ್ ಬಳಿ ಬುಧವಾರ ರಾತ್ರಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ವೈಕ್ತಿರ್ಯೋವನನ್ನು ಬಂದಿಸಿರಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಆತನಿಂದ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ. 
 
        ಮೂಲತ ವಿವಿ ಗ್ರಾಮದವನಾಗಿರುವ ವಿಶ್ವನಾಥ್ ಬಿನ್ ಪೆರುಮಾಳ್ ಬಂಧಿತ ಆರೋಪಿ. ಹಿರಿಯೂರು ನಗರದ ಹರೀಶ್ಚಂದ್ರ ಘಾಟ್ ಮಸೀದಿ ಬಳಿ ವಾಸವಗಿರುವ ಈತ, 40,000 ರೂ ಮೌಲ್ಯದ 20 ಕೆಜಿ 400ಗ್ರಾಂ ತೂಕದ ಒಣ ಗಾಂಜಾವನ್ನು ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. 
         ಅಬಕಾರಿ ನಿರೀಕ್ಷಕ ಎಲ್ .ಮಧುಸೂದನ್ ,ಉಪ ನಿರೀಕ್ಷಕರಾದ ಎಲ್.ಸಿ. ಸಂದೀಪ್ ,ಸತೀಶ, ರಮೇಶ್ ದೇವು ರಾಠೋಡ್ ಗಸ್ತು ತಿರುಗುವ ಸಂದರ್ಭದಲ್ಲಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link