ಹೊನ್ನಾಳಿ:
ಮತದಾನ ಪವಿತ್ರ ಕಾರ್ಯ. ಮೊದಲ ಬಾರಿ ಮತದಾನ ಮಾಡುತ್ತಿರುವುದು ನನಗೆ ಅತೀವ ಸಂತಸವನ್ನುಂಟುಮಾಡಿದೆ. ನಾಡಿನ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ನನ್ನ ಮತ ಮೀಸಲು. ಇಂಜಿನಿಯರಿಂಗ್, ವೈದ್ಯಕೀಯ ಪದವೀಧರರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿಭಾ ಪಲಾಯನಕ್ಕೆ ಕಡಿವಾಣ ಹಾಕುವ ನೀತಿಗಳನ್ನು ನಮ್ಮ ನಾಯಕರು ರೂಪಿಸಬೇಕು. ನಿರುದ್ಯೋಗಿಗಳಿಗೆ ಕೆಲಸ ನೀಡುವ ಕಾರ್ಯ ಆಗಬೇಕು. ಅಂಥವರಿಗೆ ನನ್ನ ಮತ.
-ಕೆ. ದೀಪಿಕಾ, ಬಿ.ಎಸ್ಸಿ., ವಿದ್ಯಾರ್ಥಿನಿ, ಹೊನ್ನಾಳಿ.
ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುವವರಿಗೆ ನನ್ನ ಮತ. ಮತದಾನ ಪ್ರಜಾಪ್ರಭುತ್ವದ ಪವಿತ್ರ ಹಬ್ಬ. ಆ ಹಬ್ಬದಲ್ಲಿ ನಾನೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಬಗ್ಗೆ ನನಗೆ ಹೆಮ್ಮೆ ಇದೆ. ಪ್ರಜಾಪ್ರಭುತ್ವ ಸದೃಢವಾಗಬೇಕಾದರೆ ನಾಡಿನ ಎಲ್ಲಾ ಪ್ರಜೆಗಳೂ ಮತದಾನದಲ್ಲಿ ಪಾಲ್ಗೊಳ್ಳಬೇಕು. ಹಾಗಾಗಿ, ನಾವೆಲ್ಲರೂ ತಪ್ಪದೇ ಮತದಾನ ಮಾಡೋಣ. ತನ್ಮೂಲಕ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡೋಣ.
-ಕೆ. ತೇಜಸ್ವಿನಿ, ಬಿ.ಕಾಂ. ವಿದ್ಯಾರ್ಥಿನಿ, ಹೊನ್ನಾಳಿ.