ಭಾರತಾಂಬೆ ರಕ್ಷಣೆಗೆ ಸೈನಿಕರಂತೆ ನಿಲ್ಲಿ : ಎಚ್.ಆರ್.ಯೋಗೇಶ್

ಹಿರಿಯೂರು :

        ಸ್ವಾತಂತ್ರ್ಯ ಹೋರಾಟಗಾರರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ಎಬಿವಿಪಿ ಸದಸ್ಯ ಎಚ್.ಆರ್.ಯೋಗೇಶ್ ಹೇಳಿದರು.ನಗರದ ಬಿಇಒ ಸರ್ಕಲ್‍ನಲ್ಲಿ ಬಲಿದಾನದಿವಸ್ ಅಂಗವಾಗಿ ಹಮ್ಮಿಕೊಂಡಿದ್ದ ದೀಪ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

        ಈ ದೇಶದ ಭವ್ಯಪರಂಪರೆ, ಸಂಸ್ಕತಿ, ಆಚಾರ-ವಿಚಾರಗಳನ್ನು ನಮ್ಮ ಯುವಜನತೆ ಅರಿತುಕೊಳ್ಳಬೇಕು. ಈ ಮೂಲಕ ದೇಶದ ರಕ್ಷಣೆಗೆ ಸೈನಿಕರಂತೆ ನಿಲ್ಲಬೇಕು ಎಂದರು. ನಿವೃತ್ತ ಸೈನಿಕ ಮುದ್ದಲಿಂಗಪ್ಪ ಮಾತನಾಡಿ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಚೇತನಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.ಭಗತಸಿಂಗ್, ರಾಜಗುರು, ಸುಖದೇವ್ ಅವರ ನೆನೆಪಿಗೆ ದೀಪ ನಮನ ಸಲ್ಲಿಸಲಾಯಿತು. ಮುಖಂಡರಾದ ನಟರಾಜ್, ನೇತಾಜಿ ಮಂಜುನಾಥ್, ರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link