ಬದುಕಿನ ವಿಕಾಸಕ್ಕೆ ಧರ್ಮವೇ ತಳಹದಿ

ದಾವಣಗೆರೆ:

         ಬದುಕಿನ ವಿಕಾಸಕ್ಕೆ ಧರ್ಮವೇ ತಳಹದಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಜಗದ್ಗುರು ಪೀಠದ ಡಾ||ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು

           ನಗರದ ಶ್ರೀಮದಭಿನವ ರೇಣುಕ ಮಂದಿರದಲ್ಲಿ ಶ್ರೀಜಗದ್ಗುರು ರೇಣುಕ ಸಾಂಸ್ಕತಿಕ ಸಂಘದವರು ಸಂಯೋಜಿಸಿದ ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ 36ನೇ ವರ್ಷದ ಪುಣ್ಯಾರಾಧನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

        ಸತ್ಯ ಶುದ್ಧ ಸಂಸ್ಸತಿಯನ್ನು ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇಂದಿನ ವೈಚಾರಿಕ ಪ್ರಪಂಚದಲ್ಲಿ ಧರ್ಮ ಬೆಳೆಸುವುದು ಕಷ್ಟದ ಕೆಲಸ. ಆದರೆ, ಧರ್ಮ ಕೆಡಿಸುವುದು ಬಲು ಸುಲಭವಾಗಿದೆ ಎಚಿದ ಅವರು, ವೀರಶೈವ ಧರ್ಮ ಉತ್ಕಷ್ಟವಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಬಂದಿದೆ. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ವೀರಶೈವ ಧರ್ಮ ಸಿದ್ಧಾಂತದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯರು ಜೀವನ ದರ್ಶನದ ಅಮೂಲ್ಯ ವಿಚಾರಗಳನ್ನು ಪ್ರತಿಪಾದಿಸಿದ್ದಾರೆಂದು ನುಡಿದರು.

        ಲಿಂ.ಶ್ರೀಮದ್ ರಂಭಾಪುರಿ ವೀರ ಗಂಗಾಧರ ಜಗದ್ಗುರುಗಳವರು ಧರ್ಮಕ್ಕಾಗಿ ಏಳಿರಿ ಧರ್ಮಕ್ಕಾಗಿ ಬಾಳಿರಿ ಧರ್ಮಕ್ಕಾಗಿ ತಾಳಿರಿ ಎಂಬ ಅದ್ಭುತ ಸಂದೇಶ ಸಾರಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಅವರ ಸಂದೇಶ ಇಂದು ಎಲ್ಲರ ಮಂತ್ರವಾಗಬೇಕಾಗಿದೆ. ಅವರ ಜೀವನದ ಸಿದ್ಧಿ ಸಾಧನೆಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರಲಿ ಎಂದು ಶುಭ ಹಾರೈಸಿದರು.
ಮಲೆಬೆನ್ನೂರಿನ ಬಿ.ಎಂ. ನಚಿಜಯ್ಯ ಮಾತನಾಡಿ, ಲಿಂ.ಶ್ರೀರಂಭಾಪುರಿ ವೀರ ಗಂಗಾಧರ ಜಗದ್ಗುರುಗಳವರು ಅಭಿನವ ರೇಣುಕರಾಗಿ ಶಿವನ ಸಾಕಾರ ರೂಪದಂತೆ ಕಂಗೊಳಿಸುತ್ತಿದ್ದರು. ಅವರು ಕೊಟ್ಟ ಸಂದೇಶ-ಸಂಸ್ಕಾರ ನಾವೆಂದಿಗೂ ಮರೆಯಲಾಗದು. ವೀರಶೈವ ಧರ್ಮದ ಸಮಗ್ರತೆ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಎಲ್ಲ ಒಳ ಪಂಗಡಗಳು ವಿಶೇಷ ಗಮನ ಹರಿಸಬೇಕಾದುದು ಅಗತ್ಯವಿದೆ ಎಂದರು.
ಪ್ರೊ. ವೈ. ವೃಷಬೇಂದ್ರಪ್ಪ ಅವರಿಗೆ ಲಿಂ. ಶ್ರೀ ರಂಭಾಪುರಿ ವೀರ ಗಂಗಾಧರ ಜಗದ್ಗುರುಗಳವರ ಹೆಸರಿನಲ್ಲಿ ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳವರು ಶುಭ ಹಾರೈಸಿದರು.

        ಮಹಾಸಭಾ ಉಪಾಧ್ಯಕ್ಷ ಅಥಣಿ ವೀರಣ್ಣ, ಶಾಸಕ ಎಸ್.ಎ. ರವೀಂದ್ರನಾಥ, ದೇವರಮನೆ ಶಿವಕುಮಾರ್, ಎಸ್.ಎಂ. ಮುರುಗೇಶ, ದಿನೇಶ ಕೆ. ಶೆಟ್ಟಿ ಉಪಸ್ಥಿತರಿದ್ದರು.

         ಡಾ|| ಜಿ.ಎಸ್. ಪರಶುರಾಮಪ್ಪ, ಲೀಲಾವತಿ ಕೊಟ್ರೇಶ್ ಮುನವಳ್ಳಿ, ಕುಸುಮ ಶಿವಯೋಗಿ ಹಿರೇಮಠ, ಸುಶೀಲಮ್ಮ ದಾನಪ್ಪ, ಕೆ.ಎಂ. ಚನ್ನಯ್ಯಸ್ವಾಮಿ, ಮೋತಿ ರುದ್ರೇಶ್ ನರೇಶ ರೆಡ್ಡಿ, ಸಂತೋಷ, ಹೆಚ್.ಕೆ.ಸಿ. ರಾಜು ಮೊದಲಾದವರಿಗೆ ಗುರು ರಕ್ಷೆ ನೀಡಿ ಶುಭ ಹಾರೈಸಿದರು.

          ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶ್ರೀಗಳು ನೇತೃತ್ವ ವಹಿಸಿದ್ದರು. ಆವರಗೊಳ್ಳ ಪುರವರ್ಗ ವ್ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ, ನೆಗಳೂರು ಗುರುಶಾಂತೇಶ್ವರ ಸ್ವಾಮೀಜಿ, ಅಮ್ಮಿನಭಾವಿ ಅಭಿನವ ಶಾಂತಲೀಂಗ ಸ್ವಾಮೀಜಿ, ಚನ್ನಗಿರಿ ಕೇದಾರ ಶಿವಶಾಂತವೀರ ಶ್ರೀಗಳು, ಮಳಲಿ ಡಾ|| ನಾಗಭೂಷಣ ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

        ವೀರೇಶ್ವರ ಪುಣ್ಯಾಶ್ರಮ ಮಕ್ಕಳಿಂದ ಸಂಗೀತ, ವೀರಣ್ಣ ಬಿ. ಶೆಟ್ಟರು ಇವರಿಂದ ಸ್ವಾಗತ, ಕೆ.ಎಸ್. ವೀರಭದ್ರಪ್ಪ ಇವರಿಂದ ನಿರೂಪಣೆ ನಡೆಯಿತು. ಶಿವಮೊಗ್ಗದ ಕುಮಾರಿ ಜಿ.ಜಿ. ರಕ್ಷಿತಾ ಅವರಿಂದ ಆಕರ್ಷಕ ಭರತ ನಾಟ್ಯ ಜರುಗಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link