ಹಾವೇರಿ :
ಕಾಂಗ್ರೇಸ್ ಪಕ್ಷದ ಪರಿಶಿಷ್ಠ ಜಾತಿ (ಎಸ್,ಸಿ)ಜಿಲ್ಲಾ ಘಟಕದ ವತಿಯಿಂದ ದಿ,19ರ ಸಾಯಂಕಾಲ 5 ಘಂಟೆಗೆ ಕಾಂಗ್ರೇಸ್ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಸಭೆ ಕರೆಯಲಾಗಿದೆ. ಈ ಸಭೆಗೆ ಮುಖ್ಯ ಅಥಿತಿಗಳಾಗಿ ಸಮಾಜದ ರಾಜ್ಯ ಮುಖಂಡರು ಹಾಗೂ ಮಾಚಿ ಸಚಿವರಾದ ಎಚ್ ಆಂಜನೇಯ ಆಗಮಿಸಲಿದ್ದು,
ಲೋಕ ಸಭೆ ಚುನಾವಣೆಯ ಪ್ರಚಾರ ಈ ಸಭೆಗೆ ಕಾಂಗ್ರೇಸ್ ಪಕ್ಷದ ಪರಿಶಿಷ್ಠ ಜಾತಿ (ಎಸ್,ಸಿ)ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ರಾಜ್ಯ ಮುಖಂಡರು ಕಾರ್ಯಕರ್ತರು ಹಾಗೂ ಜಿಲ್ಲೆಯ ಕ.ದ.ಸಂ.ಸಮಿತಿಯ ಪದಾಧಿಕಾರಿಗಳು,ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಎಸ್,ಸಿ ಘಟಕದ ಜಿಲ್ಲಾಧ್ಯಕ್ಷ ಎಸ್,ಎಫ್ ಮಣ್ಣಿಕಟ್ಟಿ ಹಾಗೂ ಡಿಎಸ್ಎಸ್ ರಾಜ್ಯ ಮುಖಂಡ ಉಡಚಪ್ಪ ಮಾಳಗಿ,ಜಿಲ್ಲಾ ಡಿಎಸ್ ಎಸ್ ಜಿಲ್ಲಾ ಸಂಚಾಲಕ ಮಾಲತೇಶ ಯಲ್ಲಾಪೂರ ಪ್ರಕಟಣೆಗೆ ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
