ಪೌರಾಯುಕ್ತ ಮಹಂತೇಶ್ ರವರಿಗೆ ಆತ್ಮಿಯ ಬೀಳ್ಕೂಡಿಗೆ ಸಮಾರಂಭ

ಹಿರಿಯೂರು :

     ನಗರಸಭೆ ಸಭೆ ಕೆಲಸಕಾರ್ಯಗಳಲ್ಲಿ ಸಾರ್ವಜನಿಕರಿಗೆ ಸೇವೆ ಮಾಡುವಲ್ಲಿ, ಇದುವರವಿಗೂ ಎಲ್ಲಾ ರೀತಿಯಿಂದ ನನ್ನ ಜೊತೆ ಸಹಕರಿಸದ ನನ್ನ ಎಲ್ಲಾ ಸಹಪಾಠಿಗಳಿಗು ಹಾಗೂ ನಗರಸಭೆ ಕಛೇರಿಸಿಬ್ಬಂದಿ ವರ್ಗದವರಿಗೆ ಹಾಗೂ ಪೌರಕಾರ್ಮಿಕರಿಗೂ ನನ್ನ ಧನ್ಯವಾದಗಳು ಎಂಬುದಾಗಿ ಪೌರಾಯುಕ್ತ ಮಹಂತೇಶ್ ಹೇಳಿದರು.

       ನಗರಸಭೆ ಸಭಾಂಗಣದಲ್ಲಿ, ಹಿರಿಯೂರಿನಿಂದ ಶಿಮೊಗ್ಗ ಜಿಲ್ಲೆ ಸಾಗರ ನಗರಸಭೆಗೆ ವರ್ಗಾಣೆ ಗೊಂಡಿರುವ ಪೌರಾಯುಕ್ತ ಮಹಂತೇಶ್ ರವರಿಗೆ ನಗರಸಭೆ ಸಿಬ್ಬಂದಿವತಿಯಿಂದ ಏರ್ಪಡಿಸಲಾಗಿದ್ದ ಆತ್ಮಿಯ ಬೀಳ್ಕೂಡಿಗೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

        ಈ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಣೆಯಲ್ಲಿ ನಗರಸಭೆ ಸದಸ್ಯರುಗಳು, ಜನಪ್ರತಿನಿಧಿಗಳು, ನಗರದಗಣ್ಯರು ಅನೇಕ ನಾಗರೀಕರು ನನಗೆ ಸಹಕಾರ ನೀಡಿರುವ ಎಲ್ಲರಿಗೂ ಅಭಿನಂದಗಳು ಎಂದರಲ್ಲದೆ, ಇದು ಚುನಾವಣಾ ವರ್ಗಾವಣೆಯಾಗಿದ್ದು ನಿಮ್ಮೆಲ್ಲರ ಅಭಿಮಾನ ವಿಶ್ವಾಸ ನೋಡಿದರೆ ಮತ್ತೆ ಹಿರಿಯೂರಿಗೆ ಬಂದು ಕೆಲಸ ಮಾಡಬೇಕು ಎಂಬ ಆಸೆ ಮೂಡುತ್ತದೆ ಎಂಬುದಾಗಿ ಅವರು ಹೇಳಿದರು.

       ಈ ಕಾರ್ಯಕ್ರಮದಲ್ಲಿ ನಗರಸಭೆ ವ್ಯವಸ್ಥಾಪಕಿ ಲಿಲಾವತಿ, ಪೌರಕಾರ್ಮಿಕ ಸಂಘದ ಅಧ್ಯಕ್ಷ ಕದರಪ್ಪ, ಕೆಂಚರಾಯಪ್ಪ, ಎಇಇ ಶ್ರೀನಿವಾಸ್, ಕೃಷ್ಣನಾಯ್ಕ, ರಮೇಶ್, ಜನಾರ್ಧನ್, ಸೈದುಲ್ಲಾಖಾನ್, ನಿರಂಜನ್ ಸೇರಿದಂತೆ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link