ಹಿರಿಯೂರು :
ತಾಲ್ಲೂಕಿನಲ್ಲಿ ತೀವ್ರವಾದ ಬರಗಾಲ ಪರಿಸ್ಥಿತಿ ತಲೆದೋರಿದ್ದು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೂ ಸಂಕಷ್ಠ ಪರಿಸ್ಥಿತಿ ಎದರಾಗಿದ್ದು ಕೃಷಿಕರ ತೋಟಗಳು ನಿಂತಲ್ಲೆ ಒಣಗುತ್ತಿವೆ ಆದ್ದರಿಂದ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಕಾಮಗಾರಿಗಳನ್ನು ಅತಿ ಜರೂರಾಗಿ ಮುಗಿಸಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸುವಂತೆ ಕ್ಷೇತ್ರದ ಶಾಸಕಿ ಶ್ರೀಮತಿ ಪೂಣಿಮಶ್ರೀನಿವಾಸ್ ಒತ್ತಾಯಿಸಿದರು.
ವಾಣಿವಿಲಾಸ ಸಾಗರ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಹಾಗೂ ಸದ್ಯಸರ ಜೊತೆ ವಿಶ್ವೇಶ್ವರಯ್ಯ ಜಲ ಮಂಡಳಿ ನಿಗಮದ ವ್ಯಸ್ಥಾಪಕ ನಿರ್ದೇಶಕರು ಹಾಗು ಮುಖ್ಯ ಅಭಿಯಂತರರನ್ನು ಭೇಟಿ ಮಾಡಿ ಅವರು ಈ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸುವಂತೆ ಮನವಿ ಮಾಡಿದರು.
ಇವರ ಮನವಿಗೆ ಸ್ಪಂದಿಸಿದ ವಿಶ್ವೇಶ್ವರಯ್ಯ ಜಲ ಮಂಡಳಿ ನಿಗಮದ ವ್ಯಸ್ಥಾಪಕರು ಈಗ ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ಶಾಸಕರಿಗೆ ಸಂರ್ಪೂಣವಾಗಿ ವಿವರಿಸಿದರಲ್ಲದೆ, ಜೂನ್ ಅಂತ್ಯದೊಳಗೆ ವಿ.ವಿ ಸಾಗರ ಜಲಾಶಯಕ್ಕೆ ನೀರನ್ನು ಬಿಡಲಾಗುತ್ತದೆ ಎಂಬ ಭರವಸೆ ನೀಡಿದರು.
ಈ ಮಾತಿಗೆ ತಪ್ಪಿದಲ್ಲಿ ಹೋರಾಟ ಸಮಿತಿ ನೇತೃತ್ವದಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸಲಾಗುವುದು ಎಂಬುದಾಗಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿರಮೇಶ್ ಸುದ್ದಿಗಾರರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಹಾಗೂ ಹೋರಾಟ ಸಮಿತಿ ಗೌ||ಅಧ್ಯಕ್ಷ ಹೆಚ್.ಆರ್.ತಿಮಯ್ಯ ಹಾಗೂ ರೈತಮುಖಂಡರಾದ ಆಲೂರುಸಿದ್ದರಾಮಣ್ಣ, ಯಳನಾಡು ರಾಮಚಂದ್ರಪ್ಪ, ಡಾ.ಹನುಮಂತರಾಯಪ್ಪ, ಆರ್.ಜಗನಾಥ್ ಯಳನಾಡು, ಎ.ವಿ.ರಂಗನಾಥ್, ಪಿಟ್ಲಾಲಿ ಶಿವರಾಂ, ಬಬ್ಬುರೂಸುರೇಶ್, ಟಿಪ್ಪುಸುಲ್ತಾನ್ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
