ಅಭ್ಯಾಸದಿಂದ ಗಣಿತ ಶಾಸ್ತ್ರ ಸುಲಭವಾಗಲು ಸಾಧ್ಯ

ಚಿತ್ರದುರ್ಗ,

       ಸತತವಾಗಿ ಅಭ್ಯಾಸ ಮಾಡಿದಾಗ ಮಾತ್ರ ಗಣಿತ ವಿಷಯ ಸುಲಭವಾಗಲು ಸಾಧ್ಯವಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಪಕ ಸಿ.ಎಸ್ ಬಾಗೇವಾಡಿ ವಿದ್ಯಾರ್ಥಿ ವೃಂದಕ್ಕೆ ಕಿವಿ ಮಾತು ಹೇಳಿದರು.

        ನಗರದ ಸರ್ಕಾರಿ ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಗಣಿತಶಾಸ್ತ್ರದ ಇತ್ತೀಚಿನ ಒಲವುಗಳು ಮತ್ತು ಅದರ ಅನ್ವಯ ಎಂಬ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನಾ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದರು.

        ಹಿಂದಿನ ಕಾಲದಲ್ಲಿ ಯಾವುದಾದರೊಂದು ವಿಷಯದ ಬಗ್ಗೆ ಸಂಶೋಧನೆ ಮಾಡಬೇಕಾದ ಹಲವಾರು ಸಮಸ್ಯೆಗಳು ಇದ್ದವು ಯಾವುದೇ ಮಾಹಿತಿಯನ್ನು ಪಡೆಯಬೇಕಾದರೂ ಸಹಾ ಬಹಳ ಕಷ್ಟವಾಗಿತ್ತು ಈ ಹಿಂದೆ ಸಂಶೋಧನೆಯನ್ನು ಮಾಡಿದವರನ್ನು ಪತ್ರದ ಮೂಲಕ ಭೇಟಿ ಮಾಡಿ ಅವರು ತಯಾರಿಸಿದ ವಸ್ತುವನ್ನು ತರಿಸಿಕೊಂಡು ಅದರ ಮೇಲೆ ಅಭ್ಯಾಸ ಮಾಡಿ ನಂತರ ಸಂಶೋಧನೆಯನ್ನು ಮಾಡಬೇಕಿತ್ತು ಎಂದರು.

        ಇದಾದ ಸ್ಪಲ್ಪ ಸಮಯದ ಬಳಿಕ ತಂತ್ರಜ್ಞಾನ ಬೆಳೆದಿದ್ದರಿಂದ ಜೆರಾಕ್ಸ್ ಯಂತ್ರ ಮಾರುಕಟ್ಟೆಗೆ ಬಂದಿದ್ದರಿಂದ ಸಂಶೋಧಕರ ವಸ್ತುಗಳನ್ನು ಜೆರಾಕ್ಸ್ ಮಾಡಿಕೊಂಡು ಸಂಶೋಧನೆಯನ್ನು ಮುಂದುವರೆಸಲಾಗುತ್ತಿತು. ಆದರೆ ಈಗಿನ ಕಾಲದಲ್ಲಿ ಎಲ್ಲವು ಸಹಾ ಬೆರಳಿನ ತುದಿಯಲ್ಲಿಯೇ ದೊರಕುವ ಕಾಲವಾಗಿದೆ. ಇಷ್ಟೊಂದು ಸೌಲಭ್ಯ ಸಹಕಾರ ಇದ್ದಲ್ಲಿ ಸಂಶೋಧನೆಯನ್ನು ಸುಲಭವಾಗಿ ಮಾಡಬಹುದಾಗಿದೆ ಹಿಂದಿನಂತೆ ಗ್ರಂಥಾಲಯದ ಸೌಲಭ್ಯ ಇರಲಿಲ್ಲ ಆದರೆ ಈಗ ಸರ್ಕಾರವೇ ಪುಸ್ತಕಗಳನ್ನು ಖರೀದಿ ಮಾಡಿಕೊಡುತ್ತಿದೆ ಅದರ ಉಪಯೋಗ ವಾಗಬೇಕಿದೆ ಎಂದರು.

