ಭೋವಿ ಜನಾಂಗಕ್ಕೆ ಟಿಕೇಟ್ ನೀಡದ ಬಿಜೆಪಿ ವಿರುದ್ಧ ಗರಂ ಆದ ರವಿ ಪೂಜಾರ …!!!

ಬ್ಯಾಡಗಿ:

       ರಾಜ್ಯದಲ್ಲಿ ಸುಮಾರು 45 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಭೋವಿ ವಡ್ಡರ ಜನಾಂಗಕ್ಕೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಟಿಕೇಟ್ ನೀಡದೇ ಇರುವುದನ್ನು ಜಿಲ್ಲಾ ಭೋವಿ ವಡ್ಡರ ಸಂಘದ ಅಧ್ಯಕ್ಷ ರವಿ ಪೂಜಾರ ಖಂಡಿಸಿದ್ದಾರೆ.

        ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಬಿಜೆಪಿ ಪಕ್ಷದ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ಅತೀ ಹೆಚ್ಚು ಮತದಾರರನ್ನು ಹೊಂದಿರುವ ಚಿತ್ರದುರ್ಗಾ ಲೋಕಸಭಾ ಕ್ಷೇತ್ರಕ್ಕೆ ಭೋವಿ ವಡ್ಡರ ಜನಾಂಗಕ್ಕೆ ಬಿಜೆಪಿ ಪಕ್ಷದ ಟೀಕೇಟ್‍ನ್ನು ಕೊಡುವ ಭರವಸೆಯನ್ನು ಈ ಹಿಂದೆ ನೀಡಿದ್ದರು. ಆದರೇ ಪ್ರಸಕ್ತ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಆನೇಕಲ್‍ನ ನಾರಯಣಸ್ವಾಮಿ ಅವರಿಗೆ ಟಿಕೇಟ್ ನೀಡಿರುವುದು ಬಹಳ ಬೇಸರ ತಂದಿದೆ ಎಂದು ತಮ್ಮ ನೋವನ್ನು ತೊಡಿಕೊಂಡಿದ್ದಾರೆ.

          ಕಳೆದ ವಿಧನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿರುವ ಭೋವಿ ವಡ್ಡರ ಜನಾಂಗದವರು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಮತ ನೀಡಿದ್ದರಿಂದಾಗಿ ಹೆಚ್ಚು ಶಾಸಕರು ರಾಜ್ಯದಲ್ಲಿ ಆಯ್ಕೆಯಾಗಲು ಕಾರಣವಾಗಿದೆ. ಈ ಹಿಂದೆ ಭೋವಿ ವಡ್ಡರ ಸಮಾಜದ ಅನೇಕ ಶಾಸಕರ ಬೆಂಬಲದಿಂದಲೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಯಡಿಯೂರಪ್ಪನವರು ಸಮಯ ಸಾದಕರಾಗಿದ್ದು, ಕೊಟ್ಟ ಮಾತನಂತೆ ನಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆಂದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

         ರಾಜ್ಯಾದ್ಯಂತ ಭೋವಿ ವಡ್ಡರ ಸಮಾಜದ ಎಲ್ಲ ಮುಖಂಡರುಗಳು ಸಭೆಗಳನ್ನು ನಡೆಸುವ ಮೂಲಕ ಯಡಿಯೂರಪ್ಪನವರಿಗೆ ಸ್ವಾಮಿಜಿಗಳ ಮೂಲಕ ನಾಳೆಯವರರಗೆ ಕಾಲವಕಾಶವನ್ನು ಕೊಡಲಾಗಿದೆ. ಅಷ್ಟರಲ್ಲಿ ಬಿಜೆಪಿ ಪಕ್ಷದ ಮುಖಂಡರ ತೀರ್ಮಾನವನ್ನು ನೋಡಿಕೊಂಡು ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.

         ಭೋವಿ ಸಮಾಜವು ಸ್ಪರ್ಧಿಸಲು ಸಾಧ್ಯವಿರುವ ಕೋಲಾರ ಅಥವಾ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಭೋವಿ ಸಮಾಜದ ಅಭ್ಯರ್ಥಿಗಳಿಗೆ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಇರುವ ಭೋವಿ ಸಮಾಜದ ಮತದಾರರು ಬಿಜೆಪಿ ಪಕ್ಷಕ್ಕೆ ವಿರುದ್ಧವಾಗಿ ಚುನಾವಣೆ ಮಾಡುವುದಾಗಿ ಎಚ್ಚರಿಸಿದ್ದಾರೆ.

         ಈಗಾಗಲೇ ಹೊಳಲಕೇರೆ ಶಾಸಕರಾದ ಚಂದ್ರಪ್ಪನವರು ಮತ್ತು ಹೊಸದುರ್ಗ ಶಾಸಕರಾದ ಗೂಳಿಹಟ್ಟಿ ಡಿ ಶೇಖರ ಅವರು ರಾಜೀನಾಮೆ ಕೊಡಲು ಸಿದ್ದರಾಗಿದ್ದಾರೆ. ಸಮಾಜದ ಗುರುಗಳಾದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿಗಳವರ ತೀರ್ಮಾನಕ್ಕೆ ಕಾಯ್ದು ಕುಳಿತಿದ್ದಾರೆಂದು ಹೇಳಿದರು.

          ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಅರ್ಜುನ ಹಂಚಿನಮನಿ, ತಾಲೂಕಾ ಭೋವಿ ಸಮಾಜದ ಗೌರವಾಧ್ಯಕ್ಷರಾದ ರಮೇಶ ಸುತ್ತಕೋಟಿ, ತಾಲೂಕಾ ಅಧ್ಯಕ್ಷರಾದ ವೈ.ಎಚ್.ಪಾತ್ರೋಟಿ, ಉಪಾಧ್ಯಕ್ಷ ಕೃಷ್ಣಪ್ಪ ದೊಡ್ಡಮನಿ, ಸಮಾಜದ ಮುಖಂಡರಾದ ಮಂಜುನಾಥ ಅಂಗರಗಟ್ಟಿ, ಜಗದೀಶ ಸವಣೂರ ಸೇರಿದಂತೆ ಇನ್ನಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link