ಸಂಕುಚಿತ ಮನಸ್ಸುಗಳಿಂದ ಹೆಚ್ಚಿದ ಭಯೋತ್ಪಾದನೆ

ಚಿತ್ರದುರ್ಗ:

    ವೈವಿದ್ಯತೆಯಲ್ಲಿ ಸಮಾನತೆಯನ್ನು ಸಾರುವ ಭಾರತದ ಸಂಸ್ಕೃತಿಯನ್ನು ಒಪ್ಪದ ಸಂಕುಚಿತ ಮನಸ್ಸುಗಳಿಂದ ದೇಶದಲ್ಲಿ ಉಗ್ರಗಾಮಿತನ, ಭಯೋತ್ಪಾದನೆ ಹೆಚ್ಚುತ್ತಿದೆ ಎಂದು ಹರಿಹರಪುರ ಶ್ರೀಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

   ಬ್ರಾಹ್ಮಣ ಸಂಘದ ಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಿಂದ ಆರಂಭಗೊಂಡಿರುವ ಸಮಾರೋಪ ಸಮಾರಂಭದ ವಿವಿಧ ಕಾರ್ಯಕ್ರಮಗಳ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

   ಬ್ರಾಹ್ಮಣ ಸಂಘ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಅವಿಸ್ಮರಣೀಯ ಘಟನೆ. ಬದುಕು ಘಟನೆಗಳ ಸರಮಾಲೆ, ಘಟನೆ ಒಂದು ಕ್ಷಣ. ನೆನಪು ಮಾತ್ರ ಪ್ರತಿ ಕ್ಷಣವೂ ಇರುತ್ತದೆ. ಉತ್ತಮ ಘಟನೆಗಳನ್ನು ಅಂತಃಕರಣದಲ್ಲಿಟ್ಟುಕೊಳ್ಳಬೇಕು. ವೈವಿದ್ಯತೆಯಲ್ಲಿ ಸಮನ್ವತೆಯನ್ನು ಸಾರುವುದು ಭಾರತದ ಸಂಸ್ಕೃತಿ. ವಿಜ್ಞಾನಕ್ಕೆ ಹತ್ತಿರವಾದ ಸಂಸ್ಕೃತಿ ನಮ್ಮ ದೇಶದ್ದು, ಇದನ್ನು ಸಹಿಸದ ಕೆಲವು ಸಂಕುಚಿತ ಮನಸ್ಸಿನವರು ದೇಶದ ಶಾಂತಿಯನ್ನು ಕದಡಲು ಹೊರಟಿದ್ದಾರೆ.

     ವಿಪ್ರ ಸಮಾಜ, ಬ್ರಾಹ್ಮಣ ಸಮಾಜ ಎಲ್ಲಾ ರಂಗದಲ್ಲಿಯೂ ಅಪಾರವಾದ ಕೊಡುಗೆ ನೀಡುತ್ತಿದೆ. ಸಮನ್ವಯತೆ ಇರುವ ಕಡೆ ಶಾಂತಿ ಸಮೃದ್ದಿಯಿರುತ್ತದೆ. ವಿಪ್ರ ಸಮಾಜದಲ್ಲಿ ಹುಟ್ಟಿದಾಕ್ಷಣ ಶ್ರೇಷ್ಟರಾಗುವುದಿಲ್ಲ. ಸಂಸ್ಕಾರ ಮಾನವೀತೆಯನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

    ತನಗಾಗಿ ಬದುಕುವವರು ವಿಪ್ರರಲ್ಲ. ವಿದ್ಯೆ, ಬುದ್ದಿ, ಆಧ್ಯಾತ್ಮದಲ್ಲಿ ಬ್ರಾಹ್ಮಣ್ಮತ್ವವಿರಬೇಕು. ಹೃದಯ ವೈಶಾಲ್ಯತೆ ಎಲ್ಲರಲ್ಲಿಯೂ ಇರಬೇಕು. ಪರರಿಗಾಗಿ ಬದುಕುವವರು ಮಾತ್ರ ವಿಪ್ರರು. ಹಾಗಾಗಿ ವಿಪ್ರರ ಮೇಲೆ ಮಹತ್ತರ ಜವಾಬ್ದಾರಿಯಿದೆ. ಬ್ರಾಹ್ಮಣರ ಸಂಘಕ್ಕೆ ನೂರು ವರ್ಷ ತುಂಬಿದೆ. ಕಾಲ ಉರುಳುತ್ತಿದೆ. ಅಷ್ಟೆ ಸವಾಲು ಸಮಸ್ಯೆಗಳನ್ನು ವಿಪ್ರ ಸಮಾಜ ಎದುರಿಸಬೇಕಾಗಿರುವುದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.

