ಗುಬ್ಬಿ
ತಾಲ್ಲೂಕಿನ ಎಂ.ಹೆಚ್.ಪಟ್ಣ ಗ್ರಾಮದಲ್ಲಿ ದಲಿತರು ಸತ್ತರೆ ಅವರನ್ನು ಮಣ್ಣು ಮಾಡಲು ಸ್ಮಶಾನ ಸ್ಥಳವಿಲ್ಲದೆ ತೀವ್ಥರ ಸಮಸ್ಯೆಯಾಗಿದೆ ಕಳೆದ ಹಲವು ವರ್ಷಗಳಿಂದಲೂ ಗ್ರಾಮದ ದಲಿತರು ಮೃತಪಟ್ಟರೆ ಮಣ್ಣು ಮಾಡಲು ಇದ್ದಂತಹ ಸ್ಥಳವನ್ನು ಕೆಲವರು ಇಲ್ಲದಂತೆಯೆ ಮಾಡಿದ್ದಾರೆ ನಮಗೆ ಶವ ಸಂಸ್ಕಾರ ಮಾಡಲು ಸೂಕ್ತವಾದ ಸ್ಥಳಾವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಗ್ರಾಮದ ದಲಿತ ಮುಖಂಡರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ನಂತರ ತಹಸಿಲ್ದಾರ್ ಅವರಿಗೆ ಮನವಿ ಪತ್ರಸಲ್ಲಿಸಿದರು
ಜಿಲ್ಲಾ ಪಂಚಾಯತ್ ಸದಸ್ಯ ಜಗನ್ನಾಥ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಎಂ.ಎಚ್ ಪಟ್ಟಣ ಗ್ರಾಮದ ಸರ್ವೆ 45 ,46 ರಲ್ಲಿ 7-21 ಗಂಟೆ ಜಮೀನಿನಲ್ಲಿ 1.20 ಗುಂಟೆ ಜಮೀನನ್ನು ಅನಾಧಿ ಕಾಲದಿಂದಲೂ ಗ್ರಾಮಸ್ಥರು ಸ್ಮಸಾನವಾಗಿ ಬಿಟ್ಟಿರುತ್ತಾರೆ ಈ ಹಿಂದೆ ದೇವಾಲಯಕ್ಕೆ ಸಂಬಂಧಿಸಿದ ಜಮೀನಾಗಿದ್ದು ಈಗ ಅಂದರೆ 1975-76 ರಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಖಾತೆ ಮಾಡಿಸಿಕೊಂಡು ಬೇರೆಯವರಿಗೆ ಮಾರಾಟ ಮಾಡಿರುತ್ತಾರೆ ಇದರಿಂದಾಗಿ ಗ್ರಾಮದ ಅದಿ ಕರ್ನಾಟಕ ಜನಾಂಗದವರಿಗೆ ಶವ ಸಂಸ್ಕಾರ ಮಾಡಲು ಸ್ಥಳ ಇಲ್ಲದ ಕಾರಣ ಈ ಜಮೀನನನ್ನು ನಮ್ಮ ಜಾನಾಂಗಕ್ಕೆ ಸ್ಮಶನವನ್ನಾಗಿ ಮಾಡಿಕೊಳ್ಳಲು ಹಾಗೂ ತಾವುಗಳು ಖುದ್ದು ಸ್ಥಳ ಪರಿಶೀಲನೆ ಮಾಡಿ ನಮಗೆ 1.20 ಎಕರೆ ಗುಂಟೆ ಜಮೀನನನ್ನು ಶವ ಸಂಸ್ಕಾರಕ್ಕೆ ಸ್ಮಶಾನಕ್ಕೆ ಬಿಡಿಸಿಕೊಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಜಿ.ರಾಮಾಂಜುನಯ್ಯ ಮಾತನಾಡಿ ಹಿಂದಿನಿಂದಲೂ ದಲಿತ ಸಮುದಾಯದವರು ಮೃತಪಟಟ್ರೆ ಶವಸಂಸ್ಕಾರ ಮಾಡುತ್ತಿದ್ದ ಸ್ಥಳವನ್ನು ಖಾಸಗಿಯವರು ಇಲ್ಲದಂತೆ ಮಾಡಿದ್ದು ಇದರಿಂದ ದಲಿತ ಸಮುದಾಯಕ್ಕೆ ಸ್ಮಶಾನವಿಲ್ಲದಂತಾಗಿದೆ ದಲಿತರು ಸತ್ತರೆ ಎಲ್ಲಿ ಅವರನ್ನು ಮಣ್ಣು ಮಾಡಬೇಕು ಎಂಬುದು ಪ್ರಶ್ನೆಯಾಗಿದೆ. ಸರಕಾರದ ಆದೇಶವಿದೆ ದಲಿತರಿಗೆ ಸ್ಮಶಾನಕ್ಕೆ ಸ್ಥಳಾವಕಾಶ ನೀಡಬೇಕು ಆದರೆ ಈ ಗ್ರಾಮದಲ್ಲಿ ಆ ಕಾನೂನುಗಳನ್ನು ಗಾಳಿಗೆ ತೂರಿದ್ದಾರೆ ಇತ್ತಿಚೇಗೆ ಭೂಮಿಗೆ ಬೆಲೆ ಬಂದಿದೆ ಎಂದು ಶವ ಸಂಸ್ಕಾರದ ಜಾಗವನ್ನು ಮಾರಾಟ ಮಾಡಲು ಮುಂದಾಗಿರುವುದು ದುರಂತ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ತಾಲ್ಲೂಕು ಕಚೇರಿ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿದ ನಂತರ ತಹಸಿಲ್ದಾರ್ ಮಮತಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಗ್ರಾಮದ ದಲಿತ ಮುಖಂಡರಾದ ಗಿರೀಶ್, ಉಮೇಶ್, ಕುಮಾರ್, ರವಿಚಂದ್ರನ್, ಮೂರ್ತಿ, ನಂಜುಡಯ್ಯ, ನರಸಿಂಹಮೂರ್ತಿ ಮುಂತಾದವರು ಭಾಗವಹಿಸಿದ್ದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
