ಹೊಸದುರ್ಗ:
ಲೋಕಸಭಾ ಚುನಾವಣಾ ಪ್ರಯುಕ್ತ ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆ ಮುಖ್ಯಾಧಿಕಾರಿ ಡಿ.ಉಮೇಶ್ ರವರ ಅಧ್ಯಕ್ಷತೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರತಿಜ್ಞಾ ವಿಧಿಯನ್ನು ಮಾಡಲಾಯಿತು. ಇದೇ ವೇಳೆ ಪುರಸಭೆ ಪರಿಸರ ಅಭಿಯಂತರ ತಿಮ್ಮರಾಜು, ಆರೋಗ್ಯಾಧಿಕಾರಿ ಕರೀಂಉಲ್ಲಾ, ಸಿಬ್ಬಂದಿಗಳಾದ ಅಜಗರ್, ರಂಗಸ್ವಾಮಿ, ತಿಪ್ಪೇಸ್ವಾಮಿ, ನೀರು ಸರಬರಾಜು ಸಹಾಯಕರು ಮತ್ತು ವಾಹನ ಚಾಲಕರು, ಪೌರ ಕಾರ್ಮಿಕರು ಪಾಲ್ಗೋಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
