ಕೊರಟಗೆರೆ
ರಾಜ್ಯ ಸಮ್ಮಿಶ್ರ ಸರ್ಕಾರರೈತರ, ಕಾರ್ಮಿಕರ, ಬಡವರ ಪರವಾಗಿ ಕೆಲಸ ಮಾಡುತ್ತಿದ್ದು ಹಿಂದಿನ ಸಿದ್ದರಾಮಯ್ಯ ಸರ್ಕಾರದಜನಪರ ಯೋಜನೆಗಳನ್ನು ಮುಂದುವರೆಸಲು ಬದ್ದವಾಗಿದೆಎಂದುಉಪಮುಖ್ಯಮಂತ್ರಿಡಾ ಜಿ.ಪರಮೇಶ್ವರ ತಿಳಿಸಿದರು.
ಅವರು ತಾಲ್ಲೂಕಿನ ಚನ್ನ ರಾಯನದುರ್ಗ ಹೋಬಳಿಯ ತೋವಿನಕೆರೆ ಗ್ರಾಮದ ಗ್ರಾ ಪಂ ನಲ್ಲಿ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿರೈತರ ಹತ್ತು ಸಾವಿರಕೋಟಿ ಸಾಲವನ್ನು ಮನ್ನಾ ಮಾಡಲಾಗಿತ್ತು ಈ ಬಾರಿ ಸಮ್ಮಿಶ್ರ ಸರ್ಕಾರದಲ್ಲಿರೈತರ ಸಹಕಾರಿ ಬ್ಯಾಂಕ್ಗಳಲ್ಲಿ ಸಾಲ ಮನ್ನಾ ಮಾಡಲು ಬದ್ದವಾಗಿದ್ದು, ಕೇಂದ್ರ ಸರ್ಕಾರವುರೈತರ ಸಾಲ ಮನ್ನಾ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ನಮ್ಮರಾಷ್ಟ್ರೀಯ ನಾಯಕರಾಹುಲ್ಗಾಂಧಿಯಅಪೇಕ್ಷೆಯಂತೆಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸಕಾರವುರೈತರ 49.000 ಕೋಟಿ ಸಾಲವನ್ನು ಮನ್ನಾ ಮಾಡುವದೃಡ ನಿರ್ಧಾರವನ್ನುಕೈಗೊಂಡಿದ್ದು, ರೈತರಿಗೆ ಹಂತ ಹಂತವಾಗಿಎಲ್ಲಾ ಬ್ಯಾಂಕ್ಗಳ ಸಾಲವನ್ನು ಸರ್ಕಾರವೂ ತೀರಿಸಿ ಋಣಮುಕ್ತ ಪತ್ರವನ್ನು ನೀಡಲಾಗುವುದು ಈ ವಿಚಾರದಲ್ಲಿ ಸರ್ಕಾರವು ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.
ಕೊರಟಗೆರೆ ಕ್ಷೇತ್ರಕ್ಕೆ ಕಳೆದ ಬಾರಿ 8.000 ಮನೆಗಳನ್ನು ಮುಂಜೂರು ಮಾಡಿಸಿದ್ದು ಇನ್ನೂ ಹಲವು ಮನೆಗಳನ್ನು ಬಡವರಿಗೆ ಮುಂಜೂರು ಮಾಡಲಾಗುವುದು ಈಗಾಗಲೇ ಮುಂಜೂರಾಗಿರುವ ಮನೆಗಳಿಗೆ ರಾಜ್ಯದಲ್ಲಿ 18.000 ಕೋಟಿ ಬಾಕಿ ಇದ್ದುಅದನ್ನು ಪ್ರಥಮವಾಗಿ ಬಿಡುಗಡೆ ಮಾಡಲಾಗುವುದುರೈತರ ಸಾಲ ಮನ್ನಾ ಮಾಡುವುದರೊಂದಿಗೆ ಮನೆಗಳನ್ನು ಸಹ ಮುಂಜೂರು ಮಾಡಲಾಗುವುದು.
ರಾಜ್ಯದಲ್ಲಿ ನೀರಾವರಿಗೆ ಹೆಚ್ಚಿನಆದ್ಯತೆ ನೀಡಲಾಗಿದ್ದು, ಎತ್ತಿನಹೊಳೆ ಯೋಜನೆಗೆ ಸರ್ಕಾರ ಬದ್ದವಾಗಿದ್ದು ಈ ಸಂಭಂಧಕೊರಟಗೆರೆ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿಐದು ಸಾವಿರಎಕರೆ ಭೂ ಪ್ರದೇಶದಲ್ಲಿ ಬೃಹತ್ ಬಫರ್ಡ್ಯಾಂ ನಿರ್ಮಿಸಲಾಗುವುದು ರೈತರಿಗೆ ನಿಖರ ಪರಿಹಾರ ಕೊಡಿಸಲಾಗುವದು ಹಾಗೂ ತೋವಿನಕೆರೆ ಕೆರೆಗೆ ಬುಗುಡನಹಳ್ಳಿ ಕೆರೆಯಂತೆ ಹೇಮಾವತಿ ನೀರನ್ನು ಸಂಗ್ರಹಿಸಿ ಈ ಭಾಗಕ್ಕೆ ನೀರು ಹರಿಸುವ ಆಲೋಚನೆ ಸಹ ಇದೆ, ತೋವಿನಕೆರೆ, ನಂದಿಹಳ್ಳಿ, ವಸಂತ ನರಸಾಪುರ ಲಿಂಕ್ ರಸ್ತೆಗೆ 7.5 ಕೋಟಿ, ಸೂರೇನಹಳ್ಳಿ, ಕಬ್ಬಿಗೆರೆ ರಸ್ತೆಗೆ 4.5 ಕೋಟಿ ಮುಂಜೂರು ಮಾಡಿಸಲಾಗಿದ್ದು , ತೋವಿನಕೆರೆ ಪ್ರೌಡಶಾಲಾ ವಿದ್ಯಾರ್ಥಿನಿಯರ ಅಪೇಕ್ಷೆಯಂತೆ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ತೋವಿನಕೆರೆ ಸರ್ಕಾರಿ ಪ್ರೌಡಶಾಲೆಗೆಆಂಗ್ಲ ಮಾದ್ಯಮವನ್ನು ಮುಂಜೂರು ಮಾಡಿಸುವ ಭರವಸೆ ನೀಡಿದರು.
ಸಭೆಯಲ್ಲಿ ಸಂಸದ ಮುದ್ದಹನುಮೇಗೌಡ, ಜಿಲ್ಲಾದಿಕಾರಿರಾಕೇಶ್ಕುಮಾರ್, ಸಿಇಒ ಅನೀಸ್ಕಣ್ಮಣಿಜಾಯ್, ಎಸ್ಪಿ ದಿವ್ಯಾಗೋಪಿನಾಥ್, ಗ್ರಾ,ಪಂ ಅದ್ಯಕ್ಷೆ ಸಿದ್ದಗಂಗಮ್ಮ, ತಾ.ಪಂ ಸದಸ್ಯೆಜ್ಯೋತಿ ಸ್ವಾಮಿ ಸೇರಿದಂತೆ ಉಪಸ್ಥಿತರಿದ್ದರು.
ಕ್ರಷರ್ಗಳ ಹಾವಳಿ;-ಕೊರಟಗೆರೆತಾಲ್ಲೂಕಿನಅಗ್ರಹಾರ, ಬುಕ್ಕಪಟ್ಟಣ, ಕುರಂಕೋಟೆಗ್ರಾ.ಪಂ ವ್ಯಾಪ್ತಿಯ ಪ್ರದೇಶಗಳಲ್ಲಿ ಕಲ್ಲುಗಣಿಗಾರಿಕೆಯ ಕ್ರಷರ್ಗಳ ಹಾವಳಿ ಹೆಚ್ಚಾಗಿದ್ದು, ಕ್ರಷರ್ಗಳ ಧೂಳಿನಿಂದ ಜಾನುವಾರುಗಳು ಮೇವಿಗೆ, ವ್ಯವಸಾಯಕ್ಕೆ ತೊಂದರೆಯಾಗುತ್ತಿದ್ದು ಕ್ರಷರ್ ಲಾರಿಗಳ ಅತೀವ ಭಾರದ ಸಾಗಾಣಿಕೆಯಿಂದ ರಸ್ತೆಗಳು ಹಾಳಾಗುತ್ತಿವೆ ಎಂದು ಸಾರ್ವಜನಿಕರು ಉಪಮುಖ್ಯಮಂತ್ರಿ ಡಾ ಜಿ.ಪರಮೇಶ್ವರಮುಂದೆತಮ್ಮ ಅಳಲು ತೊಡಿಕೊಂಡರು. ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ಮತ್ತು ಸಾರಿಗೆ ಅಧಿಕಾರಿಗಳಿಗೆ ಆದೇಶಿಸುವುದಾಗಿ ಉಪಮುಖ್ಯಮಂತ್ರಿ ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
