ನಗರಸಭೆ ಚುನಾವಣೆ : ಒಂದೇ ದಿನ 38 ನಾಮಪತ್ರ ಸಲ್ಲಿಕೆ

ತುರುವೇಕೆರೆ:

      ಪಟ್ಟಣ ಪಂಚಾಯ್ತಿ ಚುನಾವಣೆ ನಾಮಪತ್ರ ಕಡೇ ದಿನವಾದ ಗುರುವಾರ ಅತೀ ಹೆಚ್ಚು 38 ನಾಮಪತ್ರಗಳು ಸಲ್ಲಿಕೆಯಾಗಿವೆ.
ಮೇ 10 ರಿಂದ ನಾಮಪತ್ರ ಸಲ್ಲಿಸಲು ಅವಕಾಶವಿದ್ದರು ಕಡೆಯ ದಿನವಾದ ಗುರುವಾರ ಜೆಡಿಎಸ್, ಕಾಂಗ್ರೇಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 14 ವಾರ್ಡ್‍ಗಳಿಗೆ ಜೆಡಿಎಸ್ 14, ಕಾಂಗ್ರೇಸ್ 14, ಬಿಜೆಪಿ 14, ಪಕ್ಷೇತರ 13 ನಾಮಪತ್ರ ಒಟ್ಟು 55 ನಾಮಪತ್ರಗಳು ಸಲ್ಲಿಕೆಯಾಗಿವೆ.

      ಗುರುವಾರ 38 ನಾಮಪತ್ರ ಸಲ್ಲಿಕೆಯಾಗಿದ್ದು 1 ನೇ ವಾರ್ಡ್‍ಗೆ ಕೆಂಪತಿಮ್ಮಯ್ಯ (ಬಿಜೆಪಿ) ರಂಗಸ್ವಾಮಿ (ಜೆಡಿಎಸ್), ಪದ್ಮಾವತಿ(ಪಕ್ಷೇತರ) 2 ನೇ ವಾರ್ಡ್‍ಗೆ ಭದ್ರಹುನ್ನಿಸಾ (ಬಿಜೆಪಿ) ಮೇಘನಾ(ಕಾಂಗ್ರೆಸ್) ರಿಯಾನಾಬೇಗಂ (ಜೆಡಿಎಸ್) 3 ನೇ ವಾರ್ಡ್‍ಗೆ ಸುಮಲತಾ (ಜೆಡಿಎಸ್) ಶಾಂತಮ್ಮ (ಕಾಂಗ್ರೇಸ್) 4 ನೇ ವಾರ್ಡ್‍ಗೆ ಎನ್.ನದೀಂಅಹಮದ್(ಜೆಡಿಎಸ್) ಅಸ್ಲಾಂಪಾಷ (ಕಾಂಗ್ರೇಸ್) 5 ನೇ ವಾರ್ಡ್‍ಗೆ ಕೆ.ಎಚ್.ವಿಶ್ವನಾಥ್(ಕಾಂಗ್ರೇಸ್) ಎಂ.ಎನ್.ಶರತ್(ಜೆಡಿಎಸ್) ಕಪಿನಿಗೌಡ (ಪಕ್ಷೇತರ) 6 ನೇ ವಾರ್ಡ್‍ಗೆ ರವೀಂದ್ರ (ಜೆಡಿಎಸ್) ಚಿದಾನಂದ್(ಬಿಜೆಪಿ) ಟಿ.ವಿ.ಶ್ರೀನಿವಾಸ್(ಕಾಂಗ್ರೇಸ್) ಚಿದಾನಂದ್(ಪಕ್ಷೇತರ) ಟಿ.ಎಂ. ಶಶಿಶೇಖರ್ (ಪಕ್ಷೇತರ) 7 ನೇ ವಾರ್ಡ್‍ಗೆ ಅಭ್ಜಲ್ (ಜೆಡಿಎಸ್) ಶೋಕತ್‍ಅಲಿ (ಕಾಂಗ್ರೇಸ್) 8 ನೇ ವಾರ್ಡ್‍ಗೆ ಜಿ.ಎಂ.ಸ್ವಪ್ನ(ಜೆಡಿಎಸ್) ಪುಟ್ಟನಂಜಮ್ಮ(ಕಾಂಗ್ರೇಸ್) 9 ನೇ ವಾರ್ಡ್‍ಗೆ ಮಧು(ಜೆಡಿಎಸ್) ಟಿ.ಎನ್.ಶಿವರಾಜು(ಕಾಂಗ್ರೆಸ್) ಗೋಪಾಲಕೃಷ್ಣ(ಪಕ್ಷೇತರ) ಅರೇಹಳ್ಳಿ ಜಗದೀಶ್(ಪಕ್ಷೇತರ) 10ನೇ ವಾರ್ಡ್‍ಗೆ ಗೋವಿಂದರಾಜು(ಜೆಡಿಎಸ್) ವೆಂಕಟೇಶ್(ಪಕ್ಷೇತರ) 11 ನೇ ವಾರ್ಡ್‍ಗೆ ಜಯಮ್ಮ (ಜೆಡಿಎಸ್) 12 ನೇ ವಾರ್ಡ್‍ಗೆ ಶಂಕರಪ್ಪ(ಕಾಂಗ್ರೇಸ್) ನಾಗರಾಜು(ಜೆಡಿಎಸ್) ಟಿ.ಕೆ.ಪ್ರಭಕರ್ (ಪಕ್ಷೇತರ) 13ನೇ ವಾರ್ಡ್‍ಗೆ ದಾಕ್ಷಯಿಣಿ(ಜೆಡಿಎಸ್) ಕಮಲಮ್ಮ(ಕಾಂಗ್ರೇಸ್) ಇಂದಿರಾ(ಪಕ್ಷೇತರ)ಕುರ್ಷಿದ್ ಬೇಗಂ(ಪಕ್ಷೇತರ) 14 ನೇ ವಾರ್ಡ್‍ಗೆ ಎನ್.ಆರ್.ಸುರೇಶ್ (ಜೆಡಿಎಸ್) ಶಶಿಶೇಖರ್(ಕಾಂಗ್ರೆಸ್) ನಾಮಪತ್ರ ಸಲ್ಲಿಸಿದ್ದಾರೆ.

