24×7 ನೀರು ಸರಬರಾಜುಯೋಜನೆಯಅರಿವು ಕಾರ್ಯಕ್ರಮ

ರಾಣೇಬೆನ್ನೂರ

         ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಹಾಗೂ ಎಷಿಯನ್‍ಅಭಿವೃದ್ದಿ ಬ್ಯಾಂಕ್ ನೆರವಿನ ಸಹಯೋಗದೊಂದಿಗೆಕರ್ನಾಟಕನೀರು ಸರಬರಾಜು ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ ಜಲಸಿರಿ, ಫಲಿತಾಂಶಆಧಾರಿತ ನೇರವು  ಶೌಚಾಲಯ ಕಾರ್ಯಕ್ರಮ, ಹಾಗೂ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ (ನೀಡ್ಸ್) ರಾಣೇಬೆನ್ನೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ “ಶೌಚಾಲಯಅರಿವು ಮತ್ತು ಒಳಚರಂಡಿ ಸಂಪರ್ಕ 24×7 ನೀರು ಸರಬರಾಜುಯೋಜನೆಯಅರಿವು ಕಾರ್ಯಕ್ರಮ”ವನ್ನುದಿನಾಂಕ 22-12-2018ರಂದುರಾಣೇಬೆನ್ನೂರ ನಗರದಕುರುಬಗೇರಿಯಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳೊಂದಿಗೆ ಜಾಥಾಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಯಿತು.

        ಈಕಾರ್ಯಕ್ರಮದಲ್ಲಿ ಮಕ್ಕಳು ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕುಗುತ್ತಾಯೋಜನೆಯ ಬಗ್ಗೆ ಜನರಿಗೆಅರಿವು ಮೂಡಿಸುತ್ತಾಈ ವಿದ್ಯಾರ್ಥಿಗಳು ಜಾಥಾವನ್ನು ಶಾಲೆಯಿಂದ ಹೊರಟುಕುದರಿಯವರಓಣಿ, ಶ್ರೀ ಬೀರೇಶ್ವರದೇವಸ್ಥಾನ, ಹನಗೋಡಿಮಠದವರಓಣಿ ಮುಖಾಂತರ ಬಂದು ಶಾಲೆಯಲ್ಲಿಮುಕ್ತಾಯಗೊಂಡಿತು.

          ಈ ಕಾರ್ಯಕ್ರಮದಲ್ಲಿ ನೀಡ್ಸ್ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಎಚ್‍ಎಫ್ ಅಕ್ಕಿ ಇವರು, ಶಾಲಾ ಮುಖ್ಯೋಪಾದ್ಯಾಯರಾದ ಶ್ರೀಮತಿ ಜಯಶ್ರೀ ಅಂಚೇರ್, ಸಾರ್ವಜನಿಕ ಸಂವಹನ ತಜ್ಞರಾದ ಶ್ರೀ ಎಚ್ ಉಮೇಶ, ಸಾಮಾಜಿಕ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಸುನಿತಾಜಾಧವ್, ಸಮುದಾಯಅನುವುಗಾರರಾದ ಶ್ರೀ ಪ್ರವೀಣ ಮಜ್ಜಗಿ, ಶ್ರೀ ಸಂತೋಷ ವರವಜ್ಜಿ, ಶ್ರೀ ಮನೋಹನ ಇಜಂತಕರ್‍ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿದ್ದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link