ಬೆಂಗಳೂರು
ಖಾಸಗಿ ಕಂಪನಿಯಿಂದ ನೌಕರರಿಗೆ ನೀಡುತ್ತಿದ್ದ ವೇತನವನ್ನು ದುರುಪಯೋಗಪಡಿಸಿಕೊಂಡು ಒಂದು ಕೋಟಿಗೂ ಹೆಚ್ಚಿನ ವಂಚನೆ ನಡೆಸಿರುವ ಲೆಕ್ಕಾಧಿಕಾರಿಯೊಬ್ಬರ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಲೆಕ್ಕಾಧಿಕಾರಿ ಪ್ರದೀಪ್ ವಿರುದ್ಧ ವಿಧಿ ಕ್ಲಾತಿಂಗ್ ಕಂಪನಿಯ ಮಾಲೀಕರು ವಂಚನೆಯ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕಳೆದ 2012ರಲ್ಲಿ ವಿಧಿ ಕ್ಲಾತಿಂಗ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಪ್ರದೀಪ್ ಒಂದು ವರ್ಷಗಳವರೆಗೂ ನಂಬಿಕಸ್ಥನಾಗಿಯೇ ಕಾರ್ಯನಿರ್ವಹಿಸಿ ಮಾಲೀಕ ಗೌತಮ್ಟಿ. ಜೈನ್ ಅವರಿಗೆ ತಿಳಿಯದಂತೆ ವಂಚನೆ ಮಾಡಿದ್ದಾನೆ.
ಈ ಕಂಪನಿಯಲ್ಲಿ ಸುಮಾರು 350 ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದು ಪ್ರತಿ ತಿಂಗಳು ಅಲ್ಲಿನ ನೌಕರರಿಗೆ ವೇತನ ಹಾಕುತ್ತಿದ್ದ. ಆದರೆ ಈ ವೇಳೆ ನಕಲಿ ಲೆಕ್ಕಪತ್ರ ಸೃಷ್ಟಿಸಿ ವೇತನದ ರೂಪದಲ್ಲಿ ಹಣ ಹಾಕಿದ್ದಾನೆ. 2013ರಿಂದ ಇದುವರೆಗೂ ವಂಚಿಸಿರುವ ಪ್ರದೀಪ್ಕೃತ್ಯ ಲೆಕ್ಕಪರಿಶೋಧನೆ ವೇಳೆ ಬಯಲಾಗಿದೆ. ಸುಮಾರು 1ಕೋಟಿ 38ಲಕ್ಷ ರೂ. ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ ತನಿಖೆ ಮುಂದುವರೆಸಲಾಗಿದೆ.