ಜೆಡಿಎಸ್-ಕಾಂಗ್ರೇಸ್ ಮೆರವಣಿಗೆ:

       ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತ್ರತ್ವದಲ್ಲಿ ಗುರುವಾರ 14 ವಾರ್ಡ್‍ಗಳಿಗೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ಮೊದಲು ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಸೇರಿ ಪಟ್ಟಣದ ಜೆಡಿಎಸ್ ಕಚೇರಿಯಿಂದ ಪಟ್ಟಣದ ಉಡಸಲಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮೆರವಣಿಗೆ ನೆಡೆಸಿದರು. ಕಾಂಗ್ರೇಸ್ ಪಕ್ಷದಿಂದ ಮುಖಂಡ ಚೌದ್ರಿರಂಗಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಪ್ರಸನ್ನಕುಮಾರ್, ನಾಗೇಶ್ ನೇತ್ರತ್ವದಲ್ಲಿ ಪಟ್ಟಣದಲ್ಲಿ ಮೆರವಣಿಗೆ ನೆಡೆಸಿ ನಾಮಪತ್ರ ಸಲ್ಲಿಸಿದರು.

 ಚಿದಾನಂದ್ ಎರಡು ನಾಮಪತ್ರ:

  ಬಿಜೆಪಿಯ ದಲಿತ ಮುಖಂಡ ಚಿದಾನಂದ್ 6 ವಾರ್ಡ್‍ನಿಂದ ಸ್ಪರ್ದೇ ಬಯಸಿ ಬಿಜೆಪಿ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಎರಡು ನಾಮಪತ್ರ ಸಲ್ಲಿಸಿ ಕೂತೂಹಲ ಮೂಡಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap