ಜಾಮೀನು ನಿರಾಕರಣೆ : ನೀರವ್ ಮೋದಿಗೆ ಜೈಲೇ ಗತಿ!

ದೆಹಲಿ:

      ವಜ್ರಾಭರಣ ವ್ಯಾಪಾರಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ಹಗರಣ ಪ್ರಮುಖ ಆರೋಪಿ ನೀರವ್ ಮೋದಿಗೆ ಜೈಲೇ ಗತಿಯಾಗಿದೆ.

      ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣದಲ್ಲಿ ಗಡೀಪಾರು ವಿಚಾರಣೆಯನ್ನು ಎದುರಿಸುತ್ತಿರುವ ನೀರವ್ ಮೋದಿಯ ಜಾಮೀನು ಅರ್ಜಿಯನ್ನು ಯುನೈಟೆಡ್ ಕಿಂಗ್ಡಮ್ ನ ವೆಸ್ಟ್ ಮಿನಿಸ್ಟರ್ ಕೋರ್ಟ್ ತಿರಸ್ಕರಿಸಿದೆ.

      ಮಾರ್ಚ್ 19ರಂದು ಬಂಧಿತನಾಗಿದ್ದ ನೀರವ್ ಮೋದಿ ಸದ್ಯ ನೈಋತ್ಯ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.
ಕೋರ್ಟ್ ವಿಚಾರಣೆಯನ್ನು ಮೇ.24ರಂದು ನಡೆಸಲಿದ್ದು, ಮೇ 30ರಂದು ಪೂರ್ಣ ಪ್ರಮಾಣದ ವಿಚಾರಣೆ ನಡೆಯಲಿದೆ ಎಂದು ವೆಸ್ಟ್‌ಮಿನ್‌ಸ್ಟರ್ ಕೋರ್ಟ್ ತಿಳಿಸಿದೆ.

      ಮಾರ್ಚ್ 29 ರಂದು ನೀರವ್ ಮೋದಿ ಕೋರ್ಟ್ ಮುಂದೆ ಹಾಜರಾಗಿದ್ದರು. ಆಗಲೂ ನ್ಯಾಯಮೂರ್ತಿಗಳು, ಜಾಮೀನು ನೀಡಲು ನಿರಾಕರಿಸಿದ್ದರು. ನೀರವ್ ಮೋದಿಗೆ ಜಾಮೀನು ನೀಡಿದ್ರೆ ಮತ್ತೆ ಶರಣಾಗುವುದಿಲ್ಲ ಎಂಬ ಶಂಕೆ ಮೇಲೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿತ್ತು.

      ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 13,500 ಕೋಟಿ ಸಾಲ ಪಡೆದಿರುವ ನೀರವ್ ಮೋದಿ, ಸಾಲ ತೀರಿಸದೆ ಕುಟುಂಬ ಸಮೇತ ಭಾರತ ಬಿಟ್ಟಿದ್ದ.  

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap