ತಿಪಟೂರು :
ಕಲಿಯುಗದಲ್ಲಿ ಕಾಮದೇನುವನ್ನು ನಂಬಿದವರಿಗೆ ಎಂದು ಮೋಸವಾಗುತ್ತಿಲ್ಲ, ಇಂದಿನಬರಗಾಲದಲ್ಲಿ ರೈತರ ಕೈಹಿಡು ಕಾಪಾಡುತ್ತಿರುವುದೇ ಹೈನುಗಾರಕೆ ಎಂದು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.ತಾಲ್ಲೂಕಿನ ಘಟಕಿನಕೆರೆ ಗ್ರಾಮದಲ್ಲಿ ನೂತನವಾಗಿ ಹಾಲು ಉತ್ಪಾದಕರ ಸಂಘವನ್ನು ಹಾಲುನ್ನು ಅಳೆಯುವ ಮೂಲಕ ಉದ್ಘಾಟಿಸಿ ಅವರು ರಾಜ್ಯದಲ್ಲಿ ಬರಗಾಲವಿದ್ದಾಗ ರೈತರಿಗೆ ಹಸುಗಳು ಕಲಿಯುಗದ ಕಾಮಧೇನುವಿನಂತೆ ಬಂದು ಅವರ ಜೀವನೋಪಾಯಕ್ಕೆ ಮಾರ್ಗವಾಗಿದೆ, ತಾವುಗಳು ಬೆಳೆಯುವದರ ಜೊತೆಗೆ ಸಂಘವನ್ನು ಅಭೀವೃದ್ಧಿಯತ್ತ ಸಾಗಿಸಬೇಕೆಂದು ಹೈನುಗಾರರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಪ್ರಕಾಶ್ ಹಾಲ್ಕುರಿಕೆ, ಗ್ರಾ.ಪಂ ಉಪಾಧ್ಯಕ್ಷ, ಕುಮಾರಸ್ವಾಮಿ, ವಕೀಲರಾದ ಕೃಷ್ಣಮೂರ್ತಿ, ಮುಖಂಡರಾದ ಗೋವಿಂದಪ್ಪ, ಜಗದೀಶ್ ಉಪಸ್ಥಿರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
