ಇಸ್ಲಾಮಾಬಾದ್:
![](http://prajapragathi.com/wp-content/uploads/2019/01/5bed8a6a42050.jpg)
ನಾವು ಎಷ್ಟೇ ಪ್ರಯತ್ನಿಸಿದರು ನಮ್ಮ ಜೊತೆ ಮಾತನಾಡಲು ಸಹ ಇಚ್ಚಿಸದ ಮೋದಿ ಸರ್ಕಾರಕ್ಕಿಂತ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಹೊಸ ಸರ್ಕಾರದೊಂದಿಗೆ ನಾವು ಸೌಹಾರ್ದಯುತವಾಗಿ ದ್ವಿಪಕ್ಷೀಯ ಸಂಬಂಧಕ್ಕಾಗಿ ಕಾಯುತ್ತೇವೆ ಎಂದು ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ತಿಳಿಸಿದೆ .
ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್ ಚೌದರಿ ಈ ಬಗ್ಗೆ ಹೇಳಿಕೆ ನೀಡಿದ್ದು, ‘ಭಾರತದೊಂದಿಗಿನ ದ್ವಿಪಕ್ಷೀಯ ಮಾತುಕತೆ ಪುನಾರಂಭಕ್ಕೆ ಪಾಕಿಸ್ತಾನ ಶತ ಪ್ರಯತ್ನ ಮಾಡುತ್ತಿದ್ದು ಈಗಿನ ಮೋದಿ ಸರ್ಕಾರ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ ಪ್ರಸ್ತುತ ಭಾರತ ಸರ್ಕಾರದ ಜೊತೆ ಚರ್ಚೆ ನಡೆಸುವುದು ವ್ಯರ್ಥ ಇನ್ನೂ ಏನೆ ಮಾತುಕತೆ ನಡೆಸಿದರು ಅದು ಮುಂದೆ ಬರುವ ಹೊಸ ಸರ್ಕಾರದೊಂದಿಗೆ ಮಾತ್ರ ಎಂದು ತಿಳಿಸಿದೆ.
![](https://prajapragathi.com/wp-content/uploads/2019/01/5bed8a6a42050.jpg)