        ಹಲವಾರು ಜನತೆ ಗಣಿತ ಎಂದರೆ ಬಹಳ ಕಷ್ಟ ಎನ್ನುತ್ತಾರೆ ಆದರೆ ಅದರಷ್ಟು ಸುಲಭವಾದ ವಿಷಯ ಮತ್ತೊಂದು ಇಲ್ಲ ಆದರೆ ಸತತವಾದ ಅಭ್ಯಾಸ ಮತ್ತು ಕಠಿಣವಾದ ಪರಿಶ್ರಮ ಇದ್ದಾಗ ಮಾತ್ರ ಅದು ನಮ್ಮ ವಶವಾಗಲು ಸಾಧ್ಯವಿದೆ, ವಿದ್ಯಾರ್ಥಿಗಳು ಸಾಧ್ಯವಾದಷ್ಟು ಸ್ವಂತವಾದ ಸಂಶೋಧನೆಗಳನ್ನು ಮಾಡುವ ಮನೋಭಾವ ಬೆಳಸಿಕೊಳ್ಳಿ ಬೇರೆಯವರು ಮಾಡಿದ್ದನ್ನು ಅವರು ತಯಾರು ಮಾಡಿದ ಪುಸ್ತಕವನ್ನು ಮತ್ತೆ ಅದನ್ನು ತಯಾರು ಮಾಡುವ ಕೆಲಸಕ್ಕೆ ಮುಂದಾಗದೇ ಸ್ವಂತಿಕೆಯಿಂದ ಸಂಶೋಧನೆ ಮಾಡಿ ಎಂದು ವಿದ್ಯಾರ್ಥಿ ವೃಂದಕ್ಕೆ ಕರೆ ನೀಡಿದರು.

         ಬೆಂಗಳೂರು ವಿ.ವಿಯ ಗಣಿತಶಾಸ್ತ್ರದ ಮುಖ್ಯಸ್ಥ ಪ್ರೋ.ಹೆಚ್.ಜಿ ನಾಗರಾಜ ಮಾತನಾಡಿ, ಈ ರೀತಿಯಾದ ಕಾರ್ಯಗಾರಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೂ ಸಹಾ ಸಹಾಯವಾಗಲಿದೆ. ಅಲ್ಲದೆ ಗಣಿತ ವಿಷಯದಲ್ಲಿ ಆಗಿರುವ ವಿವಿಧ ರೀತಿಯ ಸಂಶೋಧನೆಗಳನ್ನು ತಿಳಿದುಕೊಳ್ಳಲು ನೆರವಾಗಲಿದೆ ಎಂದರು.

        ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಎಂ ಬಸವರಾಜಪ್ಪ ಅಧ್ಯಕ್ಷತೆ ವಹಿಸುವರು, ಕೃಷ್ಣಗಿರಿ ಸರ್ಕಾರಿ ಆಟ್ರ್ಸ್ ಕಾಲೇಜಿನ ಗಣಿತಶಾಸ್ತ್ರದ ಪ್ರೋ. ಡಾ.ಎನ್ ಮಾಗೇಶ್ ಕುವೆಂಪು ವಿವಿಯ ಗಣಿತಶಾಸ್ತ್ರದ ಮುಖ್ಯಸ್ಥ ಡಾ.ಬಿ.ಜೆ ಗಿರೀಶ, ಐಕ್ಯೂಎಸಿ ಸಹ ಅಧೀಕ್ಷಕ ಪ್ರೋ ಕೆ.ಕೆ ಕಾಮನಿ ಹಾಗೂ ಯುಜಿಸಿ ಸಹ ಅಧೀಕ್ಷಕ ಬಿ.ಮಂಜುನಾಥ್ ಭಾಗವಹಿಸಿದ್ದರು. ಡಾ. ಪಿ.ಟಿ ಮಂಜುನಾಥ, ಪ್ರೋ.ಎ.ಎಮ್ ಜಗದೀಶ್ವರಿ ಕಾಲೇಜಿನ ವಿದ್ಯಾರ್ಥಿ ವೃಂದ ಉಪಸ್ಥಿರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link