     ಆದಿಶಂಕರಾಚಾರ್ಯ, ಮಧ್ವಾಚಾರ್ಯರು, ರಾಮಾನುಜಚಾರ್ಯರು ಧ್ರುವತಾರೆಗಳಿದ್ದಂತೆ. ಸಮನ್ವತೆಯನ್ನು ಸಾರಿ ಹೇಳಿದ್ದಾರೆ. ಮೂಲತತ್ವಕ್ಕೆ ಭಂಗವಾಗದಂತೆ ನೋಡಿಕೊಳ್ಳದಿದ್ದರೆ ವಿಪ್ರತ್ವ ಉಳಿಯುವುದಿಲ್ಲ. ವಿಜ್ಞಾನ-ತಂತ್ರಜ್ಞಾನ ಬೆಳೆಯುತ್ತಿದೆ. ಜಗತ್ತು ಸಂಕುಚಿತಗೊಳ್ಳುತ್ತಿದೆ. ವಿಪ್ರರು ವೇದಶಾಸ್ತ್ರ ಓದುವುದು ಮೂರನೆ ದರ್ಜೆ ವೃತ್ತಿ ಎನ್ನುವಂತಾಗಿದೆ. ಅಭಿಮಾನ, ಸ್ವಾಭಿಮಾನವಿಲ್ಲದಿದ್ದರೆ ವೃತ್ತಿಯ ಪಾವಿತ್ರತೆ ಉಳಿಯುವುದಿಲ್ಲ. ಅದಕ್ಕಾಗಿ ಅಧ್ಯಯನ, ಅಧ್ಯಾಪನ ವಿಪ್ರರಿಗೆ ಬೇಕು ಎಂದು ಬ್ರಾಹ್ಮಣ ಸಮಾಜವನ್ನು ಜಾಗೃತಿಗೊಳಿಸಿದರು.

     ಬ್ರಾಹ್ಮಣ ಸಮಾಜದ ಶತಮಾನೋತ್ಸವ ಸಮಾರೋಪ ಸಮಾರಂಭದ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಉಡುಪಿಯ ಪೇಜಾವರ ಮಠದ ಪೀಠಾಧಿಪತಿಗಳಾದ ವಿಶ್ವೇಶತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿ ಬ್ರಾಹ್ಮಣ ಸಂಘ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಇತಿಹಾಸದಲ್ಲಿಯೇ ಮಹತ್ವದ ಹೆಮ್ಮೆಯ ಸಂಗತಿ. ಮನುಷ್ಯನಿಗೆ ವಯಸ್ಸು ಹೆಚ್ಚಾದಂತೆಲ್ಲಾ ಆತಂಕ ಜಾಸ್ತಿಯಾಗಿ ಮೃತ್ಯು ಸಮೀಪಿಸುತ್ತದೆ. ಅದೇ ಸಂಸ್ಥೆಗೆ ವಯಸ್ಸು ಹೆಚ್ಚಾದಷ್ಟು ಮೃತ್ಯುವಿನಿಂದ ದೂರವಾಗುತ್ತದೆ. ಸಮಾಜಕ್ಕೆ ಸೇವೆ ಸಲ್ಲಿಸಬೇಕಾದರೆ ಬ್ರಾಹ್ಮರಿಗೆ ಸತ್ವವಿಲ್ಲದಂತಾಗಬಾರದು. ಆದ್ದರಿಂದ ಅಂತಃಸತ್ವ ಗ್ರಹಿಸಿಕೊಳ್ಳಬೇಕು ಎಂದು ವಿಪ್ರ ಸಮಾಜಕ್ಕೆ ತಿಳಿಸಿದರು.

    ಜಪ. ಸಂಧ್ಯಾವಂದನೆಯಲ್ಲಿ ಪ್ರತಿಯೊಬ್ಬ ಬ್ರಾಹ್ಮಣನು ತೊಡಗಬೇಕು. ರಾಷ್ಟ್ರಗೀತೆ ದೇಶಕ್ಕೆ ಸಂಬಂಧಿಸಿದ್ದು, ವಿಶ್ವದ ಕಲ್ಯಾಣಕ್ಕೆ ಗಾಯತ್ರಿ ಮಂತ್ರ ಬೇಕು. ವಿಪ್ರರು ದುವ್ರ್ಯಸನಗಳಿಗೆ ಬಲಿಯಾಗದೆ ಸಂಘಟಿತರಾಗಿ ಶಂಕರಾಚಾರ್ಯ, ರಾಮಾನುಜಾಚಾರ್ಯ ಇವರುಗಳು ವಿಶ್ವಕ್ಕೆ ಬೆಳಕು ನೀಡಿದವರು. 60 ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ಇದೇ ರೀತಿ ಶೋಭಯಾತ್ರೆ ನಡೆದಿತ್ತು ಎಂದು ನೆನಪಿಸಿಕೊಂಡರು.
ಗೊಂದಲ, ಭಿನ್ನಾಭಿಪ್ರಾಯವಿರಬಹುದು.

      ಪರಸ್ಪರ ಕೆಸರೆರಚಾಟ ಬಿಟ್ಟು ತ್ರಿಮತಸ್ಥರು ಒಂದಾಗಿ ಇಲ್ಲದಿದ್ದರೆ ಸನಾತನ ಧರ್ಮ ಉಳಿಸುವುದು ಕಷ್ಟವಾಗುತ್ತದೆ. ಸಂಘಟಿತರಾಗಿ ಸಕಲ ಹಿಂದುಗಳಿಗೂ ಮಾರ್ಗದರ್ಶನ ನೀಡಿ ಎಂದು ತಿಳಿ ಹೇಳಿದರು.ಮೇಲುಕೋಟೆ ಆನಂದಾಶ್ರಮದ ಶಠಕೋಪ ರಾಮಾನುಜ ಜೀಯರ್ ಸಾನಿಧ್ಯ ವಹಿಸಿದ್ದರು. ಚಿತ್ರದುರ್ಗ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಸೇರಿದಂತೆ ಕಾರ್ಯದರ್ಶಿ, ನಿರ್ದೇಶಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link