ಹಿರಿಯೂರು :
ತಾಲ್ಲೂಕಿನ ಜವನಗೊಂಡನಹಳ್ಳಿ ಹೆಚ್.ಆರ್.ಬಡಾವಣೆಯ ಪಕ್ಕ ಇರುವ ಗಾಯತ್ರಿ ಜಲಾಶಯದ ನಾಲೆಯಲ್ಲಿ ನೀರಿಗೆ ಬಿದ್ದ ಎರಡೂವರೆ ವರ್ಷದ ಬಾಲಕನ್ನು ನವಕೇತನ್ ವಿದ್ಯಾಸಂಸ್ಥೆ ಜವನಗೊಂಡನಹಳ್ಳಿ ಮೂರನೇ ತರಗತಿ ವಿದ್ಯಾಥಿ ಅಂದರೆ ಒಂಬತ್ತು ವರ್ಷದ ಬಾಲಕ ಬದುಕಿಸಿರುವ ಘಟನೆ ನಡೆದಿದೆ.
ಸದರಿ ವಿದಾರ್ಥಿಯು ಶೌಕತ್ ಎಂಬುವವರ ಮಗ ಅಪ್ಪಾನ್ ನೀರಿಗೆ ಬಿದ್ದಿದ್ದ ನೀರಿನಲ್ಲಿ ಮುಳುಗುತ್ತಿದ್ದ ಬಾಲಕನ್ನು ಶಕೀಲ್ ಅಹಮದ್ ಅವರ ಮಗ ಕಫೀಲ್ ಅಹಮದ್ ನಾಲೆಗೆ ಹಾರಿ ಮಗುವನ್ನು ರಕ್ಷಿಸಿದ್ದಾನೆ.ಜೀವ ಉಳಿಸಿದ ಚಾಲಕ ಕಫೀಲ್ಅಹಮದ್ನನ್ನು ನವಕೇತನ್ ವಿದ್ಯಾಸಂಸ್ಥೆ ಗೌರವಾನ್ವಿತ ಅಧ್ಯಕ್ಷ ಎನ್.ಶ್ರೀನಿವಾಸ್ಮೂರ್ತಿ ಹಾಗೂ ಕಾರ್ಯದರ್ಶಿ ಟಿ.ತಿಪ್ಪೇಸ್ವಾಮಿ ಖಜಾಂಚಿಗಳಾದ ಆರ್.ಕೆ.ಕಾಂಚನಾ,ಮುಖ್ಯ ಶಿಕ್ಷಕರಾದ ಕರಿಯಪ್ಪ ರವರು ಅಭಿನಂದಿಸಿದರು.