ಮರ್ಯಾದಾ ಹತ್ಯೆ : ಪ್ರಣಯ್ ಕೊಲೆ ಆರೋಪಿಗೆ ಜಾಮೀನು!

ಹೈದರಾಬಾದ್:

      ದೇಶಾದ್ಯಂತ ಸುದ್ದಿಯಾಗಿದ್ದ ಪ್ರಣಯ್ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ತೆಲಂಗಾಣ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

      ಅಳಿಯ ಪೆರುಮಲ್ಲ ಪ್ರಣಯ್ ಕುಮಾರ್ ಕೊಲೆ ಪ್ರಕರಣದ ಅರೋಪಿಯಾಗಿದ್ದ ತಿರುನಗಾರು ಮಾರುತಿರಾವ್ ಗೆ ಷರತ್ತುಬದ್ಧ ಜಾಮೀನು ದೊರೆತಿದೆ.

      ಪ್ರಣಯ್ ಹಾಗೂ ಅಮೃತಾ ಶಾಲಾ ದಿನಗಳಿಂದ ಪರಸ್ಪರರನ್ನು ಪ್ರೀತಿಸುತ್ತಿದ್ದರು. ಇಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಮನೆಯವರ ವಿರೋಧದ ನಡುವೆಯೂ ಯುವ ಜೋಡಿ ಕಳೆದ ವರ್ಷ ಜನವರಿಯಲ್ಲಿ ಮದುವೆ ಆಗಿದ್ದರು.Related image

      2018 ರ ಸೆಪ್ಟೆಂಬರ್ 15ರಂದು  ಐದು ತಿಂಗಳ ಗರ್ಭಿಣಿ ಆಗಿದ್ದ ಅಮೃತಾರನ್ನು ನರ್ಸಿಂಗ್ ಹೋಮ್ ಗೆ ಕರೆದೊಯ್ದು, ಪರೀಕ್ಷೆ ಮಾಡಿಸಿ, ವಾಪಸ್ ಕರೆತರುವಾಗ ಪ್ರಣಯ್ ನನ್ನು ಕೊಲೆ ಮಾಡಲಾಗಿತ್ತು. ಅದಕ್ಕೂ ಮುನ್ನ ನಾಲ್ಕು ಬಾರಿ ಅತನ ಕೊಲೆಗೆ ಯತ್ನಿಸಿದ್ದಾಗಿ ಮಾರುತಿ ರಾವ್ ತಪ್ಪೊಪ್ಪಿಕೊಂಡಿದ್ದಾರೆ.

      ತನ್ನ ಸೋದರ ತಿರುನಗಾರು ಶರವಣ ಕುಮಾರ್ ಮತ್ತು ಅಬ್ದುಲ್ ಕರೀಮ್ ನ ವಿರುದ್ಧ ದೂರು ದಾಖಲಿಸಿ, ವಾರಂಗಲ್ ಸೆಂಟ್ರಲ್ ಜೈಲ್ ನಲ್ಲಿ ಹಾಕಲಾಗಿತ್ತು. ತೆಲಂಗಾಣ ಹೈಕೋರ್ಟ್ ಆದೇಶ ಜೈಲಧಿಕಾರಿಗಳ ಕೈ ಸೇರಿದ ಮೇಲೆ ಬಿಡುಗಡೆ ಆಗಲಿದೆ.  

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link