ಸಂಸ್ಕೃತಿ ಪರಂಪರೆಯನ್ನು ಪ್ರಶ್ನಿಸುವಂತಾಗಬೇಕು : ಡಾ. ಅನುಪಮ

ತಿಪಟೂರು :

      ಸಂಸ್ಕೃತಿ ಪರಂಪರೆಯನ್ನ ಪ್ರೀತಿಸುವುದರ ಜೊತೆಗೆ ಇದು ಮಹಿಳಾ ದೌರ್ಜನ್ಯಕ್ಕೆ ದಾರಿ ಮಾಡಿಕೊಡುತ್ತಿದ್ದರೆ ಎಲ್ಲಾ ವಿದ್ಯಾವಂತ ಹಾಗೂ ಗೃಹಿಣಿಯರು ಪ್ರಶ್ನಿಸುವಂತಾಗಬೇಕು ಎಂದು ಪ್ರಸಿದ್ದ ಲೇಖಕಿ ಮತ್ತು ವೈದ್ಯರಾದ ಡಾ. ಅನುಮಪ ತಿಳಿಸಿದರು.

      ನಗರದ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಂವಿಧಾನ ಮತ್ತು ಮಹಿಳೆ ಎಂದ ವಿಷಯದ ಬಗ್ಗೆ ಮಾತನಾಡುತ್ತ ಸಮಾಜದಲ್ಲಿ ಮಹಿಳೆಯನ್ನು 2ನೇ ದರ್ಜೆಯಲ್ಲಿ ನೋಡುತ್ತಿದ್ದು ಯಾವುದೇ ಮಠಾಧಿಪತಿ, ಪೀಠಾಧಿಪತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಲಿ, ಬಾರ್ ಕೌನ್ಸಿಲ್‍ನ ಅಧ್ಯಕ್ಷರಾಗಲೀ, ಇದುವೆರಗೂ ಯಾರನ್ನು ಕೂಡ ಈ ಸ್ಥಾನದಲ್ಲಿ ಕುಳಿತಿರುವುದನ್ನು ನಾವು ನೋಡಲಾಗಿಲ್ಲ. ಇಂದು ಎಲ್ಲಾ ರೀತಿಯ ವಿದ್ಯಾಬ್ಯಾಸವನ್ನು ಮಹಿಳೆಯರು ಪಡೆದಿದ್ದರು ಪ್ರಸ್ತುತ 25 ನ್ಯಾಯಮೂರ್ತಿಗಳಲ್ಲಿ ಕೇವಲ ಒಬ್ಬ ಮಹಿಳೆಇರುವುದು ಮಹಿಳಾ ತಾರತಮ್ಯವನ್ನ ಎತ್ತಿ ತೋರಿಸುತ್ತಿದೆ.

       ಸರಕಾರಿ ಕ್ಷೇತ್ರಗಳನ್ನ ಬಿಟ್ಟರೆ ಖಾಸಗೀ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ವೇತನತಾರತಮ್ಯವಿದ್ದು ಸರ್ಕಾರದ ನರೇಗಾದಂತಹ ಕಾರ್ಯಕ್ರಮದಲ್ಲೂ ಕೂಡ ಮಹಿಳೆ ಎಂಬ ಒಂದೇ ಕಾರಣಕ್ಕೆ ವೇತನ ಕಡಿಮೆಕೊಡಲಾಗುತ್ತಿತ್ತು. ಆದರೆ ಈ ಮಹಿಳೆಯರು ಹೋರಾಟಮಾಡಿ ಇಂದು ಸರಿಸಮಾನವೇದ ವೇತವನ್ನು ಪಡೆಯುತ್ತಿದ್ದಾರೆ. ಗ್ರಾಂಡ್‍ಸ್ಲಾಮ್, ಸಿನಿಮಾಕ್ಷೇತ್ರ, ಕೃಷಿ ಚಟುವಟಿಕೆಗಳು ತಾರತಮ್ಯದ ಜೊತೆಗೆ ಲೈಂಗಿಕ ಶೋಷಣೆಕೂಡ ಕಂಡುಬರುತ್ತದೆ.

      ಮಹಿಳೆ ದೌರ್ಜನ್ಯಕ್ಕೊಳಗಾದಲ್ಲಿ 7 ಮಾನವದಿನಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇಂತಹ ದೌರ್ಜನ್ಯ ಪ್ರತಿನಿತ್ಯದೊರೆತಲ್ಲಿ ಅವಳ ಇಡೀ ಜೀವನದ ವಿಶ್ವಾಸವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಯಾವ ಮಹಿಳೆಗಾದರೂ ದೌರ್ಜನ್ಯವಾದರೆ ಎಲ್ಲಾ ಮಹಿಳೆಯರು ಒಟ್ಟಗೂಡಿ ಅದನ್ನ ಪ್ರಶ್ನಿಸುವಂತಾಗಬೇಕು. ಮಹಿಳಾ ಸಂಘಟನೆಗಳನ್ನು ಮಾಡಿಕೊಳ್ಳುವುದರ ಮೂಲಕ ತಮ್ಮ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು. ಇಲ್ಲವಾದಲ್ಲಿ ಸಂವಿಧಾನದ ಮೀಸಲಾತಿಯಾಗಲೀ ಏನು ಕೂಡ ಮಾಡಲಾಗುವುದಿಲ್ಲ. ಮಹಿಳೆಯರು ತಮ್ಮ ಕನಸನ್ನ ಕಟ್ಟಿಕೋಂಡು ಸಂಘಟಿಸಿದ್ದೇ ಆದಲ್ಲಿ ಇಂದಿನ ಪ್ರಪಂಚದ ರೀತಿ ಬದಲಾಗಿ ಮುಂದಿನ ಪ್ರಪಂಚದಲ್ಲಿರುವುದಿಲ್ಲ.

     ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಟಿ.ಎಸ್.ಶಿವಪ್ರಸಾದ್, ಪ್ರಾಂಶುಪಾಲರುಗಳಾದ ಹೆಚ್.ಎಸ್.ನಂದೀಶಯ್ಯ, ಗೀತಾಲಕ್ಷ್ಮಿ, ಹಾಗೂ ಸಂಸ್ಥೆಯ ಪದಾಧಿಕಾರಿಗಳು ಎಲ್ಲಾ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link