ಹೊಸದುರ್ಗ:
ಪಟ್ಟಣದ ಕೊಬರಿಪೇಟೆ ರಸ್ತೆಯಲ್ಲಿರುವ ಅಂಗಡಿ, ಬೇಕರಿಗಳ ಮೇಲೆ ಚಿತ್ರದುರ್ಗ ಮತ್ತು ಹೊಸದುರ್ಗ ಆರೋಗ್ಯ ಇಲಾಖೆ ಹಾಗೂ ತಂಬಾಕು ನಿಯಂತ್ರಣ ಮಂಡಳಿ ದಾಳಿ ನಡೆಸಿದೆ.
ರಸ್ತೆ ಬದಿ ಹಾಗೂ ಪಟ್ಟಿಗೆ ಅಂಗಡಿಗಳ ಮೇಲೆ ದಾಳಿ ನಡೆಸಿ ಅಂಗಡಿಗಳಲ್ಲಿ ಬೀಡಿ, ಸೀಗರೇಟ್, ತಂಬಾಕು, ಗುಟ್ಕಾ ಮಾರಟ ಹಾಗೂ ಅಡುಗೆ ಅನಿಲ ಬಳಕೆ ಮಾಡುವವರ ಮೇಲೆ ದಂಡ ವಿಧಿಸಿದರು.ಅಲ್ಲಿ ಸೇರಿದ್ದ ಜನರು ತಂಬಾಕು ತಯಾರಿಸುವ ಕಂಪನಿಗಳನ್ನು ಮುಚ್ಚಿ ಆಗ ನಾವು ಮಾರಾಟ ಮಾಡುವುದನದನ್ನು ನಿಲ್ಲಿಸುತ್ತೇವೆ ಎಂದು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಸಿದರು.
ಜಿಲ್ಲಾ ಸಲಹಾಗಾರರಾದ ಪ್ರಭುದೇವ ಬಿ.ಎಂ ಮಾತನಾಡಿ ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಹಾಗೂ ಅಪ್ರಾಪ್ತ ವಯಸ್ಕರಿಂದ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಮತ್ತು ತಂಬಾಕು ಮಾರಟ ಮಾಡುವವರು ಆರೋಗ್ಯ ಎಚ್ಚರಿಕೆ ನಾಮಫಲಕವನ್ನು ಕಡ್ಡಾಯವಾಗಿ ಹಾಕಬೇಕು. ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ಉತ್ತೇಜನ ಪ್ರಾಯೋಜಕತೆ ನಿಷೇಧ ಎಂದು ಹೇಳಿದರು.
ಇದೇ ವೇಳೆ ಸೋಷಿಯಲ್ ವರ್ಕರ್ತಿಪ್ಪೇಸ್ವಾಮಿ, ಸೀನಿಯರ್ ಹೆಲ್ತ್ ಇನ್ಸೆಪ್ಟರ್ ಸಿದ್ದರಾಮಸ್ವಾಮಿ, ಜಿಲ್ಲಾ ಆರೋಗ್ಯ ನೀರಿಕ್ಷಕ ವೆಂಕಟೇಶ್, ಪೊಲೀಸ್ ಸಿಬ್ಬಂದಿ ತಿಪ್ಪೇಸ್ವಾಮಿ ಹಾಜರಿದ್ದರು.