ತುರುವೇಕೆರೆ:
ದಕ್ಷ ಹಾಗೂ ಪ್ರಾಮಾಣಿಕ ಸಿಪಿಐ ಸಲೀಂ ಅಹಮದ್ ಮೇಲೆ ಶಾಸಕ ಮಸಾಲ ಜಯರಾಮ್ ಅದಾರ ರಹಿತ ಆರೋಪ ಮಾಡಿದ್ದು ಕೂಡಲೇ ಸಿಪಿಐ ಶಾಸಕರ ಮೇಲೆ ಮಾನನಷ್ಟ ಕೇಸು ದಾಖಲಿಸಬೇಕು ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯಿದ್ದಾರೆ.
ಪಟ್ಟಣದ ತಮ್ಮ ಮನೆಯಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಅಧಿಕಾರಿಗಳ ಮೇಲೆ ಶಾಸಕರು ಆರೋಪ ಮಾಡುವ ಮುನ್ನಾ ಸೂಕ್ತ ದಾಖಲೆಗಳನ್ನು ಇಟ್ಟು ಆರೋಪ ಮಾಡಬೇಕೆಂಬುದು ಅರಿವಿಲ್ಲ. ಸಿಪಿಐ ಸಲೀಂ ಶಾಸಕರ ಮಾತು ಕೇಳುತ್ತಿಲ್ಲ ಎಂಬ ಕಾರಣಕ್ಕೆ ಬ್ರಷ್ಟಚಾರದ ಆರೋಪ ಮಾಡಿದ್ದಾರೆ. ನಮ್ಮ ಅವದಿಯಲ್ಲಿ ಇಸ್ಪೀಟ್, ಜೂಜು, ಮರಳು ದಂದೆಗೆ ಕಡಿವಾಣ ಹಾಕಲಾಗಿತ್ತು.
ಮಸಾಲ ಜಯರಾಮ್ ಶಾಸಕರಾದ ಮೇಲೆ ಜೂಜು, ಮರಳು ದಂದೆ ಹೆಚ್ಚಾಗಿದೆ ಅವರ ಕಾರ್ಯಕರ್ತರೇ ಈ ದಂದೆಗಳಲ್ಲಿ ಬಾಗಿಯಾಗಿದ್ದು ಇವರ ಮೇಲೆ ಕೇಸು ದಾಖಲಿಸುವ ಸಿಪಿಐ ಸಲೀಂ ಅಹಮದ್ ಶಾಸಕರ ಮಾತು ಕೇಳಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷ ಮುಸ್ಲಿಂ ವಿರೋದಿಗಳು ಬಿಜೆಪಿ ಶಾಸಕರಾಗಿರುವ ಮಸಾಲ ಜಯರಾಮ್ ತನ್ನ ಆಡಳಿತದಲ್ಲಿಯೂ ಜಾತಿ ಲೇಪನ ಮಾಡುತ್ತಿದ್ದಾರೆ.
ಸಿಪಿಐ ಸಲೀಂ ಅಹಮದ್ ಮುಸಿಂ ಎಂಬ ಕಾರಣಕ್ಕೆ ಸುಖ ಸುಮ್ಮನೆ ಟಾರ್ಗೆಟ್ ಮಾಡುತ್ತಿದ್ದಾರೆ. ದೇಶದಲ್ಲಿ 25 ಕೋಟಿ ಮುಸ್ಲಿಂ ಜನರಿದ್ದಾರೆ ಶಾಸಕರು ಈ ರೀತಿ ನೆಡೆದುಕೊಳ್ಳಬಾರದು. ಪೊಲೀಸ್ ಇಲಾಖೆ ಸಿಪಿಐ ಸಲೀಂ ಅಹಮದ್ ಮೇಲೆ ಕ್ರಮಕ್ಕೆ ಮುಂದಾದರೆ ಸಾವಿರಾರು ರೈತರನ್ನು ಕರೆದುಕೊಂಡು ಹೋಗಿ ತುಮಕೂರು ಎಸ್.ಪಿ ಕಚೇರಿ ಮುಂಬಾಗ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
