ಹಿರಿಯೂರು :
ನಗರೋತ್ಥಾನ-3 ಯೋಜನೆಯಡಿ 70ಲಕ್ಷದಲ್ಲಿ ನಡೆಯುತ್ತಿರುವ ಪ್ರಧಾನ ರಸ್ತೆಯ ಮರುಡಾಂಬರೀಕರಣ ಕಾಮಗಾರಿಯನ್ನು ಪೌರಾಯುಕ್ತ ಎಚ್.ಮಹಂತೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್ ಪರಿಶೀಲಿಸಿದರು.ಹತ್ತು ವರ್ಷದ ಹಿಂದೆ ಈ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ತುಂಬಾ ಕಡೆ ರಸ್ತೆ ಹಾಳಾಗಿದ್ದರಿಂದ ನಾಗರಿಕರು ಮರುಡಾಂಬರೀಕರಣಕ್ಕೆ ಒತ್ತಾಯಿಸಿದ್ದರು. ಈಗ ಗಾಂಧಿವೃತ್ತದಿಂದ ರಂಜಿತ್ಹೋಟೆಲ್ ವೃತ್ತದವರೆಗೆ ಮರುಡಾಂಬರೀಕರಣ ಮಾಡಲಾಗುತ್ತಿದೆ ಎಂದು ಮಹಂತೇಶ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
