ಎದೆನೋವು :ಮತ್ತೆ ಆಸ್ಪತ್ರೆಗೆ ದಾಖಲಾದ ಶಾಸಕ ಆನಂದ್ ಸಿಂಗ್!!

ಬೆಂಗಳೂರು:

    ಮೈತ್ರಿ ಸರ್ಕಾರದ ಬಜೆಟ್ ಅಧಿವೇಶನಕ್ಕೆ ಆಗಮಿಸಿದ್ದ ಶಾಸಕ ಆನಂದ್ ಸಿಂಗ್ ಎದೆನೋವಿಗೊಳಗಾಗಿ ಮತ್ತೆ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. 

ಶಾಸಕ ಆನಂದ್ ಸಿಂಗ್ ದಿಢೀರ್ ಡಿಸ್ಚಾರ್ಜ್!!

     ಕಂಪ್ಲಿ ಶಾಸಕ ಗಣೇಶ್‌ರಿಂದ ಹಲ್ಲೆಗೊಳಗಾಗಿರುವ ಶಾಸಕ ಆನಂದ್ ಸಿಂಗ್ ನಿನ್ನೆ(ಮಂಗಳವಾರ) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಪಕ್ಕೆಲುಬಿಗೆ ನೋವಾಗಿದ್ದರಿಂದ ವೈದ್ಯರು ಮನೆಯಲ್ಲೇ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಇಂದು ಅಧಿವೇಶನಕ್ಕೆ ಹಾಜರಾದ ಆನಂದ್ ಸಿಂಗ್ ವಿಧಾನಸೌಧ ದ ಮೆಟ್ಟಿಲುಗಳನ್ನು ಹತ್ತಿ-ಇಳಿದು ಸುಸ್ತಾಗಿದ್ದರಿಂದ ಎದೆನೋವು ಶುರುವಾಗಿ ಮತ್ತೆ ಅಪೋಲೋ ಆಸ್ಪತ್ರೆಗೆ ದಾಖಲಾಗುವಂತಾಗಿದೆ.

      ಕಣ್ಣಿನ ಭಾಗದಲ್ಲಿ ಗಾಯಗೊಂಡಿದ್ದ ಆನಂದ್ ಸಿಂಗ್ ಇಂದು ಸಚಿವ ಜಮೀರ್ ಅಹಮದ್ ಖಾನ್ ಜೊತೆ ಆಗಮಿಸಿದ ಅವರು ಕಪ್ಪು ಕನ್ನಡಕ ತೊಟ್ಟಿದ್ದರು.  